<p>ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ): ಒಂದು ವಾರದಿಂದ ಮಳೆ ಕಡಿಮೆಯಾಗಿದೆ. ಆದರೆ, ಅತಿವೃಷ್ಟಿಯಿಂದಾಗಿ ಸಮೀಪದ ಹಿರೇಹಳ್ಳ ಹಾಗೂ ಸೂಳೆಕೆರೆ ಹಿನ್ನೀರು ವ್ಯಾಪ್ತಿಯ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನುಗ್ಗಿದ್ದ ಪ್ರವಾಹದ ನೀರು ಇನ್ನೂ ಸರಿದಿಲ್ಲ. 1ರಿಂದ 4 ಅಡಿಗಳಷ್ಟು ನೀರು ನಿಂತಿರುವ ತೋಟಗಳಲ್ಲಿ ಅಡಿಕೆ ಕೊಯ್ಲು ಮಾಡಲು ರೈತರು ತೆಪ್ಪ ಬಳಸುತ್ತಿದ್ದಾರೆ.</p>.<p>‘ಹಿರೇಹಳ್ಳದ ಪ್ರವಾಹದಿಂದ ಎರಡು ಎಕರೆ ತೋಟ ಜಲಾವೃತವಾಗಿದೆ. ತೆಪ್ಪ ಬಳಸಿಯೇ ಕೊಯ್ಲು ಪೂರ್ಣಗೊಳಿಸಿದ್ದೇನೆ. ಮೊದಲು ತೆಪ್ಪವನ್ನು ಅಡಿಕೆ ಮರದ ಬಳಿ ಸಾಗಿಸಬೇಕು. ನೀರಲ್ಲಿ ಬಿದ್ದ ಅಡಿಕೆ ಗೊಂಚಲನ್ನು ತೆಪ್ಪಕ್ಕೆ ತುಂಬಬೇಕು. ತೆಪ್ಪದಲ್ಲಿ ಒಮ್ಮೆ 1 ಕ್ವಿಂಟಲ್ ಅಡಿಕೆಯನ್ನು ಮಾತ್ರ ದಡಕ್ಕೆ ಸಾಗಿಸಲು ಸಾಧ್ಯ. ಹೆಚ್ಚೆಂದರೆ ದಿನಕ್ಕೆ 20 ಕ್ವಿಂಟಲ್ ಹಸಿ ಅಡಿಕೆ ಸಾಗಿಸಬಹದು’ ಎಂದು ನಿಂಬಾಪುರದ ರೈತ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘1 ಎಕರೆ ಅಡಿಕೆ ಕೊಯ್ಲಿಗೆ ಎರಡು ದಿನ ಬೇಕಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 80 ಕ್ವಿಂಟಲ್ವರೆಗೆ ಅಡಿಕೆ ಸಾಗಿಸಲಾಗುತ್ತದೆ’ಎಂದು ಅವರು ಹೇಳಿದರು.</p>.<p>‘ಹಿರೇಹಳ್ಳದ ನೀರು ಒಂದೂವರೆ ತಿಂಗಳಿಂದ ತೋಟಗಳಲ್ಲೇ ನಿಂತಿದ್ದು, ಇನ್ನೂ ಒಂದು ತಿಂಗಳು ಖಾಲಿ ಆಗುವ ಲಕ್ಷಣಗಳಿಲ್ಲ. ಈಗಾಗಲೇ 3ರಿಂದ 4 ವರ್ಷದ ಗಿಡಗಳು ನಾಶವಾಗುತ್ತಿವೆ. ಹಳೇ ತೋಟಗಳು ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ’ ಎಂದು ರೈತ ರಾಜಪ್ಪ ವಿವರಿಸಿದರು.</p>.<p>‘ಶಾಂತಿಸಾಗರ (ಸೂಳೆಕೆರೆ) ಕೋಡಿ ಬಿದ್ದ ಪರಿಣಾಮ ಹಿನ್ನೀರು ವ್ಯಾಪ್ತಿಯ ಕೊಂಡದಹಳ್ಳಿ, ಗೊಲ್ಲರಹಳ್ಳಿ, ಬಿಕ್ಕುಡ, ಸೋಮಲಾಪುರ, ಜಕಲಿ, ಕಗತೂರು ವ್ಯಾಪ್ತಿಯಲ್ಲಿ ಅಡಿಕೆಯ 1,000 ಎಕರೆಗಿಂತ ಅಧಿಕ ತೋಟಗಳಲ್ಲಿ 3ರಿಂದ 4 ಅಡಿ ನೀರು ನಿಂತಿದೆ. 