<p><strong>ಹರಿಹರ:</strong> ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯಿಂದ ಗಣೇಶ ಪ್ರತಿಷ್ಠಾಪನೆ ನಿಮಿತ್ತ ಸೆ.5 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಬಿ.ಅಣ್ಣಪ್ಪ ಹೇಳಿದರು.<br> ಗಣೇಶ ಪ್ರತಿಷ್ಠಾಪನೆಯ ನೆಪದಲ್ಲಿ ಜನಮುಖಿ ಚಟುವಟಿಕೆಗಳನ್ನು ನಡೆಸುವುದು ಉದ್ದೇಶವಾಗಿದೆ. ಕೆಲ ದಿನಗಳಹಿಂದೆ ಕವಿಗೋಷ್ಟಿಯನ್ನು ಯಶಸ್ವಿಯಾಗಿ ನಡೆಸಲಾಯಿತು.</p><p> ಈಗ ಗಾಂಧಿ ಮೈದಾನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. ಅಂದು ಸಂಜೆ 5ಕ್ಕೆ ರಸಮಂಜರಿ ಕಾರ್ಯಕ್ರಮವಿದೆ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಲು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.</p><p><br> ಶಿಬಿರದಲ್ಲಿ ಹೃದಯ, ಕಿವಿ, ಮೂಗು, ಗಂಟಲು, ಚರ್ಮ, ನೋವಾ ಐವಿಎಫ್ ಬಂಜೆತನ ನಿವಾರಣೆ, ಜನರಲ್ ಮೆಡಿಸಿನ್, ಸಕ್ಕರೆ ಕಾಯಿಲೆ, ಶಸ್ತç ಚಿಕಿತ್ಸಾ ತಜ್ಞರು ಭಾಗವಹಿಸುವರು, ಇಸಿಜಿ, ರಕ್ತ, ಬಿ.ಪಿ. ಪರೀಕ್ಷೆ ನಡೆಸಲಾಗುವುದೆಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗನ್ನಾಥ ಹೇಳಿದರು.</p><p><br> ಸೆ.6 ರಂದು ಗಣೇಶ ವಿಸರ್ಜನೆ ಇರಲಿದೆ, ಮೆರವಣಿಗೆಯಲ್ಲಿ ಡಿ.ಜೆ. ಸಂಗೀತದ ಬದಲು ಹುಬ್ಬಳ್ಳಿಯ ಜಗ್ಗ ಹಲಿಗೆ, ಮೊಳಕಾಲ್ಮೂರಿನ ಗೊಂಬೆ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಇರುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.</p><p><br>ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಬಿ.ರಾಜಶೇಖರ್, ತಿಪ್ಪೇಸ್ವಾಮಿ, ಎಂ.ಚಿದಾನAದ ಕಂಚಿಕೇರಿ, ಸಚಿನ್ ಕೊಂಡಜ್ಜಿ, ಹರೀಶ್ ಪಿ.ಎಚ್, ಮಂಜುನಾಥ್ ಬಿ, ನಾರಾಯಣ ಇದ್ದರು.<br> <br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯಿಂದ ಗಣೇಶ ಪ್ರತಿಷ್ಠಾಪನೆ ನಿಮಿತ್ತ ಸೆ.5 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಬಿ.ಅಣ್ಣಪ್ಪ ಹೇಳಿದರು.<br> ಗಣೇಶ ಪ್ರತಿಷ್ಠಾಪನೆಯ ನೆಪದಲ್ಲಿ ಜನಮುಖಿ ಚಟುವಟಿಕೆಗಳನ್ನು ನಡೆಸುವುದು ಉದ್ದೇಶವಾಗಿದೆ. ಕೆಲ ದಿನಗಳಹಿಂದೆ ಕವಿಗೋಷ್ಟಿಯನ್ನು ಯಶಸ್ವಿಯಾಗಿ ನಡೆಸಲಾಯಿತು.</p><p> ಈಗ ಗಾಂಧಿ ಮೈದಾನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. ಅಂದು ಸಂಜೆ 5ಕ್ಕೆ ರಸಮಂಜರಿ ಕಾರ್ಯಕ್ರಮವಿದೆ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಲು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.</p><p><br> ಶಿಬಿರದಲ್ಲಿ ಹೃದಯ, ಕಿವಿ, ಮೂಗು, ಗಂಟಲು, ಚರ್ಮ, ನೋವಾ ಐವಿಎಫ್ ಬಂಜೆತನ ನಿವಾರಣೆ, ಜನರಲ್ ಮೆಡಿಸಿನ್, ಸಕ್ಕರೆ ಕಾಯಿಲೆ, ಶಸ್ತç ಚಿಕಿತ್ಸಾ ತಜ್ಞರು ಭಾಗವಹಿಸುವರು, ಇಸಿಜಿ, ರಕ್ತ, ಬಿ.ಪಿ. ಪರೀಕ್ಷೆ ನಡೆಸಲಾಗುವುದೆಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗನ್ನಾಥ ಹೇಳಿದರು.</p><p><br> ಸೆ.6 ರಂದು ಗಣೇಶ ವಿಸರ್ಜನೆ ಇರಲಿದೆ, ಮೆರವಣಿಗೆಯಲ್ಲಿ ಡಿ.ಜೆ. ಸಂಗೀತದ ಬದಲು ಹುಬ್ಬಳ್ಳಿಯ ಜಗ್ಗ ಹಲಿಗೆ, ಮೊಳಕಾಲ್ಮೂರಿನ ಗೊಂಬೆ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಇರುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.</p><p><br>ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಬಿ.ರಾಜಶೇಖರ್, ತಿಪ್ಪೇಸ್ವಾಮಿ, ಎಂ.ಚಿದಾನAದ ಕಂಚಿಕೇರಿ, ಸಚಿನ್ ಕೊಂಡಜ್ಜಿ, ಹರೀಶ್ ಪಿ.ಎಚ್, ಮಂಜುನಾಥ್ ಬಿ, ನಾರಾಯಣ ಇದ್ದರು.<br> <br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>