ಹೋಬಳಿಯ ತಣಿಗೆರೆ, ಭೀಮನೆರೆ, ಹಿರೇಕೋಗಲೂರು ರೈತರು 50 ಎಕರೆ ಪ್ರದೇಶದಲ್ಲಿ ಬನ್ನಿ ಹತ್ತಿ ಬೆಳೆದಿದ್ದಾರೆ. ಕಳೆದ ವಾರ ಮಳೆಯ ಆರ್ಭಟಕ್ಕಿಂತ ಪೂರ್ವದಲ್ಲಿ ಉತ್ತಮ ಇಳುವರಿ ಸಿಕ್ಕಿತ್ತು. ಮಳೆ ಹೊಡೆತಕ್ಕೆ ಸಿಕ್ಕ ನಂತರ ಅನಿಯಂತ್ರಿತ ಕಾಯಿಕೊರಕ ಹುಳು ಬಾಧೆ, ಕಾಯಿ ಕೊರೆಯುವಿಕೆಯಿಂದ ಇಳುವರಿಗೆ ತೀವ್ರ ಹೊಡೆತ ಬಿದ್ದಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಷ್ಟ ಸಂಭವಿಸಿದೆ.