‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೇ ಅದಕ್ಕೆ ಪಕ್ಷ ಬದ್ಧವಾಗುತ್ತದೆ. ನಲ್ವತ್ತು ಆಕಾಂಕ್ಷಿಗಳಾಗಿರುವುದು ತಪ್ಪಲ್ಲ. ಎಲ್ಲರಿಗೂ ಆಸೆ ಇರುತ್ತದೆ. ಕೋರ್ ಕಮಿಟಿ ನಿರ್ಧರಿಸುತ್ತದೆ. ಜಿಲ್ಲೆಯ ಇಬ್ಬರಿಗೂ ಅವಕಾಶ ಕೊಟ್ಟರೆ ಒಳ್ಳೆಯದು. ಕನಿಷ್ಠ ಒಬ್ಬರಿಗಾದರೂ ನೀಡಬೇಕು. ನೀಡಿಲ್ಲ ಅಂದರೂ ಸಮಾಧಾನದಲ್ಲೇ ಇರುತ್ತೇವೆ. ಯಾಕೆಂದರೆ ಅಧ್ಯಕ್ಷರ, ಮುಖ್ಯಮಂತ್ರಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.