<p>ಬಂಟ್ವಾಳ: ಇಲ್ಲಿನ ಲೊರೆಟ್ಟೊ ಮಾತಾ ಚರ್ಚ್ನಲ್ಲಿ ಮೇರಿ ಕನ್ಯಾ ಮಾತೆ ಜನ್ಮ ದಿನಾಚರಣೆ ಅಂಗವಾಗಿ ಕ್ರೈಸ್ತರು ಸಂಭ್ರಮದಿಂದ ತೆನೆಹಬ್ಬ (ಮೊಂತಿ ಫೆಸ್ತ್ ) ಆಚರಿಸಿಕೊಂಡರು.</p>.<p>ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಮುಖ್ಯಶಿಕ್ಷಕ ಜೇಸನ್ ಮೋನಿಸ್, ಪ್ರಧಾನ ಧರ್ಮಗುರು ಪ್ರತಾಪ್ ನಾಯಕ್ ಬಲಿಪೂಜೆ ನೆರವೇರಿಸಿದರು.</p>.<p>9 ದಿನಗಳಿಂದ ನಡೆದ ಮಾತೆ ಮರಿಯಮ್ಮನ ‘ನೊವೆನಾ ಪ್ರಾರ್ಥನೆ’ಗೆ ಹೂ ಸಮರ್ಪಿಸಿದ ಮಕ್ಕಳಿಗೆ ಸಿಹಿತಿಂಡಿ, ಭಕ್ತರಿಗೆ ಕಬ್ಬು ಮತ್ತು ಭತ್ತದ ತೆನೆ ವಿತರಿಸಲಾಯಿತು.</p>.<p>ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ಮೆರವಣಿಗೆ ಸಹಿತ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಶಿಕ್ಷಣ ನಿರ್ದೇಶಕ ಧರ್ಮಗುರು ವಿಜಯ್ ಮಚಾದೊ ಬಲಿಪೂಜೆ ನೆರವೇರಿಸಿದರು.</p>.<p>ಭಕ್ತರಿಗೆ ಭತ್ತದ ತೆನೆ, ಕಬ್ಬು, ಪಾಯಸ, ಅತಿ ಹೆಚ್ಚು ಹೂ ತಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಧರ್ಮಗುರು ಫ್ರೆಡ್ರಿಕ್ ಮೊಂತೆರೊ ಶುಭ ಹಾರೈಸಿದರು. ಧರ್ಮಗುರು ಪ್ರಶಾಂತ್ ಪಿಂಟೊ, ಚರ್ಚ್ ಉಪಾಧ್ಯಕ್ಷ ನವೀನ್ ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನಾ ಇದ್ದರು.</p>.<p>ತಾಲ್ಲೂಕಿನ ಅಮ್ಟೂರು, ಫರಂಗಿಪೇಟೆ, ಮಾಣಿ, ಶಂಭೂರು, ಕರಿಮಲೆ, ಸಿದ್ಧಕಟ್ಟೆ, ನೈನಾಡು, ವಗ್ಗ ಚರ್ಚ್ಗಳಲ್ಲೂ ಹಬ್ಬ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಂಟ್ವಾಳ: ಇಲ್ಲಿನ ಲೊರೆಟ್ಟೊ ಮಾತಾ ಚರ್ಚ್ನಲ್ಲಿ ಮೇರಿ ಕನ್ಯಾ ಮಾತೆ ಜನ್ಮ ದಿನಾಚರಣೆ ಅಂಗವಾಗಿ ಕ್ರೈಸ್ತರು ಸಂಭ್ರಮದಿಂದ ತೆನೆಹಬ್ಬ (ಮೊಂತಿ ಫೆಸ್ತ್ ) ಆಚರಿಸಿಕೊಂಡರು.</p>.<p>ಧರ್ಮಗುರು ಫ್ರಾನ್ಸಿಸ್ ಕ್ರಾಸ್ತ, ಮುಖ್ಯಶಿಕ್ಷಕ ಜೇಸನ್ ಮೋನಿಸ್, ಪ್ರಧಾನ ಧರ್ಮಗುರು ಪ್ರತಾಪ್ ನಾಯಕ್ ಬಲಿಪೂಜೆ ನೆರವೇರಿಸಿದರು.</p>.<p>9 ದಿನಗಳಿಂದ ನಡೆದ ಮಾತೆ ಮರಿಯಮ್ಮನ ‘ನೊವೆನಾ ಪ್ರಾರ್ಥನೆ’ಗೆ ಹೂ ಸಮರ್ಪಿಸಿದ ಮಕ್ಕಳಿಗೆ ಸಿಹಿತಿಂಡಿ, ಭಕ್ತರಿಗೆ ಕಬ್ಬು ಮತ್ತು ಭತ್ತದ ತೆನೆ ವಿತರಿಸಲಾಯಿತು.</p>.<p>ಅಲ್ಲಿಪಾದೆ ಸಂತ ಅಂತೋನಿ ದೇವಾಲಯದಲ್ಲಿ ಮೆರವಣಿಗೆ ಸಹಿತ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಶಿಕ್ಷಣ ನಿರ್ದೇಶಕ ಧರ್ಮಗುರು ವಿಜಯ್ ಮಚಾದೊ ಬಲಿಪೂಜೆ ನೆರವೇರಿಸಿದರು.</p>.<p>ಭಕ್ತರಿಗೆ ಭತ್ತದ ತೆನೆ, ಕಬ್ಬು, ಪಾಯಸ, ಅತಿ ಹೆಚ್ಚು ಹೂ ತಂದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಧರ್ಮಗುರು ಫ್ರೆಡ್ರಿಕ್ ಮೊಂತೆರೊ ಶುಭ ಹಾರೈಸಿದರು. ಧರ್ಮಗುರು ಪ್ರಶಾಂತ್ ಪಿಂಟೊ, ಚರ್ಚ್ ಉಪಾಧ್ಯಕ್ಷ ನವೀನ್ ಮೊರಾಸ್, ಕಾರ್ಯದರ್ಶಿ ಕಿರಣ್ ನೊರೊನಾ ಇದ್ದರು.</p>.<p>ತಾಲ್ಲೂಕಿನ ಅಮ್ಟೂರು, ಫರಂಗಿಪೇಟೆ, ಮಾಣಿ, ಶಂಭೂರು, ಕರಿಮಲೆ, ಸಿದ್ಧಕಟ್ಟೆ, ನೈನಾಡು, ವಗ್ಗ ಚರ್ಚ್ಗಳಲ್ಲೂ ಹಬ್ಬ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>