ಕಾಂಗ್ರೆಸ್ ಕೊಳಕು ರಾಜಕೀಯ: ‘ಚೂರಿ ಇರಿತಕ್ಕೆ ಒಳಗಾದ ಇಬ್ಬರೂ ಬಿಲ್ಲವ ಸಮಾಜದವರು. ಯಾವ ಕಾಂಗ್ರೆಸ್ ತನ್ನ ಚುನಾವಣಾ ರಾಜಕೀಯದಲ್ಲಿ ಬಿಲ್ಲವರನ್ನು ಸಂಘ ಪರಿವಾರದ ವಿರುದ್ಧ ಎತ್ತಿಕಟ್ಟುವ ಮೂಲಕ ಚುನಾವಣೆಯಲ್ಲಿ ಮತವನ್ನು ಸೆಳೆಯಲು ಯತ್ನಿಸಿತ್ತೋ, ಇವತ್ತು ಅದೇ ಕಾಂಗ್ರೆಸ್ ಬಿಲ್ಲವರ ರಕ್ಷಣೆಗೆ ನಿರಾಸಕ್ತಿ ತೋರಿಸಿದೆ. ಮತಾಂಧರ ಪರವಾಗಿ ನಿಂತುಕೊಂಡಿದೆ. ಇದು ಅವರ ಕೊಳಕು ರಾಜಕೀಯಕ್ಕೆ ಹಿಡಿದ ಕೈಗನ್ನಡಿ’ ಎಂದು ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ.