<p><strong>ದಾವಣಗೆರೆ: </strong>ಜೀವಂತ ಇರುವ ಕನ್ನಡದ ಶ್ರೇಷ್ಠ ಕವಿಯೊಬ್ಬರನ್ನು ಗುರುತಿಸಿ ಅವರಿಗೆ ‘ರಾಷ್ಟ್ರಕವಿ’ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಿದೆ. ಈ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಬೇಕು ಎಂಬ ಅಭಿಯಾನ ಈಗ ಹುಟ್ಟಿಕೊಂಡಿದೆ.</p>.<p>ಗೋವಿಂದ ಪೈ ಅವರನ್ನು ರಾಷ್ಟ್ರಕವಿ ಎಂದು ಮೊದಲ ಬಾರಿಗೆ 1949ರಲ್ಲಿ ಗುರುತಿಸಲಾಗಿತ್ತು. ಆಗ ದಕ್ಷಿಣ ಕನ್ನಡವು ಮದ್ರಾಸ್ ಸರ್ಕಾರದ ಅಡಿಯಲ್ಲಿ ಇತ್ತು. 1956ರಲ್ಲಿ ಏಕೀಕರಣಗೊಂಡಾಗ ದಕ್ಷಿಣ ಕನ್ನಡ ಮೈಸೂರು ರಾಜ್ಯಕ್ಕೆ ಸೇರಿತ್ತು.</p>.<p>ಒಮ್ಮೆ ಈ ಅಭಿದಾನವನ್ನು ನೀಡಿದ ಮೇಲೆ ಅವರು ಜೀವಂತ ಇರುವವರೆಗೆ ಮತ್ತೊಬ್ಬರಿಗೆ ನೀಡಲಾಗುವುದಿಲ್ಲ. 1963ರಲ್ಲಿ ಗೋವಿಂದ ಪೈ ನಿಧನರಾದರು. ಒಂದು ವರ್ಷದ ಬಳಿಕ 1964ರಲ್ಲಿ ಕುವೆಂಪು ಅವರನ್ನು ಮೈಸೂರು ರಾಜ್ಯ ಸರ್ಕಾರ (ಈಗ ಕರ್ನಾಟಕ ಸರ್ಕಾರ) ರಾಷ್ಟ್ರಕವಿ ಎಂದು ಗುರುತಿಸಿ ಗೌರವಿಸಿತು.</p>.<p>1994ರಲ್ಲಿ ಕುವೆಂಪು ನಿಧನರಾದರು. ಅಲ್ಲಿಂದ 12 ವರ್ಷಗಳ ಕಾಲ ಯಾರನ್ನೂ ರಾಷ್ಟ್ರಕವಿ ಎಂದು ಗುರುತಿಸುವ ಕಾರ್ಯ ನಡೆಯಲಿಲ್ಲ. 2006ರಲ್ಲಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಈ ಅಭಿದಾನವನ್ನು ನೀಡಲಾಯಿತು. 2013ರಲ್ಲಿ ಅವರು ನಿಧನರಾದರು.</p>.<p>ಜಿಎಸ್ಎಸ್ ನಿಧನರಾದ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಷ್ಟ್ರಕವಿ ಆಯ್ಕೆಗಾಗಿ ಕೋ ಚೆನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ರಾಷ್ಟ್ರಕವಿ ಸ್ಥಾನಮಾನವೇ ಅಪ್ರಸ್ತುತ. ಅದು ರಾಜ ಪ್ರಭುತ್ವದ ಪಳೆಯುಳಿಕೆ ಎಂದು ವರದಿ ನೀಡಿತ್ತು. ಆಗ ಹಲವು ಸಾಹಿತಿಗಳು ಇದರ ಪರ ಮತ್ತು ವಿರೋಧ ಹೇಳಿಕೆಗಳನ್ನು ನೀಡಿದ್ದರು. ಆಮೇಲೆ ನನೆಗುದಿಗೆ ಬಿದ್ದಿದೆ.</p>.<p>‘ರಾಷ್ಟ್ರಕವಿ ಅಂದರೆ ರಾಷ್ಟ್ರೀಯ ಕವಿ ಅಂತಲ್ಲ. ಕನ್ನಡದ ರಾಷ್ಟ್ರಕವಿ. ಒಬ್ಬ ಶ್ರೇಷ್ಠ ಕವಿಗೆ ಸಲ್ಲಿಸುವ ಗೌರವ<br />ವಿದು. ಕನ್ನಡದ ಹಿರಿಮೆಯನ್ನು ಸಾರುವ ಕೆಲಸ ಇದು. ಹೀಗಾಗಿ ರಾಷ್ಟ್ರಕವಿ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು’ ಎಂದು ಎಲ್.ಜಿ ಮಧುಕುಮಾರ್ ಬಸವಾಪಟ್ಟಣ, ಸಂತೇಬೆನ್ನೂರು ಫೈಜ್ನಟ್ರಾಜ್, ದಾವಣಗೆರೆಯ ಜಿ.ಮುದ್ದುವೀರಸ್ವಾಮಿ ಮುಂತಾದ ಯುವಲೇಖಕರು ಅಭಿಯಾನ ಆರಂಭಿಸಿದ್ದಾರೆ.</p>.