ಈ ಹಿಂದೆ ಪುತ್ತೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವಠಾರದ ಅಶ್ವತ್ಥಕಟ್ಟೆಯ ಬದಿಯಲ್ಲಿದ್ದ ಗಾಂಧಿ ಪ್ರತಿಮೆಯನ್ನು ಆ ಬಳಿಕ ಅಶ್ವತ್ಥಕಟ್ಟೆಯ ಸಮೀಪ ಗಾಂಧಿ ಮಂಟಪ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಭವ್ಯವಾದ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಅತ್ಯಾಧುನಿಕ (ಐಟೆಕ್) ಬಸ್ ನಿಲ್ದಾಣದ ನಿರ್ಮಾಣದ ವೇಳೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಗಾಂಧಿಮಂಟಪ ಹಾಗೂ ಅಶ್ವತ್ಥಕಟ್ಟೆ ಬದಿ ತನಕವೂ ಮಣ್ಣು ಅಗೆದ ಪರಿಣಾಮವಾಗಿ ಅಶ್ವತ್ಥಕಟ್ಟೆ ಮತ್ತು ಗಾಂಧಿಮಂಟಪ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ನಂತರದ ದಿನದಲ್ಲಿ ಅಶ್ವತ್ಥಕಟ್ಟೆ ಮತ್ತು ಗಾಂಧಿಕಟ್ಟೆಯನ್ನು ರಸ್ತೆಗೆ ಸಮನಾಂತರವಾಗಿ ತಗ್ಗಿಸಿ ನವೀಕರಣಗೊಳಿಸಿ, ಮತ್ತೆ ಗಾಂಧಿ ಪ್ರತಿಮೆಯನ್ನು ಅಲ್ಲಿ ಮರುಸ್ಥಾಪಿಸಿತ್ತು. ಆದರೆ, ಇದೀಗ ಪ್ರತಿಮೆಯನ್ನೇ ವಿಕೃತಗೊಳಿಸುವ ಕೃತ್ಯ ನಡೆದಿದೆ.