<p><strong>ಪಡುಬಿದ್ರಿ:</strong> ಅನಿಯಮಿತ ವಿದ್ಯುತ್, ಮೆಸ್ಕಾಂ ಸಿಬ್ಬಂದಿ ಅನುಚಿತ ವರ್ತನೆಯಿಂದ ಬೇಸತ್ತ ಪಡುಬಿದ್ರಿ ಸುತ್ತಮುತ್ತಲ ನಾಗರಿಕರು ಸೋಮವಾರ ಬೆಳಿಗ್ಗೆ ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.<br /> <br /> ಮಳೆಗಾಲ ಆರಂಭಗೊಂಡಂದಿನಿಂದ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರಿ, ಫಲಿಮಾರು, ಎರ್ಮಾಳು ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ಈ ಬಗ್ಗೆ ಮೆಸ್ಕಾಂಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಮೆಸ್ಕಾಂ ಕಚೇರಿಗೆ ದೂರವಾಣಿ ಮಾಡದರೂ ಸೂಕ್ತವಾಗಿ ಸ್ಪಂದಿಸುತಿಲ್ಲ. ಮೆಸ್ಕಾಂ ಸಿಬ್ಬಂದಿ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಹೆಜಮಾಡಿ ಹಾಗೂ ಪಾದೆಬೆಟ್ಟು ಗ್ರಾಮಸ್ಥರು ಸೇರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.<br /> <br /> ಹೆಜಮಾಡಿ ಗ್ರಾಮದಾದ್ಯಂತ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ರಿಕ್ಷಾ ಬಂದ್ ನಡೆಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ವಿರುದ್ಧ ಘೋಷಣೆ ಕೂಗಿದರು.<br /> <br /> 700ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಮಸ್ಯೆ ಪರಿಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಜಡಿಯುವ ಬೆದರಿಕೆ ಹಾಕಿದರು.<br /> <br /> ಮೆಸ್ಕಾಂ ಎಇಇ ಸಂತೋಷ್ ನಾಯಕ್, ಮುಂದಿನ 2ದಿನದೊಳಗೆ ಈ ಭಾಗದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿ ಬುಧವಾರ ಸಂಜೆಯೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.<br /> <br /> ಈ ಹಿಂದೆ ಹೆಜಮಾಡಿಗೆ ಮೂಲ್ಕಿ ಫೀಡರ್ನಿಂದ ವಿದ್ಯುತ್ ಸಮಸ್ಯೆಯಗುತ್ತಿದ್ದು, ಇದೀಗ ನಂದಿಕೂರು ಫೀಡರ್ಗೆ ಬದಲಾಯಿಸಲಾಗಿದೆ. ಅಂದಿನಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಹೆಜಮಾಡಿಗೆ ಮರಳಿ ಮೂಲ್ಕಿ ಫೀಡರ್ನಿಂದ ವಿದ್ಯುತ್ ವಿತರಣೆ ಮಾಡಬೇಕೆಂದು ಗ್ರಾಮಸ್ಥರು ಈ ಸಂದರ್ಭ ಆಗ್ರಹಿಸಿದರು.<br /> <br /> ಸಿಬ್ಬಂದಿಗೆ ತರಾಟೆ: ಮೆಸ್ಕಾಂ ಎಇಇ ಸಂತೋಷ್ ನಾಯಕ್ ಮಾತನಾಡಿ `ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಲ್ಬಣಗೊಂಡಿದ್ದು, ಬೇರೆಡೆಯಿಂದ ಸಿಬ್ಬಂದಿಯನ್ನು ಕರೆಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುವುದು. ಅಲ್ಲದೆ ಕೆಲವೊಂದು ಕಡೆ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು. ಪಡುಬಿದ್ರಿ ವಿಭಾಗದ ಎಲ್ಲ ಸಿಬ್ಬಂದಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಹಗಲು ರಾತ್ರಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು. <br /> <br /> ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಪಡುಬಿದ್ರಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್ ಪಡುಬಿದ್ರಿ, ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ, ಗಣೇಶ್ ಹೆಜ್ಮಾಡಿ, ಸುಭಾಸ್ ಜೆ. ಸಾಲ್ಯಾನ್, ಸೂಫಿ ಹೆಜ್ಮಾಡಿ, ರವೀಂದ್ರ ಎಚ್.ಕುಂದರ್, ವಿಕ್ರಂ ರಾಜ್ , ಅಬ್ಬಾಸ್ ಹಾಜಿ, ಭಾಸ್ಕರ ಸಾಲ್ಯಾನ್, ಕಬೀರ್, ರೂಪೇಶ್ ಶೇನೈ, ಸನಾ ಇಬ್ರಹೀಂ, ಶ್ರೀನಿವಾಸ, ನಾರಾಯಣ ಪೂಜಾರಿ, ಪಾಂಡುರಂಗ ಕರ್ಕೆರ, ಪದ್ಮನಾಭ ಸುವರ್ಣ , ಭಾಸಕರ್ ಪುತ್ರನ್, ವರದಾಕ್ಷಿ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ:</strong> ಅನಿಯಮಿತ ವಿದ್ಯುತ್, ಮೆಸ್ಕಾಂ ಸಿಬ್ಬಂದಿ ಅನುಚಿತ ವರ್ತನೆಯಿಂದ ಬೇಸತ್ತ ಪಡುಬಿದ್ರಿ ಸುತ್ತಮುತ್ತಲ ನಾಗರಿಕರು ಸೋಮವಾರ ಬೆಳಿಗ್ಗೆ ಪಡುಬಿದ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.