<p>ಜಿಲ್ಲಾಧಿಕಾರಿಗೆ ಮನವಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕನ್ನಡದ ಶ್ರೇಷ್ಠ ಕವಿಯನ್ನು<br />ಗುರುತಿಸಿ ಸಲ್ಲಿಸುವ ಗೌರವಕ್ಕೆ ತಡೆ ಸಲ್ಲದು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಜೀವಂತ ಇರುವ ಕನ್ನಡದ ಶ್ರೇಷ್ಠ ಕವಿಯೊಬ್ಬರನ್ನು ಗುರುತಿಸಿ ಅವರಿಗೆ ‘ರಾಷ್ಟ್ರಕವಿ’ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಿದೆ. ಈ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಬೇಕು ಎಂಬ ಅಭಿಯಾನ ಈಗ ಹುಟ್ಟಿಕೊಂಡಿದೆ.</p>.<p>ಗೋವಿಂದ ಪೈ ಅವರನ್ನು ರಾಷ್ಟ್ರಕವಿ ಎಂದು ಮೊದಲ ಬಾರಿಗೆ 1949ರಲ್ಲಿ ಗುರುತಿಸಲಾಗಿತ್ತು. ಆಗ ದಕ್ಷಿಣ ಕನ್ನಡವು ಮದ್ರಾಸ್ ಸರ್ಕಾರದ ಅಡಿಯಲ್ಲಿ ಇತ್ತು. 1956ರಲ್ಲಿ ಏಕೀಕರಣಗೊಂಡಾಗ ದಕ್ಷಿಣ ಕನ್ನಡ ಮೈಸೂರು ರಾಜ್ಯಕ್ಕೆ ಸೇರಿತ್ತು.</p>.<p>ಒಮ್ಮೆ ಈ ಅಭಿದಾನವನ್ನು ನೀಡಿದ ಮೇಲೆ ಅವರು ಜೀವಂತ ಇರುವವರೆಗೆ ಮತ್ತೊಬ್ಬರಿಗೆ ನೀಡಲಾಗುವುದಿಲ್ಲ. 1963ರಲ್ಲಿ ಗೋವಿಂದ ಪೈ ನಿಧನರಾದರು. ಒಂದು ವರ್ಷದ ಬಳಿಕ 1964ರಲ್ಲಿ ಕುವೆಂಪು ಅವರನ್ನು ಮೈಸೂರು ರಾಜ್ಯ ಸರ್ಕಾರ (ಈಗ ಕರ್ನಾಟಕ ಸರ್ಕಾರ) ರಾಷ್ಟ್ರಕವಿ ಎಂದು ಗುರುತಿಸಿ ಗೌರವಿಸಿತು.</p>.<p>1994ರಲ್ಲಿ ಕುವೆಂಪು ನಿಧನರಾದರು. ಅಲ್ಲಿಂದ 12 ವರ್ಷಗಳ ಕಾಲ ಯಾರನ್ನೂ ರಾಷ್ಟ್ರಕವಿ ಎಂದು ಗುರುತಿಸುವ ಕಾರ್ಯ ನಡೆಯಲಿಲ್ಲ. 2006ರಲ್ಲಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಈ ಅಭಿದಾನವನ್ನು ನೀಡಲಾಯಿತು. 2013ರಲ್ಲಿ ಅವರು ನಿಧನರಾದರು.</p>.<p>ಜಿಎಸ್ಎಸ್ ನಿಧನರಾದ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಷ್ಟ್ರಕವಿ ಆಯ್ಕೆಗಾಗಿ ಕೋ ಚೆನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ರಾಷ್ಟ್ರಕವಿ ಸ್ಥಾನಮಾನವೇ ಅಪ್ರಸ್ತುತ. ಅದು ರಾಜ ಪ್ರಭುತ್ವದ ಪಳೆಯುಳಿಕೆ ಎಂದು ವರದಿ ನೀಡಿತ್ತು. ಆಗ ಹಲವು ಸಾಹಿತಿಗಳು ಇದರ ಪರ ಮತ್ತು ವಿರೋಧ ಹೇಳಿಕೆಗಳನ್ನು ನೀಡಿದ್ದರು. ಆಮೇಲೆ ನನೆಗುದಿಗೆ ಬಿದ್ದಿದೆ.</p>.<p>‘ರಾಷ್ಟ್ರಕವಿ ಅಂದರೆ ರಾಷ್ಟ್ರೀಯ ಕವಿ ಅಂತಲ್ಲ. ಕನ್ನಡದ ರಾಷ್ಟ್ರಕವಿ. ಒಬ್ಬ ಶ್ರೇಷ್ಠ ಕವಿಗೆ ಸಲ್ಲಿಸುವ ಗೌರವ<br />ವಿದು. ಕನ್ನಡದ ಹಿರಿಮೆಯನ್ನು ಸಾರುವ ಕೆಲಸ ಇದು. ಹೀಗಾಗಿ ರಾಷ್ಟ್ರಕವಿ ಅಭಿದಾನವನ್ನು ನೀಡುವ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು’ ಎಂದು ಎಲ್.ಜಿ ಮಧುಕುಮಾರ್ ಬಸವಾಪಟ್ಟಣ, ಸಂತೇಬೆನ್ನೂರು ಫೈಜ್ನಟ್ರಾಜ್, ದಾವಣಗೆರೆಯ ಜಿ.ಮುದ್ದುವೀರಸ್ವಾಮಿ ಮುಂತಾದ ಯುವಲೇಖಕರು ಅಭಿಯಾನ ಆರಂಭಿಸಿದ್ದಾರೆ.</p>.<p>ಜಿಲ್ಲಾಧಿಕಾರಿಗೆ ಮನವಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕನ್ನಡದ ಶ್ರೇಷ್ಠ ಕವಿಯನ್ನು<br />ಗುರುತಿಸಿ ಸಲ್ಲಿಸುವ ಗೌರವಕ್ಕೆ ತಡೆ ಸಲ್ಲದು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>