‘ನಾನು ಪ್ರತಿನಿತ್ಯ 1.30ಕ್ಕೆ ಊಟಕ್ಕೆ ಹೋಗಿ 3.30ಕ್ಕೆ ವಾಪಸ್ ಬರುತ್ತೇನೆ. ಇವತ್ತು ಕೂಡ ವಾಪಸ್ ಬಂದು, ಅಂಗಡಿ ಎದುರು ಬೈಕ್ ಅಡ್ಡ ಇದೆ, ಅದನ್ನು ತೆಗೆದಿಡು ಎಂದು ಹೇಳಲು ಕಾಲ್ ಮಾಡಿದಾಗ, ರಾಘವೇಂದ್ರ ಅವರು ನನಗೆ ಚೂರಿ ಹಾಕಿದ್ದಾರೆ ಏಳಲು ಆಗದು ಎಂದು ಹೇಳುವಷ್ಟರಲ್ಲಿ ಕಾಲ್ ಕಟ್ ಆಗಿದೆ. ತಕ್ಷಣ ಕಾರನ್ನು ಅಲ್ಲಿಯೇ ನಿಲ್ಲಿಸಿ ಒಳಗೆ ಹೋಗುವಾಗ, ಬಾಗಿಲು ತೆಗೆಯುತ್ತಿದ್ದಂತೆ, ಒಳಗಿದ್ದ ವ್ಯಕ್ತಿ ಹೊರಬಿದ್ದಿದ್ದಾನೆ’ ಎಂದು ಮಾಲೀಕ ಕೇಶವ ಆಚಾರಿ ತಿಳಿಸಿದರು.