‘ವೈದ್ಯರು, ಸಹಾಯಕ ಮತ್ತು ಚಾಲಕರನ್ನು ನೇಮಿಸಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಾಹನಗಳನ್ನು ಖರೀದಿಸುವ ಅಗತ್ಯ ಏನಿತ್ತು. ಆಸ್ಪತ್ರೆಯಲ್ಲಿ ವಾಹನ ನಿಲ್ಲಿಸಲು ಶೆಡ್ ಇಲ್ಲ. ಬಿಸಿಲು, ಮಳೆಯಲ್ಲಿ ವಾಹನ ನಿಂತು ಹಾಳಾಗುತ್ತಿದೆ. ಸರ್ಕಾರದ ಯೋಜನೆ ಹಳ್ಳ ಹಿಡಿಯುತ್ತಿದ್ದು, ಸಂಬಂಧಿಸಿದವರು ಗಮನಹರಿಸಬೇಕು’ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಹೊಸಮನೆ ಮಲ್ಲಿಕಾರ್ಜುನ್, ಮರುಡಪ್ಪ, ಸಹದೇವರೆಡ್ಡಿಒತ್ತಾಯಿಸಿದ್ದಾರೆ.