<p><strong>ದಾವಣಗೆರೆ:</strong> ಸತತ ಮೂರನೇ ವರ್ಷವೂ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು, ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವು ಕುಟುಂಬಗಳ ಪಾಲಿಗೆ ಇದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.</p>.<p>ಎರಡು ವರ್ಷಗಳಿಂದ ಸಾಲ ಮಾಡಿ ಬಿತ್ತಿದ್ದ ಮೀನಿನ ಮರಿಗಳು ಕೆರೆ ಒಣಗಿದ ಪರಿಣಾಮ ಹೂಡಿದ್ದ ಬಂಡವಾಳವೂ ಸಿಗದೇ ಮೀನುಗಾರರು ಕೈ ಸುಟ್ಟಿಕೊಂಡಿದ್ದರು. ಈ ವರ್ಷವಾದರೂ ಲಾಭ ಪಡೆಯಬಹುದು ಎಂಬ ಅವರ ಕನಸು ಮುರುಟಿದೆ.</p>.<p>ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಯುವ 95 ಕೆರೆಗಳ ಪೈಕಿ ಈ ವರ್ಷ 53 ಕೆರೆಗಳ ಗುತ್ತಿಗೆಯನ್ನು ಮೀನುಗಾರರು ನವೀಕರಿಸಿಕೊಂಡಿದ್ದರು. ಮಳೆಗಾಲ ಮುಗಿಯುತ್ತ ಬಂದರೂ ಕೆರೆಗಳಿಗೆ ನೀರು ಹರಿದುಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಕೇವಲ 12 ಕೆರೆಗಳಲ್ಲಿ ಮೀನಿನ ಮರಿಗಳ ಬಿತ್ತನೆಯಾಗಿದೆ.</p>.<p>‘ಜಿಲ್ಲೆಯಲ್ಲಿ ವರ್ಷಕ್ಕೆ 1.50 ಕೋಟಿ ಮೀನಿನ ಮರಿ ಬಿತ್ತನೆ ಗುರಿ ನಿಗದಿಪಡಿಸಿಕೊಂಡಿರುತ್ತೇವೆ. ಈ ಬಾರಿ ಕೇವಲ 11.40 ಲಕ್ಷ ಮೀನಿನ ಮರಿಗಳ ಬಿತ್ತನೆಯಾಗಿದೆ. ಕೆರೆಗಳಲ್ಲಿ ನೀರು ಇದ್ದಿದ್ದರೆ ಈ ವೇಳೆಗೆ ಸುಮಾರು 80 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳ ಬಿತ್ತನೆಯಾಗಿರುತ್ತಿತ್ತು’ ಎಂದು ಮೀನುಗಾರಿಕೆ ಇಲಾಖೆಯ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಡಾ. ಡಿ. ಉಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಕಳೆದ ವರ್ಷ ಕೊಡಗನೂರು ಕೆರೆಗೆ ಸ್ವಲ್ಪ ನೀರು ಬಂದಿದ್ದರಿಂದ ಒಂದಕ್ಕೆ ₹ 2ರಂತೆ 2.50 ಲಕ್ಷ ಮೀನಿನ ಮರಿಗಳನ್ನು ಆಂಧ್ರಪ್ರದೇಶದಿಂದ ತಂದು ಬಿಟ್ಟಿದ್ದೆ. ಕೆರೆಯ ಗುತ್ತಿಗೆ ಹಣ ಸೇರಿ ಸುಮಾರು ₹ 7 ಲಕ್ಷ ಖರ್ಚು ಮಾಡಿದ್ದೆ. ಆದರೆ, ನಂತರ ಮಳೆಯಾಗದೆ ಕೆರೆ ಬರಿದಾಯಿತು. ಮೀನಿನ ಮರಿಗಳು ಸತ್ತುಹೋದವು. ಕೇವಲ ₹ 73 ಸಾವಿರ ಮೌಲ್ಯದ ಮೀನು ಕೈಗೆ ಸಿಕ್ಕಿತ್ತು. ಈ ವರ್ಷವಾದರೂ ಲಾಭ ಪಡೆಯೋಣ ಎಂದುಕೊಂಡಿದ್ದರೆ ಕೆರೆ ಬರಿದಾಗಿದೆ’ ಎಂದು ಕೊಡಗನೂರಿನ ಮೀನುಗಾರ ಕೆ.ಸಿ. ಸುರೇಶ್ ಅಳಲು ತೋಡಿಕೊಂಡರು.</p>.