<p><strong>ದಾವಣಗೆರೆ</strong>: ಮಹಾತ್ಮ ಗಾಂಧೀಜಿ ಸೇರಿದಂತೆ ಎಲ್ಲ ಆದರ್ಶ ವ್ಯಕ್ತಿಗಳ ದಿನವನ್ನು ಶಾಲೆಗಳಿಗೆ ರಜೆ ನೀಡಿ ಆಚರಿಸುವ ಬದಲು ರಜೆ ನೀಡದೇ ವಿದ್ಯಾರ್ಥಿಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ತಿಳಿಸಿ ಕೊಡುವ ಕೆಲಸ ಆಗಬೇಕು ಎಂದು ಹಿರಿಯ ವಕೀಲ ಎಲ್.ಎಚ್. ಅರುಣ ಕುಮಾರ್ ಹೇಳಿದರು.</p>.<p>ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಯೂನಿಯನ್ನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಗಾಂಧಿ ಮತ್ತು ಕೋಮು ಸೌಹಾರ್ದ’ ವಿಚಾರ ಸಂಕಿರಣ ಹಾಗೂ ಮನೆಗೆಲಸ, ಕಟ್ಟಡ ಕಾರ್ಮಿಕರಿಗೆ ಫುಡ್ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.</p>.<p>ಗಾಂಧಿ ಜಯಂತಿ ಅಂದರೆ ರಜೆ ಎಂಬುದನ್ನು ಮಕ್ಕಳ ಮನಸ್ಸಿನಿಂದ ಹೋಗಲಾಡಿಸುವ ಕೆಲಸ ಆಗಬೇಕು. ಗಾಂಧೀಜಿಯ ಚಿಂತನೆಗಳನ್ನು, ಅವರ ಬದುಕಿನ ರೀತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಯಾಕೆಂದರೆ ವರ್ಷಗಳು ಕಳೆದಂತೆ ಗಾಂಧೀಜಿ ಅವರನ್ನು ಮರೆಗೆ ಸರಿಸುವ ಪ್ರಯತ್ನಗಳಾಗುತ್ತಿವೆ. ಎಲ್ಲ ಕಾಲಕ್ಕೂ ಪ್ರಸ್ತುತರಾದ ಗಾಂಧಿಯವರನ್ನು ಈ ರೀತಿ ಮರೆಯಾಗಲು ಬಿಡಬಾರದು ಎಂದು ಹೇಳಿದರು.</p>.<p>ಪ್ರಜಾಪ್ರಭುತ್ವ ಮತ್ತು ಹಿಂಸೆ, ಒಳ್ಳೆಯ ಸರ್ಕಾರ ಮತ್ತು ಭ್ರಷ್ಟಾಚಾರ ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಗಾಂಧೀಜಿಯ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುವವರು, ಅಧಿಕಾರಿಗಳು ಇದ್ದಾರೆ. ಜಾತ್ಯತೀತ, ಕೋಮು ಸೌಹಾರ್ದಕ್ಕೆ ಮತ್ತೊಂದು ಹೆಸರಾದ ಗಾಂಧೀಜಿಯ ತತ್ವಗಳು ಆಡಳಿತ ನಡೆಸುವವರಿಗೆ ಪಾಠ ಆಗಬೇಕು ಎಂದರು.</p>.<p>ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ ಮಾತನಾಡಿ, ‘ಪ್ರೀತಿಯಿಂದ, ಸೌಹಾರ್ದದಿಂದ, ಶಾಂತಿಯಿಂದ, ಅಹಿಂಸೆಯಿಂದ ಕಟ್ಟಿದ ದೇಶ ಬೆಳೆಯುತ್ತದೆ. ಉನ್ನತ ಸ್ಥಾನಕ್ಕೆ ಹೋಗುತ್ತದೆ. ದ್ವೇಷದಿಂದ ದೇಶ ಕಟ್ಟಲು ಹೊರಟರೆ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ’ ಎಂದು ಹೇಳಿದರು.</p>.<p>ಬ್ರಿಟಿಷರಿಂದ ವಿಮೋಚನೆ, ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಗಾಂಧೀಜಿಯ ಗುರಿಯಾಗಿತ್ತು. ಅದರಲ್ಲಿ ಬ್ರಿಟಿಷರಿಂದ ವಿಮೋಚನೆ ಮಾತ್ರ ಸಿಕ್ಕಿತು. ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಲ್ಲರೂ ಶಾಂತಿಯಿಂದ, ಸೌಹಾರ್ದದಿಂದ ಇರಬೇಕು. ಸರ್ಕಾರ ಎಲ್ಲರ ಪರ ಇರಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಆದರೆ ಕರ್ನಾಟಕದ ಅಸೆಂಬ್ಲಿಯಲ್ಲಿಯೇ ಆರ್ಎಸ್ಎಸ್ಗೆ ಜೈಕಾರ ಕೂಗಿರುವುದು ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.</p>.<p>‘ಅಂಬೇಡ್ಕರ್, ಗಾಂಧೀಜಿ, ನೆಹರೂ ಅವರ ಸಿದ್ಧಾಂತಗಳಲ್ಲಿ, ಹೋರಾಟಗಳಲ್ಲಿ ವ್ಯತ್ಯಾಸ ಇರಬಹುದು. ಎಲ್ಲವನ್ನು ಗೌರವಿಸುತ್ತಾ, ಒಳ್ಳೆಯ ಅಂಶಗಳನ್ನು ನಾವು ಪಡೆದುಕೊಳ್ಳಬೇಕು. ದ್ವೇಷಿಸುವುದು ಅದಕ್ಕೆ ಪರಿಹಾರ ಅಲ್ಲ’ ಎಂದು ಸಲಹೆ ನೀಡಿದರು.</p>.<p>ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಎಂ., ಮನೆಕೆಲಸದವರ ಯೂನಿಯನ್ನ ಲಕ್ಷ್ಮಮ್ಮ, ಬೀಡಿ ಕಾರ್ಮಿಕರ ಯೂನಿಯನ್ನ ಶಿರಿನ್ ಬಾನು, ಪ್ರಗತಿಪರ ಚಿಂತಕರಾದ ಅಬ್ದುಲ್ ಘನಿ ತಾಹೀರ್, ಬಾಲಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಮಹಾತ್ಮ ಗಾಂಧೀಜಿ ಸೇರಿದಂತೆ ಎಲ್ಲ ಆದರ್ಶ ವ್ಯಕ್ತಿಗಳ ದಿನವನ್ನು ಶಾಲೆಗಳಿಗೆ ರಜೆ ನೀಡಿ ಆಚರಿಸುವ ಬದಲು ರಜೆ ನೀಡದೇ ವಿದ್ಯಾರ್ಥಿಗಳಿಗೆ ಅವರ ತತ್ವ, ಸಿದ್ಧಾಂತಗಳನ್ನು ತಿಳಿಸಿ ಕೊಡುವ ಕೆಲಸ ಆಗಬೇಕು ಎಂದು ಹಿರಿಯ ವಕೀಲ ಎಲ್.ಎಚ್. ಅರುಣ ಕುಮಾರ್ ಹೇಳಿದರು.</p>.<p>ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಯೂನಿಯನ್ನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ‘ಗಾಂಧಿ ಮತ್ತು ಕೋಮು ಸೌಹಾರ್ದ’ ವಿಚಾರ ಸಂಕಿರಣ ಹಾಗೂ ಮನೆಗೆಲಸ, ಕಟ್ಟಡ ಕಾರ್ಮಿಕರಿಗೆ ಫುಡ್ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಭಾಟಿಸಿ ಅವರು ಮಾತನಾಡಿದರು.</p>.<p>ಗಾಂಧಿ ಜಯಂತಿ ಅಂದರೆ ರಜೆ ಎಂಬುದನ್ನು ಮಕ್ಕಳ ಮನಸ್ಸಿನಿಂದ ಹೋಗಲಾಡಿಸುವ ಕೆಲಸ ಆಗಬೇಕು. ಗಾಂಧೀಜಿಯ ಚಿಂತನೆಗಳನ್ನು, ಅವರ ಬದುಕಿನ ರೀತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಯಾಕೆಂದರೆ ವರ್ಷಗಳು ಕಳೆದಂತೆ ಗಾಂಧೀಜಿ ಅವರನ್ನು ಮರೆಗೆ ಸರಿಸುವ ಪ್ರಯತ್ನಗಳಾಗುತ್ತಿವೆ. ಎಲ್ಲ ಕಾಲಕ್ಕೂ ಪ್ರಸ್ತುತರಾದ ಗಾಂಧಿಯವರನ್ನು ಈ ರೀತಿ ಮರೆಯಾಗಲು ಬಿಡಬಾರದು ಎಂದು ಹೇಳಿದರು.</p>.<p>ಪ್ರಜಾಪ್ರಭುತ್ವ ಮತ್ತು ಹಿಂಸೆ, ಒಳ್ಳೆಯ ಸರ್ಕಾರ ಮತ್ತು ಭ್ರಷ್ಟಾಚಾರ ಒಟ್ಟೊಟ್ಟಿಗೆ ಇರಲು ಸಾಧ್ಯವಿಲ್ಲ. ಗಾಂಧೀಜಿಯ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುವವರು, ಅಧಿಕಾರಿಗಳು ಇದ್ದಾರೆ. ಜಾತ್ಯತೀತ, ಕೋಮು ಸೌಹಾರ್ದಕ್ಕೆ ಮತ್ತೊಂದು ಹೆಸರಾದ ಗಾಂಧೀಜಿಯ ತತ್ವಗಳು ಆಡಳಿತ ನಡೆಸುವವರಿಗೆ ಪಾಠ ಆಗಬೇಕು ಎಂದರು.</p>.<p>ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷ ಮಾತನಾಡಿ, ‘ಪ್ರೀತಿಯಿಂದ, ಸೌಹಾರ್ದದಿಂದ, ಶಾಂತಿಯಿಂದ, ಅಹಿಂಸೆಯಿಂದ ಕಟ್ಟಿದ ದೇಶ ಬೆಳೆಯುತ್ತದೆ. ಉನ್ನತ ಸ್ಥಾನಕ್ಕೆ ಹೋಗುತ್ತದೆ. ದ್ವೇಷದಿಂದ ದೇಶ ಕಟ್ಟಲು ಹೊರಟರೆ ಅದಕ್ಕೆ ದೀರ್ಘಾಯುಷ್ಯ ಇರುವುದಿಲ್ಲ’ ಎಂದು ಹೇಳಿದರು.</p>.<p>ಬ್ರಿಟಿಷರಿಂದ ವಿಮೋಚನೆ, ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಗಾಂಧೀಜಿಯ ಗುರಿಯಾಗಿತ್ತು. ಅದರಲ್ಲಿ ಬ್ರಿಟಿಷರಿಂದ ವಿಮೋಚನೆ ಮಾತ್ರ ಸಿಕ್ಕಿತು. ಹಸಿವಿನಿಂದ, ಬಡತನದಿಂದ, ಅಸಮಾನತೆಯಿಂದ ವಿಮೋಚನೆ ಇನ್ನೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಎಲ್ಲರೂ ಶಾಂತಿಯಿಂದ, ಸೌಹಾರ್ದದಿಂದ ಇರಬೇಕು. ಸರ್ಕಾರ ಎಲ್ಲರ ಪರ ಇರಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಆದರೆ ಕರ್ನಾಟಕದ ಅಸೆಂಬ್ಲಿಯಲ್ಲಿಯೇ ಆರ್ಎಸ್ಎಸ್ಗೆ ಜೈಕಾರ ಕೂಗಿರುವುದು ದೇಶ ಎತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.</p>.<p>‘ಅಂಬೇಡ್ಕರ್, ಗಾಂಧೀಜಿ, ನೆಹರೂ ಅವರ ಸಿದ್ಧಾಂತಗಳಲ್ಲಿ, ಹೋರಾಟಗಳಲ್ಲಿ ವ್ಯತ್ಯಾಸ ಇರಬಹುದು. ಎಲ್ಲವನ್ನು ಗೌರವಿಸುತ್ತಾ, ಒಳ್ಳೆಯ ಅಂಶಗಳನ್ನು ನಾವು ಪಡೆದುಕೊಳ್ಳಬೇಕು. ದ್ವೇಷಿಸುವುದು ಅದಕ್ಕೆ ಪರಿಹಾರ ಅಲ್ಲ’ ಎಂದು ಸಲಹೆ ನೀಡಿದರು.</p>.<p>ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಎಂ., ಮನೆಕೆಲಸದವರ ಯೂನಿಯನ್ನ ಲಕ್ಷ್ಮಮ್ಮ, ಬೀಡಿ ಕಾರ್ಮಿಕರ ಯೂನಿಯನ್ನ ಶಿರಿನ್ ಬಾನು, ಪ್ರಗತಿಪರ ಚಿಂತಕರಾದ ಅಬ್ದುಲ್ ಘನಿ ತಾಹೀರ್, ಬಾಲಕೃಷ್ಣ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>