ಮಂಗಳೂರು: ಕೋವಿಡ್ ಸಂಕಷ್ಟದ ನಡುವೆ ರಾಜ್ಯದ ಹಲವೆಡೆ ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಹಣ್ಣು, ತರಕಾರಿಗಳನ್ನು ಬೀದಿಗೆ ಎಸೆಯುತ್ತಿದ್ದು, ಅಂತಹ ರೈತರಿಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಮೂಲಕ ಅವರಿಗೆ ಸಹಾಯ ನೀಡಲು ‘ಪನಮಾ ನೇಚರ್ ಫ್ರೆಶ್’ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಮುಂದಾಗಿದ್ದಾರೆ.