<p><strong>ದಾವಣಗೆರೆ: </strong>ಸೀತೆಯ ಸಂಭ್ರಮ, ವಿಷಾದ, ಪ್ರಶ್ನೆ, ಒಡಲಾಳದ ನೋವು, ಅಭಿಪ್ರಾಯ, ರಾಮಾಯಣದ ಘಟನಾವಳಿಗಳು ‘ಜನಕ ಜಾತೆ ಜಾನಕಿ’ ಮೂಲಕ ಭಾನುವಾರ ಬಿಐಇಟಿಯ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಅನಾವರಣಗೊಂಡಿತು. ಡಾ.ಹೆಲನ್ ಮೈಸೂರು ಎರಡುಮುಕ್ಕಾಲು ಗಂಟೆ ಪ್ರದರ್ಶಿಸಿದ ಈ ಸೀತಾ ವೃತ್ತಾಂತದ ‘ಏಕವ್ಯಕ್ತಿ– ಅಭಿವ್ಯಕ್ತಿ’ ಜನಮನ ಮುಟ್ಟಿತು.</p>.<p>ರಾಮನ ವಂಶದ ಹಿನ್ನೆಲೆ, ಸೀತಾ ವಂಶವೃಕ್ಷ, ಸೀತಾ–ರಾಮ ಕಲ್ಯಾಣ, ವನವಾಸ ಪ್ರಾಪ್ತಿ, ಸೀತಾಪಹರಣ, ರಾಮ ಮುದ್ರಿಕಾ ಪ್ರದಾನ, ರಾವಣ ಸಂಹಾರ, ಸೀತಾ ಅಗ್ನಿ ಪ್ರವೇಶ, ರಾಮನ ವಿಶ್ವರೂಪ ದರ್ಶನದ ಸಂಗತಿಗಳ ಅದ್ಭುತ ಅಭಿವ್ಯಕ್ತಿ ನಡೆಯಿತು. ಹೆಲೆನ್ ಅವರು 111 ಪಾತ್ರಗಳನ್ನು ಕಟ್ಟಿಕೊಟ್ಟರು.</p>.<p>ಬೆಂಗಳೂರಿನ ರಂಗ ಬದುಕು ಟ್ರಸ್ಟ್ ಹಾಗೂ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಈ ಏಕವ್ಯಕ್ತಿ ಅಭಿವ್ಯಕ್ತಿಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.</p>.<p>‘ಸಂಸ್ಕೃತಿಯನ್ನು ಕಟ್ಟಿಕೊಡುವವರು, ಕಟ್ಟಿಕೊಡಲು ಪ್ರೋತ್ಸಾಹಿಸುವವರು ಬಹಳ ಕಡಿಮೆ. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ ಅವರ ಪ್ರೋತ್ಸಾಹದಿಂದಾಗಿ ಸಾಣೇಹಳ್ಳಿ, ದಾವಣಗೆರೆ ಸಹಿತ ಹಲವೆಡೆ ಆಧುನಿಕ ರಂಗಮಂದಿರಗಳು ನಿರ್ಮಾಣಗೊಳ್ಳಲು ಸಾಧ್ಯವಾಗಿದೆ’ ಎಂದು ಸಾಣೇಹಳ್ಳಿ ಶ್ರೀ ಹೇಳಿದರು.</p>.<p>ಜನರಲ್ಲಿ ಸಾಂಸ್ಕೃತಿಕ ಒಲವು ಕಡಿಮೆಯಾಗುತ್ತಿದೆ. ಆರ್ಕೆಸ್ಟ್ರಾ ಎಲ್ಲ ಇದ್ದರೆ ಜನ ಮುಗಿಬೀಳುತ್ತಾರೆ. ಮನಸ್ಸನ್ನು ವಿಲಾಸಗೊಳಿಸುವ, ವಿಕಾರಗೊಳಿಸುವತ್ತ ಗಮನ ಹೋಗುತ್ತಿದೆಯೇ ಹೊರತು ಮನೋವಿಕಾಸಗೊಳಿಸುವ ರಂಗಭೂಮಿ ಕಡೆಗೆ ಜನರು ಒಲವು ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.