ದಾವಣಗೆರೆ: ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಅವರು ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರೇಮ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಎಸ್ಪಿಬಿ ಅವರು ದೇಶದ ಬಹುತೇಕ ಭಾಷೆಗಳನ್ನು ಕರಗತ ಮಾಡಿಕೊಂಡು ಆಯಾ ಭಾಷೆಗಳನ್ನು ಅರ್ಥ ಮಾಡಿಕೊಂಡು ಹಾಡುವುದರ ಮೂಲಕ ಜನರಯ ಮೆಚ್ಚಿನ ಗಾಯಕರಾಗಿದ್ದರು. ರಾಜ್ಯ ಸರ್ಕಾರ ಎಸ್ಪಿಬಿ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಗಾಯಕರಾದ ಸುರೇಶ್ ಕೆ., ಜೀವನ್, ಕೆ. ವಾಗೀಶ್, ಜೂನಿಯರ್ ವಿಷ್ಣುವರ್ಧನ್ ಪರಮೇಶ್, ಸುದರ್ಶನ್, ಕಾಂತರಾಜ್, ನಾಟಕ ಕಲಾವಿದರ ದುರುಗೇಶ್, ಪರಶುರಾಮ್ ಅವರೂ ಇದ್ದರು.