ಹಣ ಸ್ವೀಕರಿಸಲು ಬಂದ ಸಿದ್ದೇಶ್ ಕೆಳಗೆ ಇಳಿಯದೇ ಚಾಲನೆ ಸ್ಥಿತಿಯಲ್ಲೇ ಕಾರನ್ನು ಇಟ್ಟಿದ್ದರು. ಆ ವೇಳೆ ವೈದ್ಯರು ಪ್ಯಾಂಟ್ನಿಂದ ಪಿನಾಪ್ತಲಿನ್ ಪೌಡರ್ ಸವರಿದ್ದ ₹15 ಸಾವಿರವನ್ನು ಸಿದ್ದೇಶ್ಗೆ ಕೊಟ್ಟು ತಲೆ ಕೆರೆದುಕೊಳ್ಳುವ ಮೂಲಕ ಸಂಜ್ಞೆ ಮಾಡಿದರು. ಆಗ ಅಲ್ಲಿಯೇ ಇದ್ದ ಎಸಿಬಿ ಅಧಿಕಾರಿಗಳು ಕಾರನ್ನು ಸುತ್ತುವರಿದರು. ಈ ವೇಳೆ ಕಾರನ್ನು ವೇಗವಾಗಿ ಚಲಿಸಿ ಕಲ್ಲೇಶಪ್ಪ ಅವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಆ ವೇಳೆ ಅವರು ತಪ್ಪಿಸಿಕೊಂಡಿದ್ದಾರೆ.