ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ದಾವಣಗೆರೆ| ಅಂಗವಿಕಲರಿಗೆ ಹತ್ತಾರು ಸೌಲಭ್ಯ: ಫಲಾನುಭವಿಗಳೇ ವಿರಳ

Published : 8 ಡಿಸೆಂಬರ್ 2025, 5:41 IST
Last Updated : 8 ಡಿಸೆಂಬರ್ 2025, 5:46 IST
ಫಾಲೋ ಮಾಡಿ
Comments
ದಾವಣಗೆರೆ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)
ದಾವಣಗೆರೆ ಹೊರವಲಯದಲ್ಲಿರುವ ದಿವ್ಯಾಂಗರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ)
ಸಿಆರ್‌ಸಿ ಮುಂಭಾಗದ ಮೆಟ್ಟಿಲುಗಳ ಮೇಲೆ ಬಸ್‌ಗಾಗಿ ಕಾದು ಕುಳಿತಿದ್ದ ಅಂಗವಿಕಲರು ಹಾಗೂ ಪೋಷಕರು
ಸಿಆರ್‌ಸಿ ಮುಂಭಾಗದ ಮೆಟ್ಟಿಲುಗಳ ಮೇಲೆ ಬಸ್‌ಗಾಗಿ ಕಾದು ಕುಳಿತಿದ್ದ ಅಂಗವಿಕಲರು ಹಾಗೂ ಪೋಷಕರು
ಅಂಗವಿಕಲರಿಗೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸಿಆರ್‌ಸಿಯಲ್ಲಿ ಕಲ್ಪಿಸಲಾಗುತ್ತಿದೆ. ಕೇಂದ್ರದ ಕುರಿತ ಮಾಹಿತಿಯನ್ನು ಅಂಗವಿಕಲರಿಗೆ ತಲುಪಿಸುವ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಲಾಗುವುದು
ಮಾರುತಿಕೃಷ್ಣ ಗೌಡ ನಿರ್ದೇಶಕ ಸಿಆರ್‌ಸಿ
ಮಗನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಉಪಕರಣದಿಂದ ಈಗ ಕಿವಿ ಕೇಳಿಸುತ್ತವೆ. ಮಾತು ಕಲಿಸುವ ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಇದೀಗ ಈ ಕೇಂದ್ರದಲ್ಲಿಯೇ ತರಬೇತಿ ಕೊಡಿಸುತ್ತಿದ್ದೇವೆ
ಅಶ್ವಿನಿ ಜಿ.ಎಂ. ಹನುಮನಹಳ್ಳಿ ದಾವಣಗೆರೆ
ಕಾಲು ಶಕ್ತಿ ಹೀನವಾಗಿವೆ. ಬಿ.ಕಾಂ ಪದವಿ ಮುಗಿಸಿದ್ದು ಸಿಆರ್‌ಸಿ ಕೇಂದ್ರದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವೆ. ಸಾರಿಗೆ ಸಮಸ್ಯೆ ಹೊರತುಪಡಿಸಿ ಬೇರೆಲ್ಲಾ ಸೌಲಭ್ಯವೂ ಇವೆ
ಹರ್ಷ ವಿ. ದಾವಣಗೆರೆ
ಸಾರಿಗೆ ಸಂಪರ್ಕ ಸಮಸ್ಯೆ 
