‘ಶಾಂತಿಸಾಗರ (ಸೂಳೆಕೆರೆ) ಕೋಡಿ ಬಿದ್ದ ಪರಿಣಾಮ ಹಿನ್ನೀರು ವ್ಯಾಪ್ತಿಯ ಕೊಂಡದಹಳ್ಳಿ, ಗೊಲ್ಲರಹಳ್ಳಿ, ಬಿಕ್ಕುಡ, ಸೋಮಲಾಪುರ, ಜಕಲಿ, ಕಗತೂರು ವ್ಯಾಪ್ತಿಯಲ್ಲಿ ಅಡಿಕೆಯ 1,000 ಎಕರೆಗಿಂತ ಅಧಿಕ ತೋಟಗಳಲ್ಲಿ 3ರಿಂದ 4 ಅಡಿ ನೀರು ನಿಂತಿದೆ. 2ನೇ ಬಾರಿ ಕೊಯ್ಲು ಆರಂಭವಾಗಿದೆ. ಸುಮಾರು 500 ಮೀಟರ್ನಿಂದ 1 ಕಿ.ಮೀ ದೂರದವರೆಗೆ ತೆಪ್ಪದಲ್ಲಿ ಸಾಗಬೇಕಿದೆ. ದಿನಕ್ಕೆ 4ರಿಂದ 5 ಬಾರಿ ಮಾತ್ರ ಅಡಿಕೆ ದಡಕ್ಕೆ ಸಾಗಿಸಲು ಸಾಧ್ಯ. ರೈತರ ಬವಣೆ ಹೇಳತೀರದು’ ಎಂದು ಕೊಂಡದಹಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್. ಕುಮಾರ್ ಬೇಸರ ವ್ಯಕ್ತಪಡಿಸಿದರು.