<p><strong>ಹೊದಿಗೆರೆ (ಚನ್ನಗಿರಿ):</strong> ‘ವಿಶ್ವ ಗುರು ಬಸವಣ್ಣ ಮಹಾ ಮಾನವತಾವಾದಿ, ಭಕ್ತಿಯ ಭಂಡಾರ. ಕಾಯಕದ ಶರಣರಾಗಿ ಅಜ್ಞಾನದ ತಾಮಸ ನಿದ್ರೆಯಲ್ಲಿದ್ದ ಜನರಿಗೆ ಸುಜ್ಞಾನದ ಬೆಳಕನ್ನು ನೀಡಿದವರು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಹೊದಿಗೆರೆ ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಗುರುವಾರ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>12 ನೇ ಶತಮಾನ ಕಾಯಕದಿಂದ ಜ್ಞಾನದಾಸೋಹ, ಸಾಹಿತ್ಯ ಸೃಜನೆಯಿಂದ ವ್ಯಕ್ತಿತ್ವ ವಿಕಸನ ಮಾಡಿದ ಯುಗವಾಗಿದೆ. ಬಸವಣ್ಣ ಕಾಯಕಕ್ಕೆ ಕಳೆ ಕಟ್ಟಿದ ಮಹಾನ್ ಚೇತನ. ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ ಜನರನ್ನು ಪರಿವರ್ತನೆ ಮಾಡಿದಂತಹ ಯುಗ 12 ನೇ ಶತಮಾನವಾಗಿದೆ ಎಂದರು.</p>.<p>ಬೆಂಗಳೂರು ಲಕ್ಕಸಂದ್ರದ ಮೌಲ್ವಿ ನಜೀರ್ ಅಹಮದ್ ಮಾತನಾಡಿ, ಜಗತ್ತಿನಲ್ಲಿ ಈಗ ಸೌಹಾರ್ದತೆ ಮುಖ್ಯವಾಗಿದೆ. ಕಾಯಕ ನಿಷ್ಠೆ ಹಾಗೂ ಬದ್ಧತೆ ಜೀವನದ ಆಧಾರವಾಗಬೇಕು. ಸಂಸ್ಕಾರ ಮತ್ತು ವೈಚಾರಿಕತೆಯನ್ನು ತಿಳಿಸುವ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದು ಹೇಳಿದರು.</p>.<p>ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ. ರಾಜಪ್ಪ, ಗೌರವಾಧ್ಯಕ್ಷ ಎಂ.ಯು. ಚನ್ನಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮುಂಜುಳ ಟಿ.ವಿ. ರಾಜು, ದಾಸೋಹಿ ಹುಗ್ಗಿ ಮಂಜುನಾಥ್, ಧನಜಂಯ್, ಕೆ.ಜಿ. ಶಿವಮೂರ್ತಿ, ಚಂದ್ರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊದಿಗೆರೆ (ಚನ್ನಗಿರಿ):</strong> ‘ವಿಶ್ವ ಗುರು ಬಸವಣ್ಣ ಮಹಾ ಮಾನವತಾವಾದಿ, ಭಕ್ತಿಯ ಭಂಡಾರ. ಕಾಯಕದ ಶರಣರಾಗಿ ಅಜ್ಞಾನದ ತಾಮಸ ನಿದ್ರೆಯಲ್ಲಿದ್ದ ಜನರಿಗೆ ಸುಜ್ಞಾನದ ಬೆಳಕನ್ನು ನೀಡಿದವರು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.</p>.<p>ತಾಲ್ಲೂಕಿನ ಹೊದಿಗೆರೆ ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಗುರುವಾರ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>12 ನೇ ಶತಮಾನ ಕಾಯಕದಿಂದ ಜ್ಞಾನದಾಸೋಹ, ಸಾಹಿತ್ಯ ಸೃಜನೆಯಿಂದ ವ್ಯಕ್ತಿತ್ವ ವಿಕಸನ ಮಾಡಿದ ಯುಗವಾಗಿದೆ. ಬಸವಣ್ಣ ಕಾಯಕಕ್ಕೆ ಕಳೆ ಕಟ್ಟಿದ ಮಹಾನ್ ಚೇತನ. ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ ಜನರನ್ನು ಪರಿವರ್ತನೆ ಮಾಡಿದಂತಹ ಯುಗ 12 ನೇ ಶತಮಾನವಾಗಿದೆ ಎಂದರು.</p>.<p>ಬೆಂಗಳೂರು ಲಕ್ಕಸಂದ್ರದ ಮೌಲ್ವಿ ನಜೀರ್ ಅಹಮದ್ ಮಾತನಾಡಿ, ಜಗತ್ತಿನಲ್ಲಿ ಈಗ ಸೌಹಾರ್ದತೆ ಮುಖ್ಯವಾಗಿದೆ. ಕಾಯಕ ನಿಷ್ಠೆ ಹಾಗೂ ಬದ್ಧತೆ ಜೀವನದ ಆಧಾರವಾಗಬೇಕು. ಸಂಸ್ಕಾರ ಮತ್ತು ವೈಚಾರಿಕತೆಯನ್ನು ತಿಳಿಸುವ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದು ಹೇಳಿದರು.</p>.<p>ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ. ರಾಜಪ್ಪ, ಗೌರವಾಧ್ಯಕ್ಷ ಎಂ.ಯು. ಚನ್ನಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮುಂಜುಳ ಟಿ.ವಿ. ರಾಜು, ದಾಸೋಹಿ ಹುಗ್ಗಿ ಮಂಜುನಾಥ್, ಧನಜಂಯ್, ಕೆ.ಜಿ. ಶಿವಮೂರ್ತಿ, ಚಂದ್ರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>