<p>‘ಒಂದು ರೂಪಾಯಿಯ ಮೀನಿನ ಮರಿಗೆ ಪ್ರತಿಫಲವಾಗಿ ವರ್ಷದ ಅಂತ್ಯಕ್ಕೆ ₹ 80ರಿಂದ ₹ 100 ಸಿಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಲಾಭ ಮತ್ತೆ ಯಾವ ಕಸುಬಿನಲ್ಲೂ ಸಿಗುವುದಿಲ್ಲ. ನಮ್ಮ ಉದ್ಯೋಗಕ್ಕೆ ನೀರೇ ಜೀವಾಳ. ಈ ಕೆರೆಯಿಂದ 30 ಕುಟುಂಬಗಳ ಜೀವನ ನಿರ್ವಹಣೆಯಾಗುತ್ತಿತ್ತು’ ಎಂದ ಸುರೇಶ್ ಅವರು, ಬರಿದಾಗಿರುವ ಕೊಡಗನೂರು ಕೆರೆಯತ್ತ ನೋಟ ಹಾಯಿಸಿದರು.</p>.<p>‘ಕಳೆದ ವರ್ಷ ಅಣಜಿ ಕೆರೆಯನ್ನು ನಾವು ಗುತ್ತಿಗೆ ಪಡೆದು ಗ್ರಾಮದ ಮೀನುಗಾರರಿಗೆ ಕೊಟ್ಟಿದ್ದೆವು. ₹ 4 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ಬತ್ತಿದ್ದರಿಂದ ಮೀನುಗಾರರಿಗೆ ತಿನ್ನಲು ಸಾಕಾಗುಷ್ಟು ಮೀನು ಸಹ ಸಿಗಲಿಲ್ಲ. ಇದರಲ್ಲಿ ನೀರು ತುಂಬಿದ್ದರೆ 80 ಮೀನುಗಾರರ ಬದುಕು ಹಸನಾಗುತ್ತಿತ್ತು’ ಎಂದು ಅಣಜಿ ಗ್ರಾಮದ ಮುಖಂಡ ಎಸ್.ಕೆ. ಚಂದ್ರಶೇಖರ್ ಅವರು ಬರಿದಾಗಿರುವ ಕೆರೆಯನ್ನು ತೋರಿಸಿದರು.</p>.<p>* ಒಂದು ಬಾರಿ ಕೆರೆ ತುಂಬಿ ಮೀನಿನ ಮರಿ ಬಿತ್ತಿದರೆ ನಮ್ಮ ಸಾಲವೆಲ್ಲ ತೀರಿ ಒಳ್ಳೆಯ ಲಾಭ ಸಿಗುತ್ತದೆ. ಕೆರೆಯಲ್ಲಿ ನೀರು ಇಲ್ಲದಿರುವುದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ.</p>.<p><strong>- ಕೆ.ಸಿ. ಸುರೇಶ್,</strong> ಮೀನುಗಾರ, ಕೊಡಗನೂರು</p>.<p class="Subhead">* ಕಳೆದ ವರ್ಷ 1 ಕೋಟಿ ಮೀನಿನ ಮರಿ ಬಿತ್ತನೆ ಮಾಡಲಾಗಿತ್ತು. ಮೀನಿನ ಮರಿ ಲಭ್ಯವಿದೆ. ಆದರೆ, ಜಿಲ್ಲೆಯ ಕೆರೆಗಳಲ್ಲೇ ನೀರಿಲ್ಲ. ಮಳೆಯಾಗಿ ಕೆರೆಗೆ ನೀರು ಬರಬಹುದು ಎಂಬ ನಿರೀಕ್ಷೆ ಇದೆ.</p>.<p class="Subhead"><strong>– ಡಾ. ಡಿ. ಉಮೇಶ್, </strong>ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ</p>.<p><strong>ಜಿಲ್ಲೆಯಲ್ಲಿ ಮೀನಿನ ಮರಿ ಬಿತ್ತನೆ ವಿವರ</strong></p>.<p><strong>ತಾಲ್ಲೂಕು – ಒಟ್ಟು ಕೆರೆ – ಬಿತ್ತನೆಯಾದ ಕೆರೆ – ಬಿತ್ತಿದ ಮೀನಿನ ಮರಿ</strong></p>.<p>ದಾವಣಗೆರೆ– 23 – 5 – 5.60 ಲಕ್ಷ</p>.<p>ಚನ್ನಗಿರಿ– 33 – 6 – 5.20 ಲಕ್ಷ</p>.<p>ಹೊನ್ನಾಳಿ– 16 – 1 – 60 ಸಾವಿರ</p>.<p>ಜಗಳೂರು– 18 – 00 -00</p>.