‘4 ತಿಂಗಳು ಕಳೆದರೂ ನಾಲೆ ದುರಸ್ತಿಯಾಗದಿದ್ದಾಗ ಪುನಃ ಕಾಡಾ ಅಧ್ಯಕ್ಷರನ್ನು ಸಂಪರ್ಕಿಸಿದೆವು. ಅವರುಹಣಕಾಸಿನ ಮಂಜೂರಾತಿ ಸಿಕ್ಕಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಭೇಟಿ ಮಾಡಿದರೆ ಶಾಸಕರ ಕಡೆ ಬೊಟ್ಟು ಮಾಡಿದರು. ಶಾಸಕ ಎಸ್. ರಾಮಪ್ಪ ಅವರನ್ನು ಭೇಟಿ ಮಾಡಿದಾಗ, ಆರ್ಥಿಕ ಬಿಕ್ಕಟ್ಟನ್ನು ತೋರಿಸಿದರು. ಇದರಿಂದ ಬೇಸತ್ತು ಸ್ವಂತ ಹಣ ಹಾಕಿ ನಾಲೆ ದುರಸ್ತಿ ಮಾಡುವ ನಿರ್ಧಾರ ಮಾಡಿದೆವು’ ಎಂದು ಒ.ಜಿ. ಶಿವಕುಮಾರ, ಕುಬೇರಪ್ಪ ಕೆ.ಜಿ. ಭೀಮಣ್ಣ, ಹಲವಾಗಲು ಚಂದ್ರಪ್ಪ, ದೇವೇಂದ್ರಪ್ಪ ಪೂಜಾರ್, ಶಿವನಗೌಡ ತಿಳಿಸಿದರು.