<p><strong>ದಾವಣಗೆರೆ:</strong>ಜೈನ ಧರ್ಮದ 22ನೇ ತೀರ್ಥಂಕರರಾದ ಭಗವಾನ್ ನೇಮಿನಾಥ್ ಅವರ ದೀಕ್ಷೆ ದಿನದ ಅಂಗವಾಗಿ 70 ನಿರ್ಗತಿಕರಿಗೆ ಊಟ, ವಸ್ತ್ರಗಳನ್ನು ನೀಡಲಾಯಿತು.</p>.<p>ಇಲ್ಲಿನ ಜೈನ್ ಬಜಾಜ್ ಶೋ ರೂಂ ಎದುರಿನ ಜೈನ್ ದಾದವಾಡಿಗೆ ಬೀದಿ ಬದಿಯಲ್ಲಿದ್ದ ನಿರ್ಗತಿಕರನ್ನು ಕರೆತಂದಜೈನ್ ಯೂತ್ಸ್ ಆಫ್ ದಾವಣಗೆರೆಯ ಸದಸ್ಯರು ಅವರಿಗೆ ಕ್ಷೌರ ಮಾಡಿ ಹಾಗೂ ಶೇವಿಂಗ್ ಮಾಡಿಸಿ, ಹೊಸ ಬಟ್ಟೆಗಳನ್ನು ತೊಡಿಸಿ, ಶೂಗಳನ್ನು ನೀಡಿದರು. ಇದರ ಜೊತೆಗೆ ಊಟವನ್ನು ಬಡಿಸಿದರು.</p>.<p>ಆಚಾರ್ಯ ಅಭಯ್ ಶೇಖರ್ ವಿಜಯ್ ಜೀ ಮಹಾರಾಜ್ ಅವರ ಆಶೀರ್ವಾದ ಹಾಗೂ ಸುಪಾರ್ಶ್ವನಾಥ ಶ್ವೇತಾಂಬರ ಜೈನ್ ಮೂರ್ತಿಪೂಜಕ ಸಂಘದ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ಈ ಕಾರ್ಯಕ್ರಮದಲ್ಲಿ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ಛಗನ್ಲಾಲ್ ಜೈನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಜೈನ ಸಮಾಜದ ಮುಖಂಡರಾದ ಜಯಚಂದ್ ಜೈನ್, ಕಿಶೋರ್ ಜೈನ, ಶ್ರೇಣಿಕ್ ಜೈನ್, ಸಾವನ್ ಜೈನ್, ಜೈನ್ ಯೂತ್ಸ್ ಆಫ್ ದಾವಣಗೆರೆ ತಂಡದ ರೋಣಕ್, ನಹುಶ್, ಹನುಶ್, ಆಯೂಷ್, ಅಭಿಷೇಕ, ಶೋನಿತ್, ಪ್ರದೀಪ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong>ಜೈನ ಧರ್ಮದ 22ನೇ ತೀರ್ಥಂಕರರಾದ ಭಗವಾನ್ ನೇಮಿನಾಥ್ ಅವರ ದೀಕ್ಷೆ ದಿನದ ಅಂಗವಾಗಿ 70 ನಿರ್ಗತಿಕರಿಗೆ ಊಟ, ವಸ್ತ್ರಗಳನ್ನು ನೀಡಲಾಯಿತು.</p>.<p>ಇಲ್ಲಿನ ಜೈನ್ ಬಜಾಜ್ ಶೋ ರೂಂ ಎದುರಿನ ಜೈನ್ ದಾದವಾಡಿಗೆ ಬೀದಿ ಬದಿಯಲ್ಲಿದ್ದ ನಿರ್ಗತಿಕರನ್ನು ಕರೆತಂದಜೈನ್ ಯೂತ್ಸ್ ಆಫ್ ದಾವಣಗೆರೆಯ ಸದಸ್ಯರು ಅವರಿಗೆ ಕ್ಷೌರ ಮಾಡಿ ಹಾಗೂ ಶೇವಿಂಗ್ ಮಾಡಿಸಿ, ಹೊಸ ಬಟ್ಟೆಗಳನ್ನು ತೊಡಿಸಿ, ಶೂಗಳನ್ನು ನೀಡಿದರು. ಇದರ ಜೊತೆಗೆ ಊಟವನ್ನು ಬಡಿಸಿದರು.</p>.<p>ಆಚಾರ್ಯ ಅಭಯ್ ಶೇಖರ್ ವಿಜಯ್ ಜೀ ಮಹಾರಾಜ್ ಅವರ ಆಶೀರ್ವಾದ ಹಾಗೂ ಸುಪಾರ್ಶ್ವನಾಥ ಶ್ವೇತಾಂಬರ ಜೈನ್ ಮೂರ್ತಿಪೂಜಕ ಸಂಘದ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ಈ ಕಾರ್ಯಕ್ರಮದಲ್ಲಿ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ಛಗನ್ಲಾಲ್ ಜೈನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಜೈನ ಸಮಾಜದ ಮುಖಂಡರಾದ ಜಯಚಂದ್ ಜೈನ್, ಕಿಶೋರ್ ಜೈನ, ಶ್ರೇಣಿಕ್ ಜೈನ್, ಸಾವನ್ ಜೈನ್, ಜೈನ್ ಯೂತ್ಸ್ ಆಫ್ ದಾವಣಗೆರೆ ತಂಡದ ರೋಣಕ್, ನಹುಶ್, ಹನುಶ್, ಆಯೂಷ್, ಅಭಿಷೇಕ, ಶೋನಿತ್, ಪ್ರದೀಪ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>