ಈ ಹಿಂದೆ ಪಟ್ಟಣದ ಚರಂಡಿಗಳ ನೀರನ್ನು ಬಸ್ ನಿಲ್ದಾಣದ ಬಳಿ ಇರುವ ಕೆರೆಗೆ ಬಿಡುವ ವ್ಯವಸ್ಥೆಯನ್ನು ಪುರಸಭೆಯವರು ಮಾಡಿದ್ದರು. ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆಯನ್ನು ಸುಂದರಗೊಳಿಸಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ₹ 3.50 ಕೋಟಿ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಗೆ ಬಿಡುಗಡೆ ಮಾಡಿಸಿದ್ದರು. ಇದೀಗ ಪಟ್ಟಣದಲ್ಲಿನ ಚರಂಡಿಗಳ ನೀರನ್ನು ಪೈಪ್ಲೈನ್ ಮುಖಾಂತರ ಹರಿದ್ರಾವತಿ ಹಳ್ಳಕ್ಕೆ ಸೇರಿಸಲಾಗುತ್ತಿದೆ. ಮಳೆಗಾಲದಲ್ಲಿ ಹರಿದ್ರಾವತಿ ಹಳ್ಳದ ನೀರು ಹರಿದು ಸೂಳೆಕೆರೆಯ ಒಡಲು ಸೇರಿಕೊಳ್ಳಲಿದ್ದು, ಅದರ ನೀರೂ ಮಲಿನವಾಗಲಿದೆ.