ರೈತ ಮಲ್ಲಿಕಾರ್ಜುನ್ ಮಾತನಾಡಿ, ‘ಅನೇಕ ದಿನಗಳಿಂದ ನಮ್ಮ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮದ ವಿವಿಧ ರೈತರ ಕುರಿ, ಮೇಕೆ, ನಾಯಿ, ಕರುಗಳನ್ನು ತಿಂದು ಹಾಕುತ್ತಿದೆ. ಭಾನುವಾರ ಕರುವನ್ನು ಸಾಯಿಸಿತ್ತು. ಮಾಂಸದ ವಾಸನೆಗೆ ಚಿರತೆ ಬರುತ್ತದೆ ಎಂದು ಊಹಿಸಿಕೊಂಡು, ಸತ್ತಿದ್ದ ಕರುವನ್ನು ತೆಗೆದುಕೊಂಡು ರೇಷ್ಮೆ ಮನೆಯಲ್ಲಿ ಕಟ್ಟಿ, ದೂರದಲ್ಲಿ ಕುಳಿತುಕೊಂಡಿದ್ದೆವು’ ಎಂದರು.