<p>ದಾವಣಗೆರೆ:ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಹಾಗೂ ಮನೆಗಳ ಅರ್ಜಿ ಪಡೆಯಲು ಗುರುವಾರವೂ ಸಾವಿರಾರು ಆಕಾಂಕ್ಷಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದರು.</p>.<p>ಬುಧವಾರ ಆಕ್ಷಿಸ್ ಬ್ಯಾಂಕ್ ಬಳಿ ಜಮಾಯಿಸಿದ್ದ ಆಕಾಂಕ್ಷಿಗಳು ಗುರುವಾರದಿಂದ ಗೃಹ ಮಂಡಳಿ ಕಚೇರಿಯಲ್ಲಿ ಅರ್ಜಿವಿತರಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದರು.</p>.<p>ಸಾವಿರಾರು ಆಕಾಂಕ್ಷಿಗಳು ಬಂದಿದ್ದ ಕಾರಣ ಪೊಲೀಸರು ಜನರನ್ನು ನಿಯಂತ್ರಿಸಲು ಪ್ರಯಾಸಪಟ್ಟರು. ಜಿಲ್ಲಾಧಿಕಾರಿ ಕಚೇರಿ ಎದುರಿನ ಪೆಂಡಾಲ್ನಲ್ಲಿ ಅಧಿಕಾರಿಗಳು ಅರ್ಜಿ ವಿತರಿಸಿದರು. ಪೆಂಡಾಲ್ನಿಂದ ಅರ್ಧ ಕಿ.ಮೀ ವರೆಗೆ ಜನರ ಸರತಿ ಸಾಲು ಕಂಡು ಬಂತು.</p>.<p>ಮುಂಜಾನೆಯಿಂದಲೇ ಜನರು ಬಂದಿದ್ದರು. ಅಧಿಕಾರಿಗಳು 10.30ರಿಂದ 1.30 ರವರೆಗೆ ಅರ್ಜಿ ವಿತರಿಸಿದರು. ಆ ವೇಳೆಗಾಗಲೇ ಅರ್ಜಿಗಳು ಖಾಲಿಯಾಗಿದ್ದವು. ಇದರಿಂದ ಅಸಮಾಧಾನಗೊಂಡ ಜನರು ಗೊಣಗಾಡುತ್ತಾ ಮನೆಯತ್ತ ಹೆಜ್ಜೆ ಹಾಕಿದರು.</p>.<p>‘2220 ಅರ್ಜಿಗಳನ್ನು ವಿತರಿಸಲಾಗಿದೆ. ಅರ್ಜಿಗಳು ಖಾಲಿಯಾದ ಕಾರಣ ಕೇಂದ್ರ ಕಚೇರಿಗೆ ಅರ್ಜಿ ಕಳಿಸುವಂತೆ ಮನವಿ ಮಾಡಿದ್ದೇವೆ. ಡಿಸೆಂಬರ್ 2 ರಿಂದ ಮತ್ತೆ ಅರ್ಜಿ ವಿತರಿಸಲಾಗುವುದು’ ಎಂದು ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ಬನಾರೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ:ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ಹಾಗೂ ಮನೆಗಳ ಅರ್ಜಿ ಪಡೆಯಲು ಗುರುವಾರವೂ ಸಾವಿರಾರು ಆಕಾಂಕ್ಷಿಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದರು.</p>.<p>ಬುಧವಾರ ಆಕ್ಷಿಸ್ ಬ್ಯಾಂಕ್ ಬಳಿ ಜಮಾಯಿಸಿದ್ದ ಆಕಾಂಕ್ಷಿಗಳು ಗುರುವಾರದಿಂದ ಗೃಹ ಮಂಡಳಿ ಕಚೇರಿಯಲ್ಲಿ ಅರ್ಜಿವಿತರಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಬೆಳಿಗ್ಗೆಯಿಂದಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದರು.</p>.<p>ಸಾವಿರಾರು ಆಕಾಂಕ್ಷಿಗಳು ಬಂದಿದ್ದ ಕಾರಣ ಪೊಲೀಸರು ಜನರನ್ನು ನಿಯಂತ್ರಿಸಲು ಪ್ರಯಾಸಪಟ್ಟರು. ಜಿಲ್ಲಾಧಿಕಾರಿ ಕಚೇರಿ ಎದುರಿನ ಪೆಂಡಾಲ್ನಲ್ಲಿ ಅಧಿಕಾರಿಗಳು ಅರ್ಜಿ ವಿತರಿಸಿದರು. ಪೆಂಡಾಲ್ನಿಂದ ಅರ್ಧ ಕಿ.ಮೀ ವರೆಗೆ ಜನರ ಸರತಿ ಸಾಲು ಕಂಡು ಬಂತು.</p>.<p>ಮುಂಜಾನೆಯಿಂದಲೇ ಜನರು ಬಂದಿದ್ದರು. ಅಧಿಕಾರಿಗಳು 10.30ರಿಂದ 1.30 ರವರೆಗೆ ಅರ್ಜಿ ವಿತರಿಸಿದರು. ಆ ವೇಳೆಗಾಗಲೇ ಅರ್ಜಿಗಳು ಖಾಲಿಯಾಗಿದ್ದವು. ಇದರಿಂದ ಅಸಮಾಧಾನಗೊಂಡ ಜನರು ಗೊಣಗಾಡುತ್ತಾ ಮನೆಯತ್ತ ಹೆಜ್ಜೆ ಹಾಕಿದರು.</p>.<p>‘2220 ಅರ್ಜಿಗಳನ್ನು ವಿತರಿಸಲಾಗಿದೆ. ಅರ್ಜಿಗಳು ಖಾಲಿಯಾದ ಕಾರಣ ಕೇಂದ್ರ ಕಚೇರಿಗೆ ಅರ್ಜಿ ಕಳಿಸುವಂತೆ ಮನವಿ ಮಾಡಿದ್ದೇವೆ. ಡಿಸೆಂಬರ್ 2 ರಿಂದ ಮತ್ತೆ ಅರ್ಜಿ ವಿತರಿಸಲಾಗುವುದು’ ಎಂದು ಗೃಹ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ಬನಾರೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>