‘ರಾಷ್ಟ್ರಕವಿ ಅಂದರೆ ರಾಷ್ಟ್ರೀಯ ಕವಿ ಅಂತಲ್ಲ. ಕನ್ನಡದ ರಾಷ್ಟ್ರಕವಿ. ಒಬ್ಬ ಶ್ರೇಷ್ಠ ಕವಿಗೆ ಸಲ್ಲಿಸುವ ಗೌರವ
ವಿದು. ಕನ್ನಡದ ಹಿರಿಮೆಯನ್ನು ಸಾರುವ ಕೆಲಸ ಇದು. ಹೀಗಾಗಿ ರಾಷ್ಟ್ರಕವಿ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು’ ಎಂದು ಎಲ್.ಜಿ ಮಧುಕುಮಾರ್ ಬಸವಾಪಟ್ಟಣ, ಸಂತೇಬೆನ್ನೂರು ಫೈಜ್ನಟ್ರಾಜ್, ದಾವಣಗೆರೆಯ ಜಿ.ಮುದ್ದುವೀರಸ್ವಾಮಿ ಮುಂತಾದ ಯುವಲೇಖಕರು ಅಭಿಯಾನ ಆರಂಭಿಸಿದ್ದಾರೆ.