ಬುಸವನಹಟ್ಟಿ ಗ್ರಾಮದ ರೇವಣಸಿದ್ದಪ್ಪ ಹಣ ಕಳೆದುಕೊಂಡವರು. ಭತ್ತದ ವ್ಯಾಪಾರ ಮುಗಿಸಿಕೊಂಡು ದಾವಣಗೆರೆಯಿಂದ ಶನಿವಾರ ರಾತ್ರಿ ಗ್ರಾಮಕ್ಕೆ ತೆರಳುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ನಲ್ಲಿ ಬಂದ ಮೂವರು ಮಂದಿ ರೇವಣ ಸಿದ್ದಪ್ಪ ಅವರನ್ನು ಅಡ್ಡಗಟ್ಟಿ, ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ. ಆಗ ಕೆಳಗೆ ಬಿದ್ದಾಗ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.