ಸಾಹಿತಿ ಡಾ. ಆನಂದ್ ಋಗ್ವೇದಿ ಪುಸ್ತಕ ಕುರಿತು ಮಾತನಾಡಿ, ‘ದಾವಣಗೆರೆಯ ಹೆಸರಾಂತ ಲೇಖಕಿ ಟಿ. ಗಿರಿಜಮ್ಮ ಅವರ ನಂತರದ ಸ್ಥಾನವನ್ನು ಲೇಖಕಿ ಆಶಾ ಅವರು ತುಂಬಿದ್ದಾರೆ. ಗಿರಿಜಮ್ಮ ಅವರು ಸಮಾಜದ ವಿಚಾರಗಳಿಗೆ ಸ್ಪಂದಿಸಿ ಲೇಖನ ಬರೆಯುತ್ತಿದ್ದರು. ಆಶಾ ಅವರು ಕೂಡ ಅವರ ದಾರಿಯಲ್ಲಿಯೇ ಸಾಗುತ್ತಿದ್ದು, ಈ ಪುಸ್ತಕದಲ್ಲಿ ತಮ್ಮ ವಿಚಾರಧಾರೆಗಳ ಮೂಲಕ ಸಮಾಜದ ವಾಸ್ತವಿಕತೆ ತೆರೆದಿಟ್ಟು ಸಹೋದರ, ಸಹೋದರಿಯರು, ಸ್ನೇಹಿತರ ಕಿವಿಹಿಂಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.