<p><strong>ದಾವಣಗೆರೆ:</strong> ‘ಜಿ.ಎಸ್.ಟಿ ಕಾಯ್ದೆಯಡಿ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಹೊಸ ನಮೂನೆಗಳು ಸರಳ ಹಾಗೂ ವರ್ತಕಸ್ನೇಹಿಯಾಗಿದೆ. ಇವುಗಳಿಂದಾಗಿ ಇನ್ಪುಟ್ ತೆರಿಗೆ ವಂಚನೆ ಅಸಾಧ್ಯವಾಗಲಿದೆ’ ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಆರ್.ಟಿ. ರಮೇಶ್ ಗೌಡ ಹೇಳಿದರು.</p>.<p>ವಾಣಿಜ್ಯ ತೆರಿಗೆ ಇಲಾಖೆ ಆಶ್ರಯದಲ್ಲಿ ವಾಣಿಜ್ಯ ತೆರಿಗೆ ಭವನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್, ತೆರಿಗೆ ಸಲಹೆಗಾರರು ಹಾಗೂ ವರ್ತಕರಿಗಾಗಿ ಜಿ.ಎಸ್.ಟಿ. ಕಾಯ್ದೆಯ ನೂತನ ನಮೂನೆಗಳ ಸಲ್ಲಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ತಿಂಗಳ ನೂತನ ನಮೂನೆಗಳಾದ ಅನೆಕ್ಸ್–1 ಹಾಗೂ ಅನೆಕ್ಸ್–2ರ ಬಗ್ಗೆ ಮಾಹಿತಿ ನೀಡಿದ ಅವರು, ‘ಹೊಸ ನಮೂನೆಗಳಿಂದ ಖರೀದಿದಾರರಿಗೆ ತಮ್ಮ ಮಾರಾಟಗಾರರು ವರದಿ ಸಲ್ಲಿಸಿದ್ದಾರೆಯೇ ಹಾಗೂ ತಮಗೆ ಇನ್ಪುಟ್ ತೆರಿಗೆ ದೊರೆಯುವ ಬಗ್ಗೆ ಮಾಹಿತಿ ತಕ್ಷಣವೇ ಸಿಗಲು ಸಾಧ್ಯವಾಗಲಿದೆ. ಈ ಹಿಂದೆ ಇನ್ಪುಟ್ ತೆರಿಗೆ ಪಡೆಯಲು ಮಾರಾಟಗಾರರಿಂದ ಆಗುತ್ತಿದ್ದ ವಂಚನೆಯನ್ನು ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಾಗಲಿದೆ’ ಎಂದು ಹೇಳಿದರು.</p>.<p>ತಿಂಗಳಿಗೆ ₹ 5 ಕೋಟಿಗಿಂತ ಹೆಚ್ಚಿನ ವಹಿವಾಟು ಮಾಡುವ ವರ್ತಕರು ತಿಂಗಳ ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ. ಕಡಿಮೆ ವಹಿವಾಟು ನಡೆಸುವ ವರ್ತಕರಿಗೆ ಸಹಜ್ ಹಾಗೂ ಸುಗಮ್ ಎಂಬ ಸರಳೀಕೃತ ನಮೂನೆಗಳು ಬರಲಿವೆ ಎಂದು ತಿಳಿಸಿದರು.</p>.<p>ಎಸ್.ಟಿ.ಪಿ. ಅಸೋಸಿಯೇಷನ್ ಅಧ್ಯಕ್ಷ ಜಂಬಗಿ ರಾಧೇಶ್, ‘ಇಂತಹ ತರಬೇತಿಗಳು ತೆರಿಗೆ ಸಲಹೆಗಾರರಿಗೆ ಅಗತ್ಯವಾಗಿದೆ. ಇದರಿಂದ ಹೊಸ ನಮೂನೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಿಗದಿತ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.</p>.<p>ಸಿ.ಎ. ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಪಾಟೀಲ್, ‘ಇಂತಹ ತರಬೇತಿಗಳಿಂದ ಜಿ.ಎಸ್.ಟಿ.ಯಲ್ಲಿ ಉಂಟಾಗಿದ್ದ ಗೊಂದಲಗಳು ನಿವಾರಣೆಯಾಗಲಿದೆ. ಸಿಎ ಹಾಗೂ ತೆರಿಗೆ ಸಲಹೆಗಾರರು ಇಂತಹ ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಳ್ಳಬೇಕು. ತಮ್ಮ ಪ್ರಕರಣಗಳಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ತರಬೇತಿ ಕಾರ್ಯಕ್ರಮವನ್ನು ಇಲಾಖೆಯ ಅಧಿಕಾರಿಗಳಾದ ಡಾ. ಕೆ.ಎಚ್. ನಿತಿನ್, ಡಿ. ರಘು ಮತ್ತು ಎನ್. ಪ್ರದೀಪ್ ನಡೆಸಿಕೊಟ್ಟರು. ಉಪ ಆಯುಕ್ತ ಪಿ. ಪರಮೇಶ್ವರ ಗೌಡ ಅವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಮತ್ತು ಅನುಮಾನಗಳಿಗೆ ವಿವರಣೆ ನೀಡಿದರು.</p>.<p>ಇಲಾಖೆಯ ಅಧಿಕಾರಿ ಎಸ್.ಪಿ. ಸುಮಲತಾ, ಗಂಗಮ್ಮ ಉಳ್ಳತ್ತಿ ಮತ್ತು ಎಚ್.ಕ್ಯೂ. ಜಿ.ಪಿ. ಶ್ರೀಧರ್ ಆಚಾರ್ ಹಾಜರಿದ್ದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ತೆರಿಗೆ ಸಲಹೆಗಾರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ಜಿ.ಎಸ್.ಟಿ ಕಾಯ್ದೆಯಡಿ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಹೊಸ ನಮೂನೆಗಳು ಸರಳ ಹಾಗೂ ವರ್ತಕಸ್ನೇಹಿಯಾಗಿದೆ. ಇವುಗಳಿಂದಾಗಿ ಇನ್ಪುಟ್ ತೆರಿಗೆ ವಂಚನೆ ಅಸಾಧ್ಯವಾಗಲಿದೆ’ ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಆರ್.ಟಿ. ರಮೇಶ್ ಗೌಡ ಹೇಳಿದರು.</p>.<p>ವಾಣಿಜ್ಯ ತೆರಿಗೆ ಇಲಾಖೆ ಆಶ್ರಯದಲ್ಲಿ ವಾಣಿಜ್ಯ ತೆರಿಗೆ ಭವನದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್, ತೆರಿಗೆ ಸಲಹೆಗಾರರು ಹಾಗೂ ವರ್ತಕರಿಗಾಗಿ ಜಿ.ಎಸ್.ಟಿ. ಕಾಯ್ದೆಯ ನೂತನ ನಮೂನೆಗಳ ಸಲ್ಲಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ತಿಂಗಳ ನೂತನ ನಮೂನೆಗಳಾದ ಅನೆಕ್ಸ್–1 ಹಾಗೂ ಅನೆಕ್ಸ್–2ರ ಬಗ್ಗೆ ಮಾಹಿತಿ ನೀಡಿದ ಅವರು, ‘ಹೊಸ ನಮೂನೆಗಳಿಂದ ಖರೀದಿದಾರರಿಗೆ ತಮ್ಮ ಮಾರಾಟಗಾರರು ವರದಿ ಸಲ್ಲಿಸಿದ್ದಾರೆಯೇ ಹಾಗೂ ತಮಗೆ ಇನ್ಪುಟ್ ತೆರಿಗೆ ದೊರೆಯುವ ಬಗ್ಗೆ ಮಾಹಿತಿ ತಕ್ಷಣವೇ ಸಿಗಲು ಸಾಧ್ಯವಾಗಲಿದೆ. ಈ ಹಿಂದೆ ಇನ್ಪುಟ್ ತೆರಿಗೆ ಪಡೆಯಲು ಮಾರಾಟಗಾರರಿಂದ ಆಗುತ್ತಿದ್ದ ವಂಚನೆಯನ್ನು ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಾಗಲಿದೆ’ ಎಂದು ಹೇಳಿದರು.