ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾವರ್ಕರ್ ಜೊತೆಗೆ ಇನ್ನೂ 500 ಜನ ಜೈಲಲ್ಲಿ ಇದ್ದರು. ಅವರಲ್ಲಿ ಕೆಲವರನ್ನು ಬ್ರಿಟಿಷರು ಗುಂಡಿಟ್ಟು ಕೊಂದರೆ, ಇನ್ನು ಕೆಲವರನ್ನು ಲಾಠಿಯಿಂದ ಹೊಡೆದು ಸಾಯಿಸಿದರು. ಗುಂಡಿಗೆಬಲಿಯಾದವರುಸ್ವಾತಂತ್ರ್ಯಯೋಧರಾ ಅಥವಾ ಕ್ಷಮಾಪಣೆ ಪತ್ರ ಬರೆದುಕೊಟ್ಟವರಾ ಎಂಬ ಬಗ್ಗೆ ಚರ್ಚೆ ನಡೆಯಬೇಕಿದೆ’ ಎಂದರು.