<p><strong>ಹೊನ್ನಾಳಿ:</strong> ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿರುವುದನ್ನು ತಾಲ್ಲೂಕು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ತಾಲ್ಲೂಕು ಮಾದಿಗ ಸಮುದಾಯದ ಅಧ್ಯಕ್ಷ ಜಿ.ಎಚ್. ತಮ್ಮಣ್ಣ ದಿಡಗೂರು ಹೇಳಿದರು.</p>.<p>ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಮಾತನಾಡಿದರು.</p>.<p>35 ವರ್ಷಗಳಿಂದ ಹಗಲಿರುಳು ಮಾಡಿದ ಹೋರಾಟಕ್ಕೆ ಸಂದ ಪ್ರತಿಫಲ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಳೆದು ತೂಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಡೀ ಸಚಿವ ಸಂಪುಟ ಕೂಡಾ ಇದನ್ನು ಒಪ್ಪಿಕೊಂಡಿದ್ದು ಖುಷಿ ತಂದಿದೆ. ಪ್ರವರ್ಗ ‘ಎ’ನಲ್ಲಿ 18 ಜಾತಿಗಳಿದ್ದು, ಅದಕ್ಕೆ ಶೇ 6, ಪ್ರವರ್ಗ ‘ಬಿ’ನಲ್ಲಿ 20 ಜಾತಿಗಳು ಇದ್ದು, ಅದಕ್ಕೆ ಶೇ 6 ರಷ್ಟು ಒಳಮೀಸಲಾತಿ ಹಾಗೂ ಪ್ರವರ್ಗ ‘ಸಿ’ ಗೆ 59 ಪ್ಲಸ್ 3 ಜಾತಿಗಳನ್ನು ಸೇರಿಸಿ ಶೇ 5 ರಷ್ಟು ಮೀಸಲಾತಿ ನಿಗದಿ ಮಾಡಿರುವುದು ಸಂತೋಷ ತಂದಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.</p>.<p>ಕೆಲವು ವಿಪಕ್ಷಗಳ ಮುಖಂಡರು ಇದನ್ನು ಸ್ವಾಗತಿಸುವ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ರಾಜ್ಯದ ಇಡೀ ಮಾದಿಗ ಸಮುದಾಯ ಈ ತೀರ್ಪಿಗೆ ಸಾಕಷ್ಟು ಹೋರಾಟ ಮಾಡಿದೆ. ಕೆಲವರು ಪ್ರಾಣತ್ಯಾಗ ಮಾಡಿದ್ದಾರೆ. ಸಾವಿರಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹೋರಾಟಗಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಇನ್ನುಮುಂದೆ ಒಳಮೀಸಲಾತಿ ಹೋರಾಟ ಇಲ್ಲಿಗೆ ಮುಗಿದ ಅಧ್ಯಾಯ ಎಂದು ತಿಳಿಸಿದರು.</p>.<p>ಮಾದಿಗ ಸಮುದಾಯದ ಮುಖಂಡರಾದ ಕೆಂಗಲಹಳ್ಳಿ ಪ್ರಭಾಕರ್, ಮಾರಿಕೊಪ್ಪ ಮಂಜು, ರಾಜು ಮಲ್ಲಿಗೇನಹಳ್ಳಿ, ಹನುಮಂತಪ್ಪ, ಗೋವಿನಕೋವಿ ನರಸಿಂಹಪ್ಪ, ರಾಜು, ಬೇಲಿಮಲ್ಲೂರು ಅಣ್ಣಪ್ಪ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿರುವುದನ್ನು ತಾಲ್ಲೂಕು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ತಾಲ್ಲೂಕು ಮಾದಿಗ ಸಮುದಾಯದ ಅಧ್ಯಕ್ಷ ಜಿ.ಎಚ್. ತಮ್ಮಣ್ಣ ದಿಡಗೂರು ಹೇಳಿದರು.</p>.<p>ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿ ಮಾತನಾಡಿದರು.</p>.<p>35 ವರ್ಷಗಳಿಂದ ಹಗಲಿರುಳು ಮಾಡಿದ ಹೋರಾಟಕ್ಕೆ ಸಂದ ಪ್ರತಿಫಲ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಳೆದು ತೂಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಡೀ ಸಚಿವ ಸಂಪುಟ ಕೂಡಾ ಇದನ್ನು ಒಪ್ಪಿಕೊಂಡಿದ್ದು ಖುಷಿ ತಂದಿದೆ. ಪ್ರವರ್ಗ ‘ಎ’ನಲ್ಲಿ 18 ಜಾತಿಗಳಿದ್ದು, ಅದಕ್ಕೆ ಶೇ 6, ಪ್ರವರ್ಗ ‘ಬಿ’ನಲ್ಲಿ 20 ಜಾತಿಗಳು ಇದ್ದು, ಅದಕ್ಕೆ ಶೇ 6 ರಷ್ಟು ಒಳಮೀಸಲಾತಿ ಹಾಗೂ ಪ್ರವರ್ಗ ‘ಸಿ’ ಗೆ 59 ಪ್ಲಸ್ 3 ಜಾತಿಗಳನ್ನು ಸೇರಿಸಿ ಶೇ 5 ರಷ್ಟು ಮೀಸಲಾತಿ ನಿಗದಿ ಮಾಡಿರುವುದು ಸಂತೋಷ ತಂದಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.</p>.<p>ಕೆಲವು ವಿಪಕ್ಷಗಳ ಮುಖಂಡರು ಇದನ್ನು ಸ್ವಾಗತಿಸುವ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ರಾಜ್ಯದ ಇಡೀ ಮಾದಿಗ ಸಮುದಾಯ ಈ ತೀರ್ಪಿಗೆ ಸಾಕಷ್ಟು ಹೋರಾಟ ಮಾಡಿದೆ. ಕೆಲವರು ಪ್ರಾಣತ್ಯಾಗ ಮಾಡಿದ್ದಾರೆ. ಸಾವಿರಾರು ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹೋರಾಟಗಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಇನ್ನುಮುಂದೆ ಒಳಮೀಸಲಾತಿ ಹೋರಾಟ ಇಲ್ಲಿಗೆ ಮುಗಿದ ಅಧ್ಯಾಯ ಎಂದು ತಿಳಿಸಿದರು.</p>.<p>ಮಾದಿಗ ಸಮುದಾಯದ ಮುಖಂಡರಾದ ಕೆಂಗಲಹಳ್ಳಿ ಪ್ರಭಾಕರ್, ಮಾರಿಕೊಪ್ಪ ಮಂಜು, ರಾಜು ಮಲ್ಲಿಗೇನಹಳ್ಳಿ, ಹನುಮಂತಪ್ಪ, ಗೋವಿನಕೋವಿ ನರಸಿಂಹಪ್ಪ, ರಾಜು, ಬೇಲಿಮಲ್ಲೂರು ಅಣ್ಣಪ್ಪ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>