ದಾವಣಗೆರೆ: ಪ್ರೀತಿಸಿ ವಂಚನೆ, ಯುವತಿ ಆತ್ಮಹತ್ಯೆ

ದಾವಣಗೆರೆ: ಪ್ರೀತಿಸಿ ವಂಚನೆಗೆ ಒಳಗಾದ ಯುವತಿ ಮೊಬೈಲ್ನಲ್ಲಿ ಹೇಳಿಕೆ ದಾಖಲಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆ ಭಾರತ್ ಕಾಲೊನಿಯ ಆಶಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕೆ.ಬಿ.ಈರಣ್ಣ ಎಂಬ ಯುವಕ ಪ್ರೀತಿಸುತ್ತಿದ್ದ. ಮದುವೆಯಾಗಿದ್ದರೂ ಮದುವೆಯಾಗಿಲ್ಲ ಎಂದು ನಂಬಿಸಿ ಜೀವನದಲ್ಲಿ ಆಟವಾಡಿದ. ನನ್ನ ತರಹ ಈಗ ಇನ್ನೊಂದು ಹುಡುಗಿಯ ಜೀವನದಲ್ಲಿ ಆಟವಾಡುತ್ತಿದ್ದಾನೆ. ಆ ಹುಡುಗಿಯ ಜೀವನ ಚೆನ್ನಾಗಿರಲಿ. ಅವನಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಮೊಬೈಲ್ನಲ್ಲಿ ಹೇಳಿಕೆ ದಾಖಲಿಸಿ, ಜೀವ ಕಳೆದುಕೊಂಡಿದ್ದಾರೆ.
ಆರ್ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.