‘ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ದಂತೆ ಸಮೀಕ್ಷೆ ನಡೆಸಲು ಕೇಂದ್ರದ ತಂಡವೊಂದು ಬರಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯ ಮೂಲಕ ಸುಮಾರು ₹ 80 ಕೋಟಿಯ ಪರಿಹಾರದ ಸಮೀಕ್ಷೆ ಗಳು ಹೋಗಿದೆ. ಮತ್ತೆ ಸುಮಾರು ₹ 125 ಕೋಟಿಯನ್ನು ಲೋಕೋಪಯೋಗಿ, ಗ್ರಾಮ ಪಂಚಾಯಿತಿ ರಸ್ತೆಗಳು, ಮನೆ ಕುಸಿತ ಘಟನೆಗಳು, ಸಮುದ್ರ ಕೊರೆತ ಪರಿಹಾರದ ಮೊತ್ತ ಇಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಒಟ್ಟಾರೆ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಗರಿಷ್ಠ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು.