<p>ಜಗಳೂರು: ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಆರ್.ಚೇತನ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಲೋಕಅದಾಲತ್ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ 552 ಪ್ರಕರಣ ಹಾಗೂ 821 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.</p>.<p>‘ಈ ಎಲ್ಲ ಪ್ರಕರಣಗಳ ಒಟ್ಟು ಮೊತ್ತ ₹ 1 ಕೋಟಿಗೂ ಹೆಚ್ಚು’ ಎಂದು ಲೋಕಅದಾಲತ್ ಮೂಲಗಳು ತಿಳಿಸಿದೆ.</p>.<p>ದಾಂಪತ್ಯದಲ್ಲಿ ಹಲವು ಕಾರಣಗಳಿಂದಾಗಿ ಸಮಸ್ಯೆಗಳು ತಲೆದೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 6 ದಂಪತಿಗಳು ಲೋಕ ಅದಾಲತ್ನಲ್ಲಿ ಒಂದಾಗಿ ಮನೆಗೆ ಮರಳಿದ್ದು ವಿಶೇಷವಾಗಿತ್ತು.</p>.<p>ನ್ಯಾಯಾಧೀಶ ಆರ್.ಚೇತನ್ ಅವರು ದಂಪತಿಗಳೊಂದಿಗೆ ಮಾತುಕತೆ ನಡೆಸಿ, ಸಂಸಾರದಲ್ಲಿ ಎದುರಾಗುವ ಸಣ್ಣಪುಟ್ಟ ಮನಸ್ತಾಪಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದಾಗಿ. ಇದರಿಂದ ಇಡೀ ಕುಟುಂಬದ ಎಲ್ಲ ಸದಸ್ಯರೂ ಸಂತೋಷದಿಂದ ಸಹ ಜೀವನ ನಡೆಸಬಹುದು. ಗಂಡ ಮತ್ತು ಹೆಂಡತಿ ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆಯಿಂದ ಸಾಮರಸ್ಯ ಸಾಧ್ಯವಾಗುತ್ತದೆ’ ಎಂದು ಕಿವಿ ಮಾತು ಹೇಳಿದರು. ನ್ಯಾಯಾಧೀಶರ ಮಾತಿಗೆ ಸಮ್ಮತಿಸಿದ ಜೋಡಿಗಳು ಒಂದಾಗಿ ಮನೆಗೆ ಮರಳಿದರು.</p>.<p>ಚೆಕ್ ಬೌನ್ಸ್, ಪಾಲು ವಿಭಾಗ, ನಿರ್ದಿಷ್ಟ ಪರಿಹಾರ, ಬ್ಯಾಂಕ್ ದಾವೆ, ಅಮಲ್ಜಾರಿ ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ 552 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ₹ 70.43 ಲಕ್ಷ ಕಕ್ಷಿದಾರರಿಗೆ ಪಾವತಿಯಾಗಿದೆ. ಒಟ್ಟು 841 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 56 ಜನನ, 6 ಐಪಿಸಿ, 11 ಚೆಕ್ ಬೌನ್ಸ್, 3 ಪಾಲು ವಿಭಾಗ, 46 ತಪ್ಪೊಪ್ಪಿಗೆ ಪ್ರಕರಣ ಸೇರಿ 542 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.</p>.<p>ಬ್ಯಾಂಕ್, ಪಟ್ಟಣ ಪಂಚಾಯಿತಿ, ಕಂದಾಯ ಮತ್ತು ಬಿಎಸ್ಎನ್ಎಲ್ ಮುಂತಾದ ಇಲಾಖೆಗಳ 821 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹ 33.24 ಲಕ್ಷ ವಸೂಲಿಯಾಗಿದೆ.</p>.<p>ಸಹಾಯಕ ಸರ್ಕಾರಿ ವಕೀಲ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕೆನರಾ ಬ್ಯಾಂಕ್ ಅಧಿಕಾರಿಗಳಾದ ಹಣಮಂತ ಬೈರಗೊಂಡ, ಮಂಗ್ಯಾನಾಯ್ಕ, ಸುರೇಶ್ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಗಳೂರು: ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಆರ್.ಚೇತನ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಲೋಕಅದಾಲತ್ನಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ 552 ಪ್ರಕರಣ ಹಾಗೂ 821 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.</p>.<p>‘ಈ ಎಲ್ಲ ಪ್ರಕರಣಗಳ ಒಟ್ಟು ಮೊತ್ತ ₹ 1 ಕೋಟಿಗೂ ಹೆಚ್ಚು’ ಎಂದು ಲೋಕಅದಾಲತ್ ಮೂಲಗಳು ತಿಳಿಸಿದೆ.</p>.<p>ದಾಂಪತ್ಯದಲ್ಲಿ ಹಲವು ಕಾರಣಗಳಿಂದಾಗಿ ಸಮಸ್ಯೆಗಳು ತಲೆದೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 6 ದಂಪತಿಗಳು ಲೋಕ ಅದಾಲತ್ನಲ್ಲಿ ಒಂದಾಗಿ ಮನೆಗೆ ಮರಳಿದ್ದು ವಿಶೇಷವಾಗಿತ್ತು.</p>.<p>ನ್ಯಾಯಾಧೀಶ ಆರ್.ಚೇತನ್ ಅವರು ದಂಪತಿಗಳೊಂದಿಗೆ ಮಾತುಕತೆ ನಡೆಸಿ, ಸಂಸಾರದಲ್ಲಿ ಎದುರಾಗುವ ಸಣ್ಣಪುಟ್ಟ ಮನಸ್ತಾಪಗಳನ್ನು ಬದಿಗೊತ್ತಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಂದಾಗಿ. ಇದರಿಂದ ಇಡೀ ಕುಟುಂಬದ ಎಲ್ಲ ಸದಸ್ಯರೂ ಸಂತೋಷದಿಂದ ಸಹ ಜೀವನ ನಡೆಸಬಹುದು. ಗಂಡ ಮತ್ತು ಹೆಂಡತಿ ಇಬ್ಬರಲ್ಲೂ ಪರಸ್ಪರ ಹೊಂದಾಣಿಕೆಯಿಂದ ಸಾಮರಸ್ಯ ಸಾಧ್ಯವಾಗುತ್ತದೆ’ ಎಂದು ಕಿವಿ ಮಾತು ಹೇಳಿದರು. ನ್ಯಾಯಾಧೀಶರ ಮಾತಿಗೆ ಸಮ್ಮತಿಸಿದ ಜೋಡಿಗಳು ಒಂದಾಗಿ ಮನೆಗೆ ಮರಳಿದರು.</p>.<p>ಚೆಕ್ ಬೌನ್ಸ್, ಪಾಲು ವಿಭಾಗ, ನಿರ್ದಿಷ್ಟ ಪರಿಹಾರ, ಬ್ಯಾಂಕ್ ದಾವೆ, ಅಮಲ್ಜಾರಿ ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ 552 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ₹ 70.43 ಲಕ್ಷ ಕಕ್ಷಿದಾರರಿಗೆ ಪಾವತಿಯಾಗಿದೆ. ಒಟ್ಟು 841 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 56 ಜನನ, 6 ಐಪಿಸಿ, 11 ಚೆಕ್ ಬೌನ್ಸ್, 3 ಪಾಲು ವಿಭಾಗ, 46 ತಪ್ಪೊಪ್ಪಿಗೆ ಪ್ರಕರಣ ಸೇರಿ 542 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.</p>.<p>ಬ್ಯಾಂಕ್, ಪಟ್ಟಣ ಪಂಚಾಯಿತಿ, ಕಂದಾಯ ಮತ್ತು ಬಿಎಸ್ಎನ್ಎಲ್ ಮುಂತಾದ ಇಲಾಖೆಗಳ 821 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ₹ 33.24 ಲಕ್ಷ ವಸೂಲಿಯಾಗಿದೆ.</p>.<p>ಸಹಾಯಕ ಸರ್ಕಾರಿ ವಕೀಲ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಕೆನರಾ ಬ್ಯಾಂಕ್ ಅಧಿಕಾರಿಗಳಾದ ಹಣಮಂತ ಬೈರಗೊಂಡ, ಮಂಗ್ಯಾನಾಯ್ಕ, ಸುರೇಶ್ ನಾಯ್ಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>