ದಾವಣಗೆರೆಯಿಂದ ಚಿತ್ರದುರ್ಗಕ್ಕೆ ತೆರಳುವ ಮಾರ್ಗದಲ್ಲಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರಕ್ಕೆ ತೆರಳುವವರಿಗೆ ಸಾರಿಗೆ ಸಂಪರ್ಕದ ಸಮಸ್ಯೆ ಎದುರಾಗಿದೆ. ನಗರ ಸಾರಿಗೆಯ ಬಸ್‌ ದಾವಣಗೆರೆಯಿಂದ ಸಿಆರ್‌ಸಿ ಕೇಂದ್ರಕ್ಕೆ ಬೆಳಿಗ್ಗೆ 9.30ಕ್ಕೆ ಮಧ್ಯಾಹ್ನ 1.30ಕ್ಕೆ ಹಾಗೂ ಸಂಜೆ 5 ಗಂಟೆಗೆ ನಿತ್ಯವೂ ಸಂಚರಿಸುತ್ತಿದೆ. ಅಂಗವಿಕಲರು ಈ ಸಮಯಕ್ಕೆ ಮಾತ್ರವೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಬೇರೆ ಸಮಯದಲ್ಲಿ ದಾವಣಗೆರೆಯಿಂದ ಬಾಡ ಕ್ರಾಸ್‌ವರೆಗೆ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದರೂ ಅಲ್ಲಿಂದ ಮತ್ತೆ ನಡೆದು ಸಾಗಬೇಕು. ಇಲ್ಲವೇ ಆಟೊಗಳಿಗೆ ದುಬಾರಿ ಹಣ ಪಾವತಿಸಬೇಕಾದ ಅನಿವಾರ್ಯತೆ ಇದೆ.  ನಿತ್ಯವೂ ತರಬೇತಿ ಹಾಗೂ ಚಿಕಿತ್ಸೆಗೆ ತೆರಳುವ ಅಂಗವಿಕಲರನ್ನು ಕರೆದೊಯ್ಯಲು ಹಾಗೂ ಬಿಟ್ಟು ಬರಲು ಕೇಂದ್ರದಿಂದ ಒಂದು ವಾಹನ ಕಲ್ಪಿಸಿದ್ದರೂ ಅದು ಸಾಲುತ್ತಿಲ್ಲ. ಹೆಚ್ಚಿನ ವಾಹನಗಳ ಅವಶ್ಯಕತೆ ಇದೆ. ದಾವಣಗೆರೆಯಿಂದ ಸಿಆರ್‌ಸಿ ಕೇಂದ್ರಕ್ಕೆ ನಗರ ಸಾರಿಗೆಯಿಂದ ಹೆಚ್ಚಿನ ಬಸ್‌ಗಳನ್ನು ಓಡಿಸಲು ಮುಂದಾಗಬೇಕು ಎನ್ನುತ್ತಾರೆ ಅಂಗವಿಕಲರು ಹಾಗೂ ಅವರ ಪೋಷಕರು. 
ವಸತಿ ನಿಲಯ ಮಂಜೂರು
 ದಿವ್ಯಾಂಗರ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಸಬಲೀಕರಣದ ಸಂಯುಕ್ತ ಪ್ರಾದೇಶಿಕ ಕೇಂದ್ರದ ಸಮೀಪವೇ ಅಂಗವಿಕಲರಿಗಾಗಿ ವಸತಿ ನಿಲಯ ತಲೆ ಎತ್ತಲಿದೆ. ಚಿಕಿತ್ಸೆ ಹಾಗೂ ತರಬೇತಿಗೆಂದು ವಿವಿಧೆಡೆಯಿಂದ ಬರುವ ಅಂಗವಿಕಲರಿಗೆ ಈ ವಸತಿ ನಿಲಯದಿಂದ ಹೆಚ್ಚಿನ ಅನುಕೂಲ ಆಗಲಿದೆ.  ಅಂದಾಜು ₹16 ಕೋಟಿ ವೆಚ್ಚದಲ್ಲಿ 100 ಬೆಡ್‌ಗಳ ವಸತಿ ನಿಲಯ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಹಾಸ್ಟೆಲ್ ಮಂಜೂರು ಮಾಡಿದ್ದು ಒಂದೆರಡು ತಿಂಗಳಲ್ಲಿಯೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.  ‘ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಇಲ್ಲಿಗೆ ವಾರ ಅಥವಾ 10 ದಿನಕ್ಕೊಮ್ಮೆ ಮಗನನ್ನು ಚಿಕಿತ್ಸೆಗೆಂದು ಕರೆತರುತ್ತೇನೆ. ಪ್ರಯಾಣವು ತ್ರಾಸದಾಯಕವಾಗಿದೆ. ಇಲ್ಲಿಯೇ ವಸತಿ ನಿಲಯ ನಿರ್ಮಿಸುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಮಗನನ್ನು ಚಿಕಿತ್ಸೆಗೆಂದು ಕರೆ ತಂದಿದ್ದ ಸೌಮ್ಯಾ ಎಚ್‌. ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT