ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ‘ಸ್ಮಾರ್ಟ್‌ ಸಿಟಿ’ಗೆ ಸುಡುಬೆಂಕಿಯಾದ ‘ಮಿಶ್ರ ಕಸ’

ಮೇಲ್ವಿಚಾರಣೆಯ ಕೊರತೆಯಿಂದ ಹೆಚ್ಚುತ್ತಿರುವ ಬ್ಲ್ಯಾಕ್‌ ಸ್ಪಾಟ್‌ಗಳು, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ
Published : 10 ಫೆಬ್ರುವರಿ 2025, 7:12 IST
Last Updated : 10 ಫೆಬ್ರುವರಿ 2025, 7:12 IST
ಫಾಲೋ ಮಾಡಿ
Comments
ಪೌರಕಾರ್ಮಿಕರು ಕಸವನ್ನು ಲಾರಿಗೆ ತುಂಬುತ್ತಿರುವುದು : ಪ್ರಜಾವಾಣಿ ಚಿತ್ರ
ಪೌರಕಾರ್ಮಿಕರು ಕಸವನ್ನು ಲಾರಿಗೆ ತುಂಬುತ್ತಿರುವುದು : ಪ್ರಜಾವಾಣಿ ಚಿತ್ರ
ಒಟ್ಟು ವಾಹನಗಳು;156 ಮನೆ ಮನೆ ಕಸ ಸಂಗ್ರಹಿಸುವ ವಾಹನ;107 ಟಿಪ್ಪರ್;30 ಕಾಂಪ್ಯಾಕ್ಟರ್;19, ಪ್ರತಿದಿನ ಸಂಗ್ರವಾಗುವ ಕಸ; 280–290 ಟನ್ ಹಸಿ ಕಸ;110 ಟನ್ ಮಿಶ್ರ ಕಸ;90 ಟನ್ ಒಣ ಕಸ;60 ಟನ್ ಎಳನೀರು ಚಿಪ್ಪು;20 ಟನ್ ಪ್ರತಿ ಶುಕ್ರವಾರ ಸಂಗ್ರಹವಾಗುವ ಒಣ ಕಸ;180 ಟನ್
‘ಸ್ಯಾನಿಟರಿ ಕಸ: ವೈಜ್ಞಾನಿಕ ವಿಲೇವಾರಿ’
ಜನರು ಪ್ರಸ್ತುತ ಒಣ ಕಸದೊಂದಿಗೆ ಸ್ಯಾನಿಟರಿ ವೇಸ್ಟ್‌ ಅನ್ನು ಸೇರಿಸಿ ಕೊಡುತ್ತಿದ್ದಾರೆ. ಸ್ಯಾನಿಟರಿ ಕಸದ ವೈಜ್ಞಾನಿಕ ವಿಲೇವಾರಿಗೆ ಯೋಚಿಸಲಾಗಿದೆ. ಈ ಸಂಬಂಧ ಎಂಟೊ ಪ್ರೊಟೀನ್ ಕಂಪನಿ ಆಸಕ್ತಿ ತೋರಿದ್ದು ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ತಿಳಿಸಲಾಗಿದೆ. ವರದಿ ಆಧರಿಸಿ ಈ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು. ಸ್ಯಾನಿಟರಿ ವೇಸ್ಟ್‌ ಅನ್ನು ಪ್ರತ್ಯೇಕಿಸಿ ನೀಡುವಂತೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಮುಖ್ಯಸ್ಥರನ್ನು ಭೇಟಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.
