<p><strong>ಹರಿಹರ</strong>: ಅಕ್ರಮ–ಸಕ್ರಮ ಯೋಜನೆಯಡಿ ಉಚಿತವಾಗಿ ಕಂಬ, ಟಿ.ಸಿ. ಅಳವಡಿಸಲು ರೈತರಿಗೆ ₹25,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳೂಡಿಯ ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.</p>.<p>ಲಂಚಕ್ಕೆ ಬೇಡಿಕೆ ಇಟ್ಟಿದ್ದು ಎನ್ನಲಾದ ಮೊಬೈಲ್ ಧ್ವನಿ ಮುದ್ರಿಕೆಯನ್ನು ಬೆಸ್ಕಾಂ ಗುತ್ತಿಗೆದಾರರಾದ ಭಾನುವಳ್ಳಿ ಮಂಜುನಾಥ ಮತ್ತು ಮಲ್ಲನಾಯಕನಹಳ್ಳಿ ಬಸವರಾಜ್ ಅವರು ನ.19 ರಂದು ಬಿಡುಗಡೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.</p>.<p>ಪ್ರಕರಣವನ್ನು ಪರಿಶೀಲಿಸಿದ ಬೆಸ್ಕಾಂ ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿಜಿನಿಯರ್ ಎಸ್.ಕೆ.ಪಾಟೀಲ್, ಅಮಾನತು ಆದೇಶ ಹೊರಡಿಸಿದ್ದಾರೆ. </p>.<p>ಹರಿಹರ ಬೆಸ್ಕಾಂ ಇಇ ಮತ್ತು ಎಇಇ ವಿರುದ್ಧವೂ ಆರೋಪ ಕೇಳಿ ಬಂದಿದ್ದು, ಅವರಿಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಕ್ರಮಕ್ಕೆ ಕೋರಿ ಇಲಾಖೆಯ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್ಗೆ ಪತ್ರ ಬರೆಯಲಾಗಿದೆ ಎಂದು ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಸ್.ಕೆ.ಪಾಟೀಲ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ</strong>: ಅಕ್ರಮ–ಸಕ್ರಮ ಯೋಜನೆಯಡಿ ಉಚಿತವಾಗಿ ಕಂಬ, ಟಿ.ಸಿ. ಅಳವಡಿಸಲು ರೈತರಿಗೆ ₹25,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳೂಡಿಯ ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.</p>.<p>ಲಂಚಕ್ಕೆ ಬೇಡಿಕೆ ಇಟ್ಟಿದ್ದು ಎನ್ನಲಾದ ಮೊಬೈಲ್ ಧ್ವನಿ ಮುದ್ರಿಕೆಯನ್ನು ಬೆಸ್ಕಾಂ ಗುತ್ತಿಗೆದಾರರಾದ ಭಾನುವಳ್ಳಿ ಮಂಜುನಾಥ ಮತ್ತು ಮಲ್ಲನಾಯಕನಹಳ್ಳಿ ಬಸವರಾಜ್ ಅವರು ನ.19 ರಂದು ಬಿಡುಗಡೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.</p>.<p>ಪ್ರಕರಣವನ್ನು ಪರಿಶೀಲಿಸಿದ ಬೆಸ್ಕಾಂ ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿಜಿನಿಯರ್ ಎಸ್.ಕೆ.ಪಾಟೀಲ್, ಅಮಾನತು ಆದೇಶ ಹೊರಡಿಸಿದ್ದಾರೆ. </p>.<p>ಹರಿಹರ ಬೆಸ್ಕಾಂ ಇಇ ಮತ್ತು ಎಇಇ ವಿರುದ್ಧವೂ ಆರೋಪ ಕೇಳಿ ಬಂದಿದ್ದು, ಅವರಿಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಕ್ರಮಕ್ಕೆ ಕೋರಿ ಇಲಾಖೆಯ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್ಗೆ ಪತ್ರ ಬರೆಯಲಾಗಿದೆ ಎಂದು ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಸ್.ಕೆ.ಪಾಟೀಲ್ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>