</p>.<p>ಹೆಲನ್ ಮೈಸೂರು ಅವರು ಈ ಅದ್ಭುತ ಏಕವ್ಯಕ್ತಿ ಅಭಿವ್ಯಕ್ತಿಯನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶಿಸಿದ್ದರು. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದರು ಎಂದು ನೆನಪಿಸಿಕೊಂಡರು.</p>.<p>ಬಿಐಇಟಿ ನಿರ್ದೇಶಕ ಪ್ರೊ. ವೃಷಭೇಂದ್ರಪ್ಪ, ಶ್ರೀನಿವಾಸ ಗೌಡ, ಹಿರಿಯ ರಂಗಕರ್ಮಿ ಕೆ. ವೀರಸ್ವಾಮಿ, ಹಾಲಸ್ವಾಮಿ, ಬಾ.ಮಾ. ಬಸವರಾಜಯ್ಯ, ಹೆಲನ್ ಅವರ ತಾಯಿ, ಹಿರಿಯ ರಂಗನಟಿ ತೆರೆಸಮ್ಮ ಮೈಸೂರು ಅವರೂ ಇದ್ದರು.</p>.<p>ರಚನೆ, ವಿನ್ಯಾಸ, ಬೆಳಕಿನ ಸಂಯೋಜನೆ ಮತ್ತು ನಿರ್ದೇಶನವನ್ನು ಡಾ. ಎಸ್.ಎಲ್.ಎನ್. ಸ್ವಾಮಿ ಮಾಡಿದ್ದರು. ಸಂಗೀತ– ಪ್ರಮೋದ್ ಸಪ್ರೆ ಮತ್ತು ಪ್ರಮೋದ್ ಸಾಗರ್, ಗಾಯನ–ರಮೇಶ್ಚಂದ್ರ, ಕಿರಣ್ ರಾಥೋಡ್ ನಿರ್ವಹಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಸೀತೆಯ ಸಂಭ್ರಮ, ವಿಷಾದ, ಪ್ರಶ್ನೆ, ಒಡಲಾಳದ ನೋವು, ಅಭಿಪ್ರಾಯ, ರಾಮಾಯಣದ ಘಟನಾವಳಿಗಳು ‘ಜನಕ ಜಾತೆ ಜಾನಕಿ’ ಮೂಲಕ ಭಾನುವಾರ ಬಿಐಇಟಿಯ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಅನಾವರಣಗೊಂಡಿತು. ಡಾ.ಹೆಲನ್ ಮೈಸೂರು ಎರಡುಮುಕ್ಕಾಲು ಗಂಟೆ ಪ್ರದರ್ಶಿಸಿದ ಈ ಸೀತಾ ವೃತ್ತಾಂತದ ‘ಏಕವ್ಯಕ್ತಿ– ಅಭಿವ್ಯಕ್ತಿ’ ಜನಮನ ಮುಟ್ಟಿತು.</p>.<p>ರಾಮನ ವಂಶದ ಹಿನ್ನೆಲೆ, ಸೀತಾ ವಂಶವೃಕ್ಷ, ಸೀತಾ–ರಾಮ ಕಲ್ಯಾಣ, ವನವಾಸ ಪ್ರಾಪ್ತಿ, ಸೀತಾಪಹರಣ, ರಾಮ ಮುದ್ರಿಕಾ ಪ್ರದಾನ, ರಾವಣ ಸಂಹಾರ, ಸೀತಾ ಅಗ್ನಿ ಪ್ರವೇಶ, ರಾಮನ ವಿಶ್ವರೂಪ ದರ್ಶನದ ಸಂಗತಿಗಳ ಅದ್ಭುತ ಅಭಿವ್ಯಕ್ತಿ ನಡೆಯಿತು. ಹೆಲೆನ್ ಅವರು 111 ಪಾತ್ರಗಳನ್ನು ಕಟ್ಟಿಕೊಟ್ಟರು.</p>.