‘ಪಾಲಿಕೆಯ ಎಲ್ಲ ವಿಭಾಗಗಳ ದಸ್ತಾವೇಜು ಡಿಜಿಟಲೀಕರಣ ಅಥವಾ ಗಣಕೀಕರಣ ಮಾಡಬೇಕು. ಎಲ್ಲ ವಿಭಾಗಗಳ ಮುಖ್ಯಸ್ಥರು ಆಯಾ ವಿಭಾಗದಲ್ಲಿ ಕಾಗದರಹಿತ ಕಾರ್ಯಕ್ರಮ ಅನುಷ್ಠಾನದ ಜವಾಬ್ದಾರಿ ಹೊಂದಿರಬೇಕು. ಕಾಗದರಹಿತ ಅರ್ಜಿ ವ್ಯವಸ್ಥೆ ಅನುಸರಿಸದ ದಾಖಲೆಗಳು, ಕಡತಗಳನ್ನು ತಿರಸ್ಕರಿಸಲಾಗುತ್ತದೆ. ಯಾವುದೇ ವಿಭಾಗ ಅಥವಾ ಅಧಿಕಾರಿ ತಾತ್ಕಾಲಿಕವಾಗಿ ಕಾಗದದ ಅರ್ಜಿ ಸಲ್ಲಿಸುವು ದಾದರೆ, ಆಯುಕ್ತರಿಂದ ಪೂರ್ವಾ ನುಮತಿ ಪಡೆಯಬೇಕು. ಈ ಕಾರ್ಯಕ್ರಮ ಅನುಷ್ಠಾನವು ಪಾಲಿಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ’ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.