ಈ ಕೆಲಸ ಮಾಡಿಕೊಡಲು ₹ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಸಿದ್ದಪ್ಪ, ಡಿಸೆಂಬರ್ 13ರಂದು ಮುಂಗಡವಾಗಿ ₹ 10,000 ಪಡೆದುಕೊಂಡಿದ್ದರು. ಬಾಕಿ ₹ 40,000 ನೀಡುವಂತೆ ಬಿಇಒ ಬುಧವಾರ ಮತ್ತೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ನೀಡಲು ಒಪ್ಪದ ರಘುನಾಥ್ ಅವರು, ₹ 15,000 ಕೊಡುವುದಾಗಿ ಹೇಳಿ ಬಂದಿದ್ದರು. ಬಳಿಕ ಈ ಬಗ್ಗೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.