ಕಸ ಸಂಗ್ರಹ: ಮಾದರಿ ಕಾರ್ಯ
- ‘ನಮ್ಮ ಊರು- ನಮ್ಮ ಹೆಮ್ಮೆ’ ಘೋಷವಾಕ್ಯದ ಅಡಿಯಲ್ಲಿ ಜಪ್ಪುವಿನ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮೂರು ವಾರ್ಡ್‌ಗಳಲ್ಲಿ ಮಾದರಿ ಕಾರ್ಯ ನಡೆಸುತ್ತಿದೆ.  ಮಂಗಳಾದೇವಿ ಬೋಳಾರ ಹೊಯ್ಗೆಬಜಾರ್ ಈ ಮೂರು ವಾರ್ಡ್‌ಗಳಲ್ಲಿ 2022ರಿಂದ ಸ್ವಚ್ಛತೆ ಜಾಗೃತಿ ಅಭಿಯಾನ ನಡೆಸುತ್ತಿರುವ ಟ್ರಸ್ಟ್‌ ಇದಕ್ಕಾಗಿ ಸಿಬ್ಬಂದಿ ನೇಮಿಸಿಕೊಂಡು ನಿರಂತರ ನಿಗಾ ವಹಿಸುತ್ತಿದೆ. ‘ಹಸಿ ಕಸ– ಒಣ ಕಸ ಪ್ರತ್ಯೇಕಿಸಿ ಕೊಡುವುದು ದಾರಿ ಬದಿಯಲ್ಲಿ ಕಸ ಇಡದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸುಮಾರು 5800ರಷ್ಟು ಮನೆಗಳನ್ನು ಸಂಪರ್ಕಿಸಿ ಅರಿವು ಮೂಡಿಸಲಾಗಿದೆ. ನೇಮಕ ಮಾಡಿಕೊಂಡಿರುವ ಸಿಬ್ಬಂದಿಗೆ ಟ್ರಸ್ಟ್ ಮೂಲಕವೇ ಗೌರವಧನ ಪಾವತಿಸಲಾಗುತ್ತದೆ. ನಮ್ಮ ಸಿಬ್ಬಂದಿ ಪ್ರತಿನಿತ್ಯ ಮನೆಗಳಿಗೆ ಭೇಟಿ ನೀಡಿ ಜನರಿಗೆ ತಿಳಿ ಹೇಳುತ್ತಾರೆ’ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಉಮಾನಾಥ್ ಕೋಟೆಕಾರ್. ‘ಈ ಮೊದಲು ಸುಮಾರು 500 ಮನೆಗಳಿಂದ ಮಿಶ್ರ ಕಸ ಬರುತ್ತದೆ ಎಂಬ ದೂರು ಇತ್ತು. ನಮ್ಮ ಸಿಬ್ಬಂದಿ ಜನರಲ್ಲಿ ಅರಿವು ಮೂಡಿಸಿದ ಮೇಲೆ ಅಲ್ಲಿನ ನಿವಾಸಿಗಳು ಕಸವನ್ನು ಪ್ರತ್ಯೇಕಿಸಿ ವಾಹನಕ್ಕೆ ತಂದು ಕೊಡಲು ಪ್ರಾರಂಭಿಸಿದ್ದಾರೆ. ನಿರಂತರ ನಿಗಾ ವಹಿಸಿದರೆ ಇವೆಲ್ಲ ಕಷ್ಟದ ಸಂಗತಿಗಳಲ್ಲ. ಪ್ರಸ್ತುತ ಶೇ 90ರಷ್ಟು ಮನೆಗಳವರು ಕಸವನ್ನು ಪ್ರತ್ಯೇಕಿಸಿ ಕೊಡುತ್ತಾರೆ. ಮಹಾನಗರ ಪಾಲಿಕೆ ನಮ್ಮೊಂದಿಗೆ ಕೈ ಜೋಡಿಸಿದರೆ ಶೇ 100ರ ಸಾಧನೆ ಸಾಧ್ಯವಾಗಿಸಬಹುದು. ಪಾಲಿಕೆಯಿಂದ ನಾವು ಇನ್ನಷ್ಟು ಸಹಕಾರ ನಿರೀಕ್ಷಿಸಿದ್ದೇವೆ’ ಎಂದು ಅವರು ತಿಳಿಸಿದರು. ತಿಂಗಳಲ್ಲಿ ಒಂದು ದಿನ ಗುಜ್ಜರ ಕೆರೆ ಸುತ್ತಲಿನ ಪ್ರದೇಶದಲ್ಲಿ ಶ್ರಮದಾನ ನಡೆಸಿ ಸ್ವಚ್ಛ ಮಾಡುವುದು ಕೂಡ ಟ್ರಸ್ಟ್‌ನ ಚಟುವಟಿಕೆಯ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT