<p><strong>ಮಂಗಳೂರು:</strong> ಕೋವಿಡ್–19 ನಿಂದ ಆರ್ಥಿಕತೆ ಕುಸಿಯುತ್ತಿದ್ದು, ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಸುಮಾರು ₹556 ಕೋಟಿ ಮೊತ್ತದ ನಾಲ್ಕು ಕೈಗಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ 4,200 ಉದ್ಯೋಗ ಸೃಷ್ಟಿಯ ಅವಕಾಶ ಸೃಷ್ಟಿಯಾಗಲಿದೆ.</p>.<p>ದೇಶದ ಅತಿ ದೊಡ್ಡ ಸಾಫ್ಟ್ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಕ್ಷಿಣ ಕನ್ನಡದ ಮೂಲ್ಕಿ ಬಳಿಯ ಕಾರ್ನಾಡ್ನಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲಿದೆ. 38 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಯೋಜನೆಗೆ ಟಿಸಿಎಸ್ ₹500 ಕೋಟಿ ಬಂಡವಾಳ ಹೂಡಲಿದೆ.</p>.<p>‘ಉಡುಪಿಯಲ್ಲಿ ಕಾರ್ಕಳ ತಾಲ್ಲೂಕಿನ ಮುಡಾರುವಿನಲ್ಲಿ ₹27 ಕೋಟಿ ವೆಚ್ಚದಲ್ಲಿ ಫುಡ್ಪಾರ್ಕ್ ತಲೆ ಎತ್ತಲಿದೆ. ಈಗಾಗಲೇ ಖರೀದಿಸಿರುವ ಸುಮಾರು 18 ಎಕರೆ ಜಾಗದಲ್ಲಿ ಫುಡ್ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಉಡುಪಿ ಫುಡ್ಪಾರ್ಕ್ನ ಪಾಲುದಾರ ಜಾನ್ ರಿಚರ್ಡ್ ದಸಿಲ್ ತಿಳಿಸಿದ್ದಾರೆ.</p>.<p>‘ಈ ಪಾರ್ಕ್ನಲ್ಲಿ ಆಹಾರಕ್ಕೆ ಸಂಬಂಧಿಸಿದ ಉದ್ಯಮಿಗಳಿಗೆ ಬಾಡಿಗೆಯ ಆಧಾರದಲ್ಲಿ ಜಾಗ ನೀಡಲಾಗುವುದು. ಏಳು ತಿಂಗಳಲ್ಲಿ ಈ ಪಾರ್ಕ್ ಆರಂಭವಾಗುವ ಸಾಧ್ಯತೆ ಇದೆ. ಇಲ್ಲಿ ನಮ್ಮದೇ ಆದ ಗೇರು ಸಂಸ್ಕರಣೆ ಹಾಗೂ ಅದಕ್ಕೆ ಸಂಬಂಧಿಸಿದ 3 ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ದಸಿಲ್ ಹೇಳಿದ್ದಾರೆ.</p>.<p>ಫಿನ್ಪವರ್ ಏರ್ಕೋನ್ ಸಿಸ್ಟಮ್ಸ್ ಸಂಸ್ಥೆಯು ಏರ್ ಕಂಡಿಷನ್ ಯಂತ್ರಗಳ ಘಟಕವನ್ನು ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಿದೆ. ಸುಮಾರು ₹17 ಕೋಟಿ ಹೂಡಿಕೆಯ ಈ ಘಟಕದಲ್ಲಿ 120 ಜನರಿಗೆ ಉದ್ಯೋಗ ದೊರೆಯಲಿದೆ. ಸದ್ಯಕ್ಕೆ ಈ ಕಂಪನಿಯು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಘಟಕ ಹೊಂದಿದ್ದು, ಗಂಜಿಮಠದಲ್ಲಿ ಇದರ ವಿಸ್ತರಣೆ ಮಾಡಲಾಗುತ್ತಿದೆ.</p>.<p>‘ಸದ್ಯಕ್ಕೆ ಸರ್ಕಾರದಿಂದ 3 ಎಕರೆ ಜಾಗವನ್ನು ನೀಡಲಾಗಿದೆ. ಘಟಕ ಆರಂಭಿಸಲು ಕನಿಷ್ಠ 5 ಎಕರೆ ಜಾಗವಾದರೂ ಬೇಕು. ಘಟಕಕ್ಕೆ ಅಗತ್ಯವಿರುವ ಜಮೀನು ದೊರೆತ ನಂತರ ಘಟಕದ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಉದಯ್ ಶೆಣೈ ತಿಳಿಸಿದ್ದಾರೆ.<br /><br />ಇದರ ಜತೆಗೆ ರೆಡ್ ಸ್ಟೋನ್ ಟ್ರೇಡಿಂಗ್ ಕಾರ್ಪೊರೇಷನ್ ಸಾಲಿಡ್ ಬ್ಲಾಕ್ ಹಾಗೂ ಹಾಲೋ ಬ್ಲಾಕ್ಗಳ ಘಟಕವನ್ನು ಕೈರಂಗಳ ಗ್ರಾಮದ 9 ಎಕರೆ ಜಾಗದಲ್ಲಿ ನಿರ್ಮಿಸಲು ಮುಂದೆ ಬಂದಿದೆ. ಇದಕ್ಕಾಗಿ ₹ 17 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, 68 ಜನರಿಗೆ ಉದ್ಯೋಗ ದೊರೆಯಲಿದೆ.</p>.<p>*<br />ತುಳುನಾಡಿನಲ್ಲಿ ಟಿಸಿಎಸ್ ಹೊಸ ಕಚೇರಿ ತೆರೆಯಲಿದ್ದು, ಇದರಿಂದ 4 ಸಾವಿರ ಉದ್ಯೋಗಗಳನ್ನು ಪಡೆಯಬಹುದು. ಇದು ಮಂಗಳೂರಿಗರಿಗೆ ಶುಭ ಸುದ್ದಿ.<br /><em><strong>-ವೇದವ್ಯಾಸ ಕಾಮತ್, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಕೋವಿಡ್–19 ನಿಂದ ಆರ್ಥಿಕತೆ ಕುಸಿಯುತ್ತಿದ್ದು, ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಸುಮಾರು ₹556 ಕೋಟಿ ಮೊತ್ತದ ನಾಲ್ಕು ಕೈಗಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ 4,200 ಉದ್ಯೋಗ ಸೃಷ್ಟಿಯ ಅವಕಾಶ ಸೃಷ್ಟಿಯಾಗಲಿದೆ.</p>.<p>ದೇಶದ ಅತಿ ದೊಡ್ಡ ಸಾಫ್ಟ್ವೇರ್ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ದಕ್ಷಿಣ ಕನ್ನಡದ ಮೂಲ್ಕಿ ಬಳಿಯ ಕಾರ್ನಾಡ್ನಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲಿದೆ. 38 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಯೋಜನೆಗೆ ಟಿಸಿಎಸ್ ₹500 ಕೋಟಿ ಬಂಡವಾಳ ಹೂಡಲಿದೆ.</p>.<p>‘ಉಡುಪಿಯಲ್ಲಿ ಕಾರ್ಕಳ ತಾಲ್ಲೂಕಿನ ಮುಡಾರುವಿನಲ್ಲಿ ₹27 ಕೋಟಿ ವೆಚ್ಚದಲ್ಲಿ ಫುಡ್ಪಾರ್ಕ್ ತಲೆ ಎತ್ತಲಿದೆ. ಈಗಾಗಲೇ ಖರೀದಿಸಿರುವ ಸುಮಾರು 18 ಎಕರೆ ಜಾಗದಲ್ಲಿ ಫುಡ್ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಉಡುಪಿ ಫುಡ್ಪಾರ್ಕ್ನ ಪಾಲುದಾರ ಜಾನ್ ರಿಚರ್ಡ್ ದಸಿಲ್ ತಿಳಿಸಿದ್ದಾರೆ.</p>.<p>‘ಈ ಪಾರ್ಕ್ನಲ್ಲಿ ಆಹಾರಕ್ಕೆ ಸಂಬಂಧಿಸಿದ ಉದ್ಯಮಿಗಳಿಗೆ ಬಾಡಿಗೆಯ ಆಧಾರದಲ್ಲಿ ಜಾಗ ನೀಡಲಾಗುವುದು. ಏಳು ತಿಂಗಳಲ್ಲಿ ಈ ಪಾರ್ಕ್ ಆರಂಭವಾಗುವ ಸಾಧ್ಯತೆ ಇದೆ. ಇಲ್ಲಿ ನಮ್ಮದೇ ಆದ ಗೇರು ಸಂಸ್ಕರಣೆ ಹಾಗೂ ಅದಕ್ಕೆ ಸಂಬಂಧಿಸಿದ 3 ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ದಸಿಲ್ ಹೇಳಿದ್ದಾರೆ.</p>.<p>ಫಿನ್ಪವರ್ ಏರ್ಕೋನ್ ಸಿಸ್ಟಮ್ಸ್ ಸಂಸ್ಥೆಯು ಏರ್ ಕಂಡಿಷನ್ ಯಂತ್ರಗಳ ಘಟಕವನ್ನು ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಿದೆ. ಸುಮಾರು ₹17 ಕೋಟಿ ಹೂಡಿಕೆಯ ಈ ಘಟಕದಲ್ಲಿ 120 ಜನರಿಗೆ ಉದ್ಯೋಗ ದೊರೆಯಲಿದೆ. ಸದ್ಯಕ್ಕೆ ಈ ಕಂಪನಿಯು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಘಟಕ ಹೊಂದಿದ್ದು, ಗಂಜಿಮಠದಲ್ಲಿ ಇದರ ವಿಸ್ತರಣೆ ಮಾಡಲಾಗುತ್ತಿದೆ.</p>.<p>‘ಸದ್ಯಕ್ಕೆ ಸರ್ಕಾರದಿಂದ 3 ಎಕರೆ ಜಾಗವನ್ನು ನೀಡಲಾಗಿದೆ. ಘಟಕ ಆರಂಭಿಸಲು ಕನಿಷ್ಠ 5 ಎಕರೆ ಜಾಗವಾದರೂ ಬೇಕು. ಘಟಕಕ್ಕೆ ಅಗತ್ಯವಿರುವ ಜಮೀನು ದೊರೆತ ನಂತರ ಘಟಕದ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಂಸ್ಥೆಯ ಎಚ್ಆರ್ ಮ್ಯಾನೇಜರ್ ಉದಯ್ ಶೆಣೈ ತಿಳಿಸಿದ್ದಾರೆ.<br /><br />ಇದರ ಜತೆಗೆ ರೆಡ್ ಸ್ಟೋನ್ ಟ್ರೇಡಿಂಗ್ ಕಾರ್ಪೊರೇಷನ್ ಸಾಲಿಡ್ ಬ್ಲಾಕ್ ಹಾಗೂ ಹಾಲೋ ಬ್ಲಾಕ್ಗಳ ಘಟಕವನ್ನು ಕೈರಂಗಳ ಗ್ರಾಮದ 9 ಎಕರೆ ಜಾಗದಲ್ಲಿ ನಿರ್ಮಿಸಲು ಮುಂದೆ ಬಂದಿದೆ. ಇದಕ್ಕಾಗಿ ₹ 17 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, 68 ಜನರಿಗೆ ಉದ್ಯೋಗ ದೊರೆಯಲಿದೆ.</p>.<p>*<br />ತುಳುನಾಡಿನಲ್ಲಿ ಟಿಸಿಎಸ್ ಹೊಸ ಕಚೇರಿ ತೆರೆಯಲಿದ್ದು, ಇದರಿಂದ 4 ಸಾವಿರ ಉದ್ಯೋಗಗಳನ್ನು ಪಡೆಯಬಹುದು. ಇದು ಮಂಗಳೂರಿಗರಿಗೆ ಶುಭ ಸುದ್ದಿ.<br /><em><strong>-ವೇದವ್ಯಾಸ ಕಾಮತ್, ಶಾಸಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>