<p>ಹರಿಹರ– 4 - 00 -00</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಸತತ ಮೂರನೇ ವರ್ಷವೂ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು, ಮೀನುಗಾರಿಕೆಯನ್ನೇ ನಂಬಿಕೊಂಡಿದ್ದ ಹಲವು ಕುಟುಂಬಗಳ ಪಾಲಿಗೆ ಇದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.</p>.<p>ಎರಡು ವರ್ಷಗಳಿಂದ ಸಾಲ ಮಾಡಿ ಬಿತ್ತಿದ್ದ ಮೀನಿನ ಮರಿಗಳು ಕೆರೆ ಒಣಗಿದ ಪರಿಣಾಮ ಹೂಡಿದ್ದ ಬಂಡವಾಳವೂ ಸಿಗದೇ ಮೀನುಗಾರರು ಕೈ ಸುಟ್ಟಿಕೊಂಡಿದ್ದರು. ಈ ವರ್ಷವಾದರೂ ಲಾಭ ಪಡೆಯಬಹುದು ಎಂಬ ಅವರ ಕನಸು ಮುರುಟಿದೆ.</p>.<p>ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಯುವ 95 ಕೆರೆಗಳ ಪೈಕಿ ಈ ವರ್ಷ 53 ಕೆರೆಗಳ ಗುತ್ತಿಗೆಯನ್ನು ಮೀನುಗಾರರು ನವೀಕರಿಸಿಕೊಂಡಿದ್ದರು. ಮಳೆಗಾಲ ಮುಗಿಯುತ್ತ ಬಂದರೂ ಕೆರೆಗಳಿಗೆ ನೀರು ಹರಿದುಬಂದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ ಕೇವಲ 12 ಕೆರೆಗಳಲ್ಲಿ ಮೀನಿನ ಮರಿಗಳ ಬಿತ್ತನೆಯಾಗಿದೆ.</p>.<p>‘ಜಿಲ್ಲೆಯಲ್ಲಿ ವರ್ಷಕ್ಕೆ 1.50 ಕೋಟಿ ಮೀನಿನ ಮರಿ ಬಿತ್ತನೆ ಗುರಿ ನಿಗದಿಪಡಿಸಿಕೊಂಡಿರುತ್ತೇವೆ. ಈ ಬಾರಿ ಕೇವಲ 11.40 ಲಕ್ಷ ಮೀನಿನ ಮರಿಗಳ ಬಿತ್ತನೆಯಾಗಿದೆ. ಕೆರೆಗಳಲ್ಲಿ ನೀರು ಇದ್ದಿದ್ದರೆ ಈ ವೇಳೆಗೆ ಸುಮಾರು 80 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳ ಬಿತ್ತನೆಯಾಗಿರುತ್ತಿತ್ತು’ ಎಂದು ಮೀನುಗಾರಿಕೆ ಇಲಾಖೆಯ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕ ಡಾ. ಡಿ. ಉಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಕಳೆದ ವರ್ಷ ಕೊಡಗನೂರು ಕೆರೆಗೆ ಸ್ವಲ್ಪ ನೀರು ಬಂದಿದ್ದರಿಂದ ಒಂದಕ್ಕೆ ₹ 2ರಂತೆ 2.50 ಲಕ್ಷ ಮೀನಿನ ಮರಿಗಳನ್ನು ಆಂಧ್ರಪ್ರದೇಶದಿಂದ ತಂದು ಬಿಟ್ಟಿದ್ದೆ. ಕೆರೆಯ ಗುತ್ತಿಗೆ ಹಣ ಸೇರಿ ಸುಮಾರು ₹ 7 ಲಕ್ಷ ಖರ್ಚು ಮಾಡಿದ್ದೆ. ಆದರೆ, ನಂತರ ಮಳೆಯಾಗದೆ ಕೆರೆ ಬರಿದಾಯಿತು. ಮೀನಿನ ಮರಿಗಳು ಸತ್ತುಹೋದವು. ಕೇವಲ ₹ 73 ಸಾವಿರ ಮೌಲ್ಯದ ಮೀನು ಕೈಗೆ ಸಿಕ್ಕಿತ್ತು. ಈ ವರ್ಷವಾದರೂ ಲಾಭ ಪಡೆಯೋಣ ಎಂದುಕೊಂಡಿದ್ದರೆ ಕೆರೆ ಬರಿದಾಗಿದೆ’ ಎಂದು ಕೊಡಗನೂರಿನ ಮೀನುಗಾರ ಕೆ.ಸಿ. ಸುರೇಶ್ ಅಳಲು ತೋಡಿಕೊಂಡರು.</p>.