<p><strong>ದಾವಣಗೆರೆ:</strong> ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕಂದಾಯ ನಿರೀಕ್ಷಕನನ್ನು ಬಲೆಗೆ ಕೆಡವಲು (ಟ್ರ್ಯಾಪ್) ಬಂದ ಎಸಿಬಿ ಪೊಲೀಸರ ಮೇಲೆಯೇ ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯ ಬಳಿ ಕಂದಾಯ ನಿರೀಕ್ಷಕ ಕಾರು ಹತ್ತಿಸಲು ಪ್ರಯತ್ನಿಸಿದ್ದಾನೆ.</p>.<p>ದಾವಣಗೆರೆ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಿದ್ದೇಶ್ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಪಟ್ಟವರು. ಕೈದಾಳೆ ಗ್ರಾಮದಲ್ಲಿ ಎರಡು ಎಕರೆ 30 ಗುಂಟೆ ಜಮೀನನ್ನು ಖರೀದಿಸಿದ್ದ ಖಾಸಗಿ ವೈದ್ಯರೊಬ್ಬರು ತಮ್ಮ ಪತ್ನಿ ಹೆಸರಿಗೆ ಖಾತೆ ಬದಲಾವಣೆಗೆ ಸಿದ್ದೇಶ್ ಬಳಿ ಹೋಗಿದ್ದರು. ಈ ವೇಳೆ ಸಿದ್ದೇಶ್ ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.</p>.<p>ಹಣ ಕೊಡಲು ವೈದ್ಯರು ಹೇಳಿ ಶಿವಕುಮಾರಸ್ವಾಮಿ ಬಡಾವಣೆಯ ಸೇಂಟ್ ಕಾನ್ವೆಂಟ್ ರಸ್ತೆಗೆ ಬರಲು ಹೇಳಿದ್ದರು. ಆಗ ಸಿದ್ದೇಶ್ ಕಾರಿನಲ್ಲಿ ಬಂದಿದ್ದಾರೆ. ಆ ವೇಳೆಗಾಗಲೇ ಎಸಿಬಿ ತಂಡದ ಸಿಬ್ಬಂದಿ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು.</p>.<p>ಹಣ ಸ್ವೀಕರಿಸಲು ಬಂದ ಸಿದ್ದೇಶ್ ಕೆಳಗೆ ಇಳಿಯದೇ ಚಾಲನೆ ಸ್ಥಿತಿಯಲ್ಲೇ ಕಾರನ್ನು ಇಟ್ಟಿದ್ದರು. ಆ ವೇಳೆ ವೈದ್ಯರು ಪ್ಯಾಂಟ್ನಿಂದ ಪಿನಾಪ್ತಲಿನ್ ಪೌಡರ್ ಸವರಿದ್ದ ₹15 ಸಾವಿರವನ್ನು ಸಿದ್ದೇಶ್ಗೆ ಕೊಟ್ಟು ತಲೆ ಕೆರೆದುಕೊಳ್ಳುವ ಮೂಲಕ ಸಂಜ್ಞೆ ಮಾಡಿದರು. ಆಗ ಅಲ್ಲಿಯೇ ಇದ್ದ ಎಸಿಬಿ ಅಧಿಕಾರಿಗಳು ಕಾರನ್ನು ಸುತ್ತುವರಿದರು. ಈ ವೇಳೆ ಕಾರನ್ನು ವೇಗವಾಗಿ ಚಲಿಸಿ ಕಲ್ಲೇಶಪ್ಪ ಅವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಆ ವೇಳೆ ಅವರು ತಪ್ಪಿಸಿಕೊಂಡಿದ್ದಾರೆ.</p>.<p>ಎಸಿಬಿ ತಂಡ ಆ ಕಾರನ್ನು ಕಾರನ್ನು ಬೆನ್ನಟ್ಟಿದೆ. ಮಾಗನೂರು ಪೆಟ್ರೋಲ್ ಬಂಕ್ ಬಳಿ ಸಿದ್ದೇಶ್ ಪರಾರಿಯಾಗಿದ್ದಾರೆ. ಆತನ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸಿಬಿ ಎಸ್ಐ ರವೀಂದ್ರ ಎಂ.