<p><strong>ಹೊನ್ನಾಳಿ:</strong> ಇಲ್ಲಿನ ಶ್ರೀಚನ್ನಪ್ಪಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಸೇರಿದ್ದ ಭಕ್ತರು ಉಡುಪಿಯ ಪುತ್ತಿಗೆ ಮಠಕ್ಕೆ ಸುಭದ್ರೆ ಆನೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು. </p>.<p>ಉಡುಪಿ ಮಠದವರು ಬೇಡ ಎಂದ ಕಾರಣಕ್ಕೆ ₹8 ಲಕ್ಷಕ್ಕೂ ಅಧಿಕ ಶುಲ್ಕ ಭರಿಸಿ ಸಕ್ರೆಬೈಲ್ನಿಂದ ಆನೆಯನ್ನು ತಂದಿದ್ದೇವೆ. ಅದಕ್ಕೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸಿದ್ದೆವು. ನಾವೇ ಸುಭದ್ರೆ ಎಂದೂ ನಾಮಕರಣ ಮಾಡಿದ್ದೆವು ಎಂದು ಮಠದವರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. </p>.<p>ನಾವು ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದರಿಂದಾಗಿ 4 ಟನ್ನಷ್ಟು ತೂಕವಿದ್ದ ಆನೆ ಈಗ 6 ಟನ್ಗೂ ಅಧಿಕ ತೂಕ ಹೊಂದಿದೆ. ಇಲ್ಲಿನ ಭಕ್ತರಿಗೆ ಅದು ಚೆನ್ನಾಗಿ ಹೊಂದಿಕೊಂಡಿದೆ ಎಂದೂ ತಿಳಿಸಿದರು. </p>.<p>ಮಠದಲ್ಲಿ ನಡೆದ ಸಭೆಯಲ್ಲಿ ಭಕ್ತರಾದ ಎಚ್.ಎ. ಉಮಾಪತಿ, ಎಚ್.ಆರ್. ಶಿವಕುಮಾರ್, ಹೊಸಕೇರಿ ಸುರೇಶ್, ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಆನೆಯನ್ನು ಯಾವುದೇ ಕಾರಣಕ್ಕೂ ಕಳುಹಿಸಬಾರದು ಎಂಬ ತೀರ್ಮಾನವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು. </p>.<p>ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ದೂರವಾಣಿ ಕರೆ ಮಾಡಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಆನೆಯನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಖಂಡ್ರೆಯವರು ಹೊನ್ನಾಳಿಯ ಮಠಕ್ಕೆ ಹೊಸದೊಂದು ಆನೆ ಕೊಡಿಸುವ ಭರವಸೆ ನೀಡಿದರು. ಆಗ ಭಕ್ತರು ಆ ಆನೆಯನ್ನು ಉಡುಪಿಯ ಮಠಕ್ಕೆ ಕಳಿಸಿಕೊಡುವಂತೆ ತಿಳಿಸಿದರು. </p>.<p>‘ಉಡುಪಿ ಮಠದ ಮೇಲೆ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ ಇದೆ. ಅವರ ಮನವೊಲಿಸಿ ನಾವು ಈ ಆನೆಯನ್ನು ಮಠದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಸಂಘರ್ಷ ಬೇಡ, ಸಾಮರಸ್ಯದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದು ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಇಲ್ಲಿನ ಶ್ರೀಚನ್ನಪ್ಪಸ್ವಾಮಿ ಮಠದ ಆವರಣದಲ್ಲಿ ಭಾನುವಾರ ಸೇರಿದ್ದ ಭಕ್ತರು ಉಡುಪಿಯ ಪುತ್ತಿಗೆ ಮಠಕ್ಕೆ ಸುಭದ್ರೆ ಆನೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು. </p>.<p>ಉಡುಪಿ ಮಠದವರು ಬೇಡ ಎಂದ ಕಾರಣಕ್ಕೆ ₹8 ಲಕ್ಷಕ್ಕೂ ಅಧಿಕ ಶುಲ್ಕ ಭರಿಸಿ ಸಕ್ರೆಬೈಲ್ನಿಂದ ಆನೆಯನ್ನು ತಂದಿದ್ದೇವೆ. ಅದಕ್ಕೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸಿದ್ದೆವು. ನಾವೇ ಸುಭದ್ರೆ ಎಂದೂ ನಾಮಕರಣ ಮಾಡಿದ್ದೆವು ಎಂದು ಮಠದವರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. </p>.<p>ನಾವು ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವುದರಿಂದಾಗಿ 4 ಟನ್ನಷ್ಟು ತೂಕವಿದ್ದ ಆನೆ ಈಗ 6 ಟನ್ಗೂ ಅಧಿಕ ತೂಕ ಹೊಂದಿದೆ. ಇಲ್ಲಿನ ಭಕ್ತರಿಗೆ ಅದು ಚೆನ್ನಾಗಿ ಹೊಂದಿಕೊಂಡಿದೆ ಎಂದೂ ತಿಳಿಸಿದರು. </p>.<p>ಮಠದಲ್ಲಿ ನಡೆದ ಸಭೆಯಲ್ಲಿ ಭಕ್ತರಾದ ಎಚ್.ಎ. ಉಮಾಪತಿ, ಎಚ್.ಆರ್. ಶಿವಕುಮಾರ್, ಹೊಸಕೇರಿ ಸುರೇಶ್, ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡಿದ್ದರು. ಆನೆಯನ್ನು ಯಾವುದೇ ಕಾರಣಕ್ಕೂ ಕಳುಹಿಸಬಾರದು ಎಂಬ ತೀರ್ಮಾನವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು. </p>.<p>ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ದೂರವಾಣಿ ಕರೆ ಮಾಡಿದ್ದ ಮಾಜಿ ಸಚಿವ ರೇಣುಕಾಚಾರ್ಯ, ಆನೆಯನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಖಂಡ್ರೆಯವರು ಹೊನ್ನಾಳಿಯ ಮಠಕ್ಕೆ ಹೊಸದೊಂದು ಆನೆ ಕೊಡಿಸುವ ಭರವಸೆ ನೀಡಿದರು. ಆಗ ಭಕ್ತರು ಆ ಆನೆಯನ್ನು ಉಡುಪಿಯ ಮಠಕ್ಕೆ ಕಳಿಸಿಕೊಡುವಂತೆ ತಿಳಿಸಿದರು. </p>.<p>‘ಉಡುಪಿ ಮಠದ ಮೇಲೆ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ ಇದೆ. ಅವರ ಮನವೊಲಿಸಿ ನಾವು ಈ ಆನೆಯನ್ನು ಮಠದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಸಂಘರ್ಷ ಬೇಡ, ಸಾಮರಸ್ಯದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ’ ಎಂದು ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>