<p>‘ಒಂದು ರೂಪಾಯಿಯ ಮೀನಿನ ಮರಿಗೆ ಪ್ರತಿಫಲವಾಗಿ ವರ್ಷದ ಅಂತ್ಯಕ್ಕೆ ₹ 80ರಿಂದ ₹ 100 ಸಿಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಲಾಭ ಮತ್ತೆ ಯಾವ ಕಸುಬಿನಲ್ಲೂ ಸಿಗುವುದಿಲ್ಲ. ನಮ್ಮ ಉದ್ಯೋಗಕ್ಕೆ ನೀರೇ ಜೀವಾಳ. ಈ ಕೆರೆಯಿಂದ 30 ಕುಟುಂಬಗಳ ಜೀವನ ನಿರ್ವಹಣೆಯಾಗುತ್ತಿತ್ತು’ ಎಂದ ಸುರೇಶ್ ಅವರು, ಬರಿದಾಗಿರುವ ಕೊಡಗನೂರು ಕೆರೆಯತ್ತ ನೋಟ ಹಾಯಿಸಿದರು.</p>.<p>‘ಕಳೆದ ವರ್ಷ ಅಣಜಿ ಕೆರೆಯನ್ನು ನಾವು ಗುತ್ತಿಗೆ ಪಡೆದು ಗ್ರಾಮದ ಮೀನುಗಾರರಿಗೆ ಕೊಟ್ಟಿದ್ದೆವು. ₹ 4 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ, ಕೆರೆಯಲ್ಲಿ ನೀರು ಬತ್ತಿದ್ದರಿಂದ ಮೀನುಗಾರರಿಗೆ ತಿನ್ನಲು ಸಾಕಾಗುಷ್ಟು ಮೀನು ಸಹ ಸಿಗಲಿಲ್ಲ. ಇದರಲ್ಲಿ ನೀರು ತುಂಬಿದ್ದರೆ 80 ಮೀನುಗಾರರ ಬದುಕು ಹಸನಾಗುತ್ತಿತ್ತು’ ಎಂದು ಅಣಜಿ ಗ್ರಾಮದ ಮುಖಂಡ ಎಸ್.ಕೆ. ಚಂದ್ರಶೇಖರ್ ಅವರು ಬರಿದಾಗಿರುವ ಕೆರೆಯನ್ನು ತೋರಿಸಿದರು.</p>.<p>* ಒಂದು ಬಾರಿ ಕೆರೆ ತುಂಬಿ ಮೀನಿನ ಮರಿ ಬಿತ್ತಿದರೆ ನಮ್ಮ ಸಾಲವೆಲ್ಲ ತೀರಿ ಒಳ್ಳೆಯ ಲಾಭ ಸಿಗುತ್ತದೆ. ಕೆರೆಯಲ್ಲಿ ನೀರು ಇಲ್ಲದಿರುವುದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ.</p>.<p><strong>- ಕೆ.ಸಿ. ಸುರೇಶ್,</strong> ಮೀನುಗಾರ, ಕೊಡಗನೂರು</p>.<p class="Subhead">* ಕಳೆದ ವರ್ಷ 1 ಕೋಟಿ ಮೀನಿನ ಮರಿ ಬಿತ್ತನೆ ಮಾಡಲಾಗಿತ್ತು. ಮೀನಿನ ಮರಿ ಲಭ್ಯವಿದೆ. ಆದರೆ, ಜಿಲ್ಲೆಯ ಕೆರೆಗಳಲ್ಲೇ ನೀರಿಲ್ಲ. ಮಳೆಯಾಗಿ ಕೆರೆಗೆ ನೀರು ಬರಬಹುದು ಎಂಬ ನಿರೀಕ್ಷೆ ಇದೆ.</p>.<p class="Subhead"><strong>– ಡಾ. ಡಿ. ಉಮೇಶ್, </strong>ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ</p>.<p><strong>ಜಿಲ್ಲೆಯಲ್ಲಿ ಮೀನಿನ ಮರಿ ಬಿತ್ತನೆ ವಿವರ</strong></p>.<p><strong>ತಾಲ್ಲೂಕು – ಒಟ್ಟು ಕೆರೆ – ಬಿತ್ತನೆಯಾದ ಕೆರೆ – ಬಿತ್ತಿದ ಮೀನಿನ ಮರಿ</strong></p>.<p>ದಾವಣಗೆರೆ– 23 – 5 – 5.60 ಲಕ್ಷ</p>.<p>ಚನ್ನಗಿರಿ– 33 – 6 – 5.20 ಲಕ್ಷ</p>.<p>ಹೊನ್ನಾಳಿ– 16 – 1 – 60 ಸಾವಿರ</p>.<p>ಜಗಳೂರು– 18 – 00 -00</p>.<p>ಹರಿಹರ– 4 - 00 -00</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>