ಕುರುಬಗಟ್ಟಿ ಅವರುಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕಂದಾಯ ನಿರೀಕ್ಷಕನನ್ನು ಬಲೆಗೆ ಕೆಡವಲು (ಟ್ರ್ಯಾಪ್) ಬಂದ ಎಸಿಬಿ ಪೊಲೀಸರ ಮೇಲೆಯೇ ಇಲ್ಲಿನ ಶಿವಕುಮಾರಸ್ವಾಮಿ ಬಡಾವಣೆಯ ಬಳಿ ಕಂದಾಯ ನಿರೀಕ್ಷಕ ಕಾರು ಹತ್ತಿಸಲು ಪ್ರಯತ್ನಿಸಿದ್ದಾನೆ.</p>.<p>ದಾವಣಗೆರೆ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಸಿದ್ದೇಶ್ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಪಟ್ಟವರು. ಕೈದಾಳೆ ಗ್ರಾಮದಲ್ಲಿ ಎರಡು ಎಕರೆ 30 ಗುಂಟೆ ಜಮೀನನ್ನು ಖರೀದಿಸಿದ್ದ ಖಾಸಗಿ ವೈದ್ಯರೊಬ್ಬರು ತಮ್ಮ ಪತ್ನಿ ಹೆಸರಿಗೆ ಖಾತೆ ಬದಲಾವಣೆಗೆ ಸಿದ್ದೇಶ್ ಬಳಿ ಹೋಗಿದ್ದರು. ಈ ವೇಳೆ ಸಿದ್ದೇಶ್ ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.</p>.<p>ಹಣ ಕೊಡಲು ವೈದ್ಯರು ಹೇಳಿ ಶಿವಕುಮಾರಸ್ವಾಮಿ ಬಡಾವಣೆಯ ಸೇಂಟ್ ಕಾನ್ವೆಂಟ್ ರಸ್ತೆಗೆ ಬರಲು ಹೇಳಿದ್ದರು. ಆಗ ಸಿದ್ದೇಶ್ ಕಾರಿನಲ್ಲಿ ಬಂದಿದ್ದಾರೆ. ಆ ವೇಳೆಗಾಗಲೇ ಎಸಿಬಿ ತಂಡದ ಸಿಬ್ಬಂದಿ ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು.</p>.<p>ಹಣ ಸ್ವೀಕರಿಸಲು ಬಂದ ಸಿದ್ದೇಶ್ ಕೆಳಗೆ ಇಳಿಯದೇ ಚಾಲನೆ ಸ್ಥಿತಿಯಲ್ಲೇ ಕಾರನ್ನು ಇಟ್ಟಿದ್ದರು. ಆ ವೇಳೆ ವೈದ್ಯರು ಪ್ಯಾಂಟ್ನಿಂದ ಪಿನಾಪ್ತಲಿನ್ ಪೌಡರ್ ಸವರಿದ್ದ ₹15 ಸಾವಿರವನ್ನು ಸಿದ್ದೇಶ್ಗೆ ಕೊಟ್ಟು ತಲೆ ಕೆರೆದುಕೊಳ್ಳುವ ಮೂಲಕ ಸಂಜ್ಞೆ ಮಾಡಿದರು. ಆಗ ಅಲ್ಲಿಯೇ ಇದ್ದ ಎಸಿಬಿ ಅಧಿಕಾರಿಗಳು ಕಾರನ್ನು ಸುತ್ತುವರಿದರು. ಈ ವೇಳೆ ಕಾರನ್ನು ವೇಗವಾಗಿ ಚಲಿಸಿ ಕಲ್ಲೇಶಪ್ಪ ಅವರ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ಆ ವೇಳೆ ಅವರು ತಪ್ಪಿಸಿಕೊಂಡಿದ್ದಾರೆ.</p>.<p>ಎಸಿಬಿ ತಂಡ ಆ ಕಾರನ್ನು ಕಾರನ್ನು ಬೆನ್ನಟ್ಟಿದೆ. ಮಾಗನೂರು ಪೆಟ್ರೋಲ್ ಬಂಕ್ ಬಳಿ ಸಿದ್ದೇಶ್ ಪರಾರಿಯಾಗಿದ್ದಾರೆ. ಆತನ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಸಿಬಿ ಎಸ್ಐ ರವೀಂದ್ರ ಎಂ.ಕುರುಬಗಟ್ಟಿ ಅವರುಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>