ಗುರುವಾರ ಸಂಜೆ 4 ಗಂಟೆಗೆ ಗುಡುಗು ಸಿಡಿಲಿನಿಂದ ಆರಂಭವಾದ ಮಳೆ ರೈತರಲ್ಲಿ ಹರ್ಷ ಮೂಡಿಸಿತು. ತಾಲ್ಲೂಕಿನ ಕೆಂಗಲಹಳ್ಳಿ, ಮುಕ್ತೇನಹಳ್ಳಿ ಹಾಗೂ ಬನ್ನಿಕೋಡು ಸುತ್ತಮುತ್ತ 20 ರಿಂದ 30 ನಿಮಿಷಗಳ ಕಾಲ ಉತ್ತಮ ಮಳೆಯಾಗಿದೆ. ಆದರೆ ಕುಂದೂರು, ಕುಂಬಳೂರು ಭಾಗದಲ್ಲಿ ಮಳೆಯಾಗಿಲ್ಲ. ತಾಲ್ಲೂಕಿನ ಸಾಸ್ವೇಹಳ್ಳಿ ಕುಳಗಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಜಮೀನು, ತೋಟದ ಕಡೆಗೆ ಮಳೆಯಾಗಿಲ್ಲ ಎಂದು ಸ್ಥಳೀಯರಾದ ಕುಳಗಟ್ಟೆ ನಾಗರಾಜ್ ತಿಳಿಸಿದ್ದಾರೆ.