‘ಗ್ರಾಮದ ಕೆರೆಯ 10 ಮೀಟರ್ ದೂರದಲ್ಲಿಯೇ ಘಟಕ ನಿರ್ಮಿಸಲಾಗುತ್ತಿದೆ. ತುಂಗಭದ್ರಾ ನದಿಗೆ ಗ್ರಾಮಸ್ಥರು ಜಾನುವಾರಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು ಹೋಗುತ್ತಾರೆ. ಮಳೆಗಾಲದಲ್ಲಿ ಮಳೆ ಜಾಸ್ತಿಯಾದರೆ ತ್ಯಾಜ್ಯ ಕೆರೆಗೆ ಸೇರುತ್ತವೆ. ಜಲಚರಗಳಿಗೆ ತೊಂದರೆಯಾಗುತ್ತದೆ. ಪರಿಸರ ಹಾಳಾಗುವುದರಿಂದ ದೂರದ ಸ್ಥಳದಲ್ಲಿ ಘಟಕ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ಗ್ರಾಮದ ಪ್ರದೀಪ್.