<p>ಬೆಂಗಳೂರಿನ ರಂಗ ಬದುಕು ಟ್ರಸ್ಟ್ ಹಾಗೂ ಕರ್ನಾಟಕ ನಾಟಕ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಈ ಏಕವ್ಯಕ್ತಿ ಅಭಿವ್ಯಕ್ತಿಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.</p>.<p>‘ಸಂಸ್ಕೃತಿಯನ್ನು ಕಟ್ಟಿಕೊಡುವವರು, ಕಟ್ಟಿಕೊಡಲು ಪ್ರೋತ್ಸಾಹಿಸುವವರು ಬಹಳ ಕಡಿಮೆ. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ ಅವರ ಪ್ರೋತ್ಸಾಹದಿಂದಾಗಿ ಸಾಣೇಹಳ್ಳಿ, ದಾವಣಗೆರೆ ಸಹಿತ ಹಲವೆಡೆ ಆಧುನಿಕ ರಂಗಮಂದಿರಗಳು ನಿರ್ಮಾಣಗೊಳ್ಳಲು ಸಾಧ್ಯವಾಗಿದೆ’ ಎಂದು ಸಾಣೇಹಳ್ಳಿ ಶ್ರೀ ಹೇಳಿದರು.</p>.<p>ಜನರಲ್ಲಿ ಸಾಂಸ್ಕೃತಿಕ ಒಲವು ಕಡಿಮೆಯಾಗುತ್ತಿದೆ. ಆರ್ಕೆಸ್ಟ್ರಾ ಎಲ್ಲ ಇದ್ದರೆ ಜನ ಮುಗಿಬೀಳುತ್ತಾರೆ. ಮನಸ್ಸನ್ನು ವಿಲಾಸಗೊಳಿಸುವ, ವಿಕಾರಗೊಳಿಸುವತ್ತ ಗಮನ ಹೋಗುತ್ತಿದೆಯೇ ಹೊರತು ಮನೋವಿಕಾಸಗೊಳಿಸುವ ರಂಗಭೂಮಿ ಕಡೆಗೆ ಜನರು ಒಲವು ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.</p>.<p>ಹೆಲನ್ ಮೈಸೂರು ಅವರು ಈ ಅದ್ಭುತ ಏಕವ್ಯಕ್ತಿ ಅಭಿವ್ಯಕ್ತಿಯನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶಿಸಿದ್ದರು. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದರು ಎಂದು ನೆನಪಿಸಿಕೊಂಡರು.</p>.<p>ಬಿಐಇಟಿ ನಿರ್ದೇಶಕ ಪ್ರೊ. ವೃಷಭೇಂದ್ರಪ್ಪ, ಶ್ರೀನಿವಾಸ ಗೌಡ, ಹಿರಿಯ ರಂಗಕರ್ಮಿ ಕೆ. ವೀರಸ್ವಾಮಿ, ಹಾಲಸ್ವಾಮಿ, ಬಾ.ಮಾ. ಬಸವರಾಜಯ್ಯ, ಹೆಲನ್ ಅವರ ತಾಯಿ, ಹಿರಿಯ ರಂಗನಟಿ ತೆರೆಸಮ್ಮ ಮೈಸೂರು ಅವರೂ ಇದ್ದರು.</p>.<p>ರಚನೆ, ವಿನ್ಯಾಸ, ಬೆಳಕಿನ ಸಂಯೋಜನೆ ಮತ್ತು ನಿರ್ದೇಶನವನ್ನು ಡಾ. ಎಸ್.ಎಲ್.ಎನ್. ಸ್ವಾಮಿ ಮಾಡಿದ್ದರು. ಸಂಗೀತ– ಪ್ರಮೋದ್ ಸಪ್ರೆ ಮತ್ತು ಪ್ರಮೋದ್ ಸಾಗರ್, ಗಾಯನ–ರಮೇಶ್ಚಂದ್ರ, ಕಿರಣ್ ರಾಥೋಡ್ ನಿರ್ವಹಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>