2ನೇ ಬಾರಿ ಕೊಯ್ಲು ಆರಂಭವಾಗಿದೆ. ಸುಮಾರು 500 ಮೀಟರ್ನಿಂದ 1 ಕಿ.ಮೀ ದೂರದವರೆಗೆ ತೆಪ್ಪದಲ್ಲಿ ಸಾಗಬೇಕಿದೆ. ದಿನಕ್ಕೆ 4ರಿಂದ 5 ಬಾರಿ ಮಾತ್ರ ಅಡಿಕೆ ದಡಕ್ಕೆ ಸಾಗಿಸಲು ಸಾಧ್ಯ. ರೈತರ ಬವಣೆ ಹೇಳತೀರದು’ ಎಂದು ಕೊಂಡದಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಕುಮಾರ್ ಬೇಸರ ವ್ಯಕ್ತಪಡಿಸಿದರು.</p>.<p>‘ಕೆಲವು ರೈತರು ₹ 6000ದಿಂದ ₹ 7000 ಕೊಟ್ಟು ತೆಪ್ಪ ಖರೀದಿಸಿದ್ದಾರೆ. ಮೀನುಗಾರರಿಂದ ದಿನಕ್ಕೆ ₹ 500ರಿಂದ ₹ 1000ಕ್ಕೆ ಬಾಡಿಗೆಗೆ ಪಡೆದು ಅಡಿಕೆ ಕೊಯ್ಲು ಮಾಡುತ್ತಿರುವವರೂ ಇದ್ದಾರೆ’ ಎನ್ನುತ್ತಾರೆ ಸೋಮಲಾಪುರದ ರೈತ ವೀರೇಶ್.</p>.<p>........</p>.<p>ಅಡಿಕೆ ತೋಟಗಳಲ್ಲಿ ಸತತವಾಗಿ ನೀರು ನಿಂತರೆ ಶೀತದ ಪರಿಣಾಮವಾಗಿ ಹರಳು ಉದುರುತ್ತವೆ. ಮುಂದಿನ ಬೆಳೆ ಸಂಪೂರ್ಣ ಕುಂಠಿತಗೊಳ್ಳುವ ಆತಂಕವಿದೆ.<br />– ಕೆ.ಎಸ್. ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂತೇಬೆನ್ನೂರು (ದಾವಣಗೆರೆ ಜಿಲ್ಲೆ): ಒಂದು ವಾರದಿಂದ ಮಳೆ ಕಡಿಮೆಯಾಗಿದೆ. ಆದರೆ, ಅತಿವೃಷ್ಟಿಯಿಂದಾಗಿ ಸಮೀಪದ ಹಿರೇಹಳ್ಳ ಹಾಗೂ ಸೂಳೆಕೆರೆ ಹಿನ್ನೀರು ವ್ಯಾಪ್ತಿಯ ಸಾವಿರಾರು ಎಕರೆ ಅಡಿಕೆ ತೋಟಗಳಿಗೆ ನುಗ್ಗಿದ್ದ ಪ್ರವಾಹದ ನೀರು ಇನ್ನೂ ಸರಿದಿಲ್ಲ. 1ರಿಂದ 4 ಅಡಿಗಳಷ್ಟು ನೀರು ನಿಂತಿರುವ ತೋಟಗಳಲ್ಲಿ ಅಡಿಕೆ ಕೊಯ್ಲು ಮಾಡಲು ರೈತರು ತೆಪ್ಪ ಬಳಸುತ್ತಿದ್ದಾರೆ.</p>.<p>‘ಹಿರೇಹಳ್ಳದ ಪ್ರವಾಹದಿಂದ ಎರಡು ಎಕರೆ ತೋಟ ಜಲಾವೃತವಾಗಿದೆ. ತೆಪ್ಪ ಬಳಸಿಯೇ ಕೊಯ್ಲು ಪೂರ್ಣಗೊಳಿಸಿದ್ದೇನೆ. ಮೊದಲು ತೆಪ್ಪವನ್ನು ಅಡಿಕೆ ಮರದ ಬಳಿ ಸಾಗಿಸಬೇಕು. ನೀರಲ್ಲಿ ಬಿದ್ದ ಅಡಿಕೆ ಗೊಂಚಲನ್ನು ತೆಪ್ಪಕ್ಕೆ ತುಂಬಬೇಕು. ತೆಪ್ಪದಲ್ಲಿ ಒಮ್ಮೆ 1 ಕ್ವಿಂಟಲ್ ಅಡಿಕೆಯನ್ನು ಮಾತ್ರ ದಡಕ್ಕೆ ಸಾಗಿಸಲು ಸಾಧ್ಯ. ಹೆಚ್ಚೆಂದರೆ ದಿನಕ್ಕೆ 20 ಕ್ವಿಂಟಲ್ ಹಸಿ ಅಡಿಕೆ ಸಾಗಿಸಬಹದು’ ಎಂದು ನಿಂಬಾಪುರದ ರೈತ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘1 ಎಕರೆ ಅಡಿಕೆ ಕೊಯ್ಲಿಗೆ ಎರಡು ದಿನ ಬೇಕಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 80 ಕ್ವಿಂಟಲ್ವರೆಗೆ ಅಡಿಕೆ ಸಾಗಿಸಲಾಗುತ್ತದೆ’ಎಂದು ಅವರು ಹೇಳಿದರು.</p>.<p>‘ಹಿರೇಹಳ್ಳದ ನೀರು ಒಂದೂವರೆ ತಿಂಗಳಿಂದ ತೋಟಗಳಲ್ಲೇ ನಿಂತಿದ್ದು, ಇನ್ನೂ ಒಂದು ತಿಂಗಳು ಖಾಲಿ ಆಗುವ ಲಕ್ಷಣಗಳಿಲ್ಲ. ಈಗಾಗಲೇ 3ರಿಂದ 4 ವರ್ಷದ ಗಿಡಗಳು ನಾಶವಾಗುತ್ತಿವೆ. ಹಳೇ ತೋಟಗಳು ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ’ ಎಂದು ರೈತ ರಾಜಪ್ಪ ವಿವರಿಸಿದರು.</p>.<p>‘ಶಾಂತಿಸಾಗರ (ಸೂಳೆಕೆರೆ) ಕೋಡಿ ಬಿದ್ದ ಪರಿಣಾಮ ಹಿನ್ನೀರು ವ್ಯಾಪ್ತಿಯ ಕೊಂಡದಹಳ್ಳಿ, ಗೊಲ್ಲರಹಳ್ಳಿ, ಬಿಕ್ಕುಡ, ಸೋಮಲಾಪುರ, ಜಕಲಿ, ಕಗತೂರು ವ್ಯಾಪ್ತಿಯಲ್ಲಿ ಅಡಿಕೆಯ 1,000 ಎಕರೆಗಿಂತ ಅಧಿಕ ತೋಟಗಳಲ್ಲಿ 3ರಿಂದ 4 ಅಡಿ ನೀರು ನಿಂತಿದೆ. 2ನೇ ಬಾರಿ ಕೊಯ್ಲು ಆರಂಭವಾಗಿದೆ. ಸುಮಾರು 500 ಮೀಟರ್ನಿಂದ 1 ಕಿ.ಮೀ ದೂರದವರೆಗೆ ತೆಪ್ಪದಲ್ಲಿ ಸಾಗಬೇಕಿದೆ. ದಿನಕ್ಕೆ 4ರಿಂದ 5 ಬಾರಿ ಮಾತ್ರ ಅಡಿಕೆ ದಡಕ್ಕೆ ಸಾಗಿಸಲು ಸಾಧ್ಯ. ರೈತರ ಬವಣೆ ಹೇಳತೀರದು’ ಎಂದು ಕೊಂಡದಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಕುಮಾರ್ ಬೇಸರ ವ್ಯಕ್ತಪಡಿಸಿದರು.</p>.<p>‘ಕೆಲವು ರೈತರು ₹ 6000ದಿಂದ ₹ 7000 ಕೊಟ್ಟು ತೆಪ್ಪ ಖರೀದಿಸಿದ್ದಾರೆ. ಮೀನುಗಾರರಿಂದ ದಿನಕ್ಕೆ ₹ 500ರಿಂದ ₹ 1000ಕ್ಕೆ ಬಾಡಿಗೆಗೆ ಪಡೆದು ಅಡಿಕೆ ಕೊಯ್ಲು ಮಾಡುತ್ತಿರುವವರೂ ಇದ್ದಾರೆ’ ಎನ್ನುತ್ತಾರೆ ಸೋಮಲಾಪುರದ ರೈತ ವೀರೇಶ್.</p>.<p>........</p>.<p>ಅಡಿಕೆ ತೋಟಗಳಲ್ಲಿ ಸತತವಾಗಿ ನೀರು ನಿಂತರೆ ಶೀತದ ಪರಿಣಾಮವಾಗಿ ಹರಳು ಉದುರುತ್ತವೆ. ಮುಂದಿನ ಬೆಳೆ ಸಂಪೂರ್ಣ ಕುಂಠಿತಗೊಳ್ಳುವ ಆತಂಕವಿದೆ.<br />– ಕೆ.ಎಸ್. ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>