<br /> <br /> ಮಳೆಗಾಲ ಆರಂಭಗೊಂಡಂದಿನಿಂದ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರಿ, ಫಲಿಮಾರು, ಎರ್ಮಾಳು ಪ್ರದೇಶಗಳಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳಿಸಲಾಗುತ್ತಿತ್ತು. ಈ ಬಗ್ಗೆ ಮೆಸ್ಕಾಂಗೆ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಮೆಸ್ಕಾಂ ಕಚೇರಿಗೆ ದೂರವಾಣಿ ಮಾಡದರೂ ಸೂಕ್ತವಾಗಿ ಸ್ಪಂದಿಸುತಿಲ್ಲ. ಮೆಸ್ಕಾಂ ಸಿಬ್ಬಂದಿ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಹೆಜಮಾಡಿ ಹಾಗೂ ಪಾದೆಬೆಟ್ಟು ಗ್ರಾಮಸ್ಥರು ಸೇರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು.<br /> <br /> ಹೆಜಮಾಡಿ ಗ್ರಾಮದಾದ್ಯಂತ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ರಿಕ್ಷಾ ಬಂದ್ ನಡೆಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಕ್ಷಣ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಮೆಸ್ಕಾಂ ವಿರುದ್ಧ ಘೋಷಣೆ ಕೂಗಿದರು.<br /> <br /> 700ಕ್ಕೂ ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಮಸ್ಯೆ ಪರಿಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಜಡಿಯುವ ಬೆದರಿಕೆ ಹಾಕಿದರು.<br /> <br /> ಮೆಸ್ಕಾಂ ಎಇಇ ಸಂತೋಷ್ ನಾಯಕ್, ಮುಂದಿನ 2ದಿನದೊಳಗೆ ಈ ಭಾಗದ ಎಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿ ಬುಧವಾರ ಸಂಜೆಯೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.<br /> <br /> ಈ ಹಿಂದೆ ಹೆಜಮಾಡಿಗೆ ಮೂಲ್ಕಿ ಫೀಡರ್ನಿಂದ ವಿದ್ಯುತ್ ಸಮಸ್ಯೆಯಗುತ್ತಿದ್ದು, ಇದೀಗ ನಂದಿಕೂರು ಫೀಡರ್ಗೆ ಬದಲಾಯಿಸಲಾಗಿದೆ. ಅಂದಿನಿಂದ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು, ಹೆಜಮಾಡಿಗೆ ಮರಳಿ ಮೂಲ್ಕಿ ಫೀಡರ್ನಿಂದ ವಿದ್ಯುತ್ ವಿತರಣೆ ಮಾಡಬೇಕೆಂದು ಗ್ರಾಮಸ್ಥರು ಈ ಸಂದರ್ಭ ಆಗ್ರಹಿಸಿದರು.<br /> <br /> ಸಿಬ್ಬಂದಿಗೆ ತರಾಟೆ: ಮೆಸ್ಕಾಂ ಎಇಇ ಸಂತೋಷ್ ನಾಯಕ್ ಮಾತನಾಡಿ `ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಲ್ಬಣಗೊಂಡಿದ್ದು, ಬೇರೆಡೆಯಿಂದ ಸಿಬ್ಬಂದಿಯನ್ನು ಕರೆಸಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುವುದು. ಅಲ್ಲದೆ ಕೆಲವೊಂದು ಕಡೆ ತಾತ್ಕಾಲಿಕ ನೆಲೆಯಲ್ಲಿ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು. ಪಡುಬಿದ್ರಿ ವಿಭಾಗದ ಎಲ್ಲ ಸಿಬ್ಬಂದಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಹಗಲು ರಾತ್ರಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು. <br /> <br /> ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಪಡುಬಿದ್ರಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ್ ಪಡುಬಿದ್ರಿ, ಮಾಜಿ ಅಧ್ಯಕ್ಷ ಸುಧಾಕರ ಕರ್ಕೇರ, ಗಣೇಶ್ ಹೆಜ್ಮಾಡಿ, ಸುಭಾಸ್ ಜೆ. ಸಾಲ್ಯಾನ್, ಸೂಫಿ ಹೆಜ್ಮಾಡಿ, ರವೀಂದ್ರ ಎಚ್.ಕುಂದರ್, ವಿಕ್ರಂ ರಾಜ್ , ಅಬ್ಬಾಸ್ ಹಾಜಿ, ಭಾಸ್ಕರ ಸಾಲ್ಯಾನ್, ಕಬೀರ್, ರೂಪೇಶ್ ಶೇನೈ, ಸನಾ ಇಬ್ರಹೀಂ, ಶ್ರೀನಿವಾಸ, ನಾರಾಯಣ ಪೂಜಾರಿ, ಪಾಂಡುರಂಗ ಕರ್ಕೆರ, ಪದ್ಮನಾಭ ಸುವರ್ಣ , ಭಾಸಕರ್ ಪುತ್ರನ್, ವರದಾಕ್ಷಿ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>