</p>.<p>ತಿಂಗಳಿಗೆ ₹ 5 ಕೋಟಿಗಿಂತ ಹೆಚ್ಚಿನ ವಹಿವಾಟು ಮಾಡುವ ವರ್ತಕರು ತಿಂಗಳ ನಮೂನೆಗಳನ್ನು ಸಲ್ಲಿಸಬೇಕಾಗುತ್ತದೆ. ಕಡಿಮೆ ವಹಿವಾಟು ನಡೆಸುವ ವರ್ತಕರಿಗೆ ಸಹಜ್ ಹಾಗೂ ಸುಗಮ್ ಎಂಬ ಸರಳೀಕೃತ ನಮೂನೆಗಳು ಬರಲಿವೆ ಎಂದು ತಿಳಿಸಿದರು.</p>.<p>ಎಸ್.ಟಿ.ಪಿ. ಅಸೋಸಿಯೇಷನ್ ಅಧ್ಯಕ್ಷ ಜಂಬಗಿ ರಾಧೇಶ್, ‘ಇಂತಹ ತರಬೇತಿಗಳು ತೆರಿಗೆ ಸಲಹೆಗಾರರಿಗೆ ಅಗತ್ಯವಾಗಿದೆ. ಇದರಿಂದ ಹೊಸ ನಮೂನೆಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ನಿಗದಿತ ಸಮಯದೊಳಗೆ ಸಲ್ಲಿಸಲು ಸಾಧ್ಯವಾಗಲಿದೆ’ ಎಂದು ಹೇಳಿದರು.</p>.<p>ಸಿ.ಎ. ಅಸೋಸಿಯೇಷನ್ ಅಧ್ಯಕ್ಷ ಕಿರಣ್ ಪಾಟೀಲ್, ‘ಇಂತಹ ತರಬೇತಿಗಳಿಂದ ಜಿ.ಎಸ್.ಟಿ.ಯಲ್ಲಿ ಉಂಟಾಗಿದ್ದ ಗೊಂದಲಗಳು ನಿವಾರಣೆಯಾಗಲಿದೆ. ಸಿಎ ಹಾಗೂ ತೆರಿಗೆ ಸಲಹೆಗಾರರು ಇಂತಹ ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಳ್ಳಬೇಕು. ತಮ್ಮ ಪ್ರಕರಣಗಳಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ತರಬೇತಿ ಕಾರ್ಯಕ್ರಮವನ್ನು ಇಲಾಖೆಯ ಅಧಿಕಾರಿಗಳಾದ ಡಾ. ಕೆ.ಎಚ್. ನಿತಿನ್, ಡಿ. ರಘು ಮತ್ತು ಎನ್. ಪ್ರದೀಪ್ ನಡೆಸಿಕೊಟ್ಟರು. ಉಪ ಆಯುಕ್ತ ಪಿ. ಪರಮೇಶ್ವರ ಗೌಡ ಅವರು ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಮತ್ತು ಅನುಮಾನಗಳಿಗೆ ವಿವರಣೆ ನೀಡಿದರು.</p>.<p>ಇಲಾಖೆಯ ಅಧಿಕಾರಿ ಎಸ್.ಪಿ. ಸುಮಲತಾ, ಗಂಗಮ್ಮ ಉಳ್ಳತ್ತಿ ಮತ್ತು ಎಚ್.ಕ್ಯೂ. ಜಿ.ಪಿ. ಶ್ರೀಧರ್ ಆಚಾರ್ ಹಾಜರಿದ್ದರು. ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್ಸ್ ಹಾಗೂ ತೆರಿಗೆ ಸಲಹೆಗಾರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>