<p><em><strong>- ಎಂ. ನಟರಾಜನ್</strong></em></p>.<p><strong>ಮಲೇಬೆನ್ನೂರು: </strong>ಇಲ್ಲಿನ ಸ್ವಾಂತಂತ್ರ್ಯ ಪೂರ್ವದ ‘ಬಾಪೂಜಿ ಹಾಲ್’ ಸೂಕ್ತ ಪಾಲನೆ ಇಲ್ಲದೆ ಅವಸಾನದ ಅಂಚು ತಲುಪಿದೆ.</p>.<p>ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮ ಗಾಂಧಿ ಅವರು 1927ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಭಾಷಣ ಮಾಡಿದ್ದರು. ಬ್ರಿಟಿಷ್ ಸೇನಾಧಿಕಾರಿಗಳು ಇಲ್ಲಿ ಕುದುರೆಗಳನ್ನು ಕಟ್ಟುತ್ತಿದ್ದರು. ಕಾಲಾನುಕ್ರಮದಲ್ಲಿ ಪ್ರವಾಸಿ ಬಂಗಲೆಯಾಗಿತ್ತು.</p>.<p>ದೊಡ್ಡ ಸಭಾಂಗಣ, 4 ಕೊಠಡಿ ಇದ್ದು, ನಾಲ್ಕು ದಿಕ್ಕಿಗೆ ದ್ವಾರಗಳಿವೆ. ತೊಲೆ, ಕಿಟಕಿ, ಬಾಗಿಲುಗಳಿಗೆ ತೇಗದ ಮರ ಬಳಸಲಾಗಿದೆ. ಮಂಗಳೂರು ಹೆಂಚಿನ ಚಾವಣಿ, ಬೆಳಕು ಹಂಚು ಹೊಂದಿಸಿದ್ದು, ನೆಲಕ್ಕೆ ಕಲ್ಲುಹಾಸು ಹಾಕಲಾಗಿದೆ. ಕಟ್ಟಡವನ್ನು ಸುಣ್ಣದ ಗಾರೆಯಲ್ಲಿ ನಿರ್ಮಿಸಲಾಗಿದೆ.</p>.<p>ಹೊಸ ಆರ್ಸಿಸಿ ಕಟ್ಟಡಗಳು ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಬಿದ್ದು ಹೋಗಿವೆ. ಹಳೆ ಕಟ್ಟಡವನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕಟ್ಟಡದ ಕಿಟಕಿ, ಬಾಗಿಲು ಕದ್ದಿದ್ದಾರೆ. ಹೆಂಚುಗಳನ್ನು ಚೂರು ಚೂರು ಮಾಡಿದ್ದಾರೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿದೆ.</p>.<p>ಕಟ್ಟಡದ ನವೀಕರಣಕ್ಕೆ ಪುರಸಭೆಯು ಈಚೆಗೆ ₹ 9 ಲಕ್ಷ ಮೀಸಲಿಟ್ಟಿತ್ತು. ಹೊಸ ಕಟ್ಟಡ ನಿರ್ಮಾಣಕ್ಕೆ ₹ 30 ಲಕ್ಷ ಅನುದಾನ ನೀಡುವುದಾಗಿ ಆದೇಶ ಹೊರಡಿಸಿತ್ತು. ಆದರೆ ಯೋಜನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ನೀಡಿದ ಕಟ್ಟಡ ನವೀಕರಣದ ಭರವಸೆ ಈಡೇರಿಲ್ಲ.</p>.<p>ಹೊನ್ನಾಳಿ ಹಾಗೂ ಹರಪನಹಳ್ಳಿಯಲ್ಲಿ ಬಾಪೂಜಿ ಅವರು ಭೇಟಿ ನೀಡಿದ್ದ ಕಟ್ಟಡದ ರಕ್ಷಣೆ ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ ಬಾಪೂಜಿ ನೆನಪಿನ ಏಕ ಮಾತ್ರ ಕಟ್ಟಡವನ್ನು ರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p class="Briefhead">***</p>.<p>ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಧನ ಸಂಗ್ರಹಿಸುವ ಮೂಲಕ ಕಟ್ಟಡ ಕಟ್ಟಲು ಯೋಜನೆ ತಯಾರಿಸುತ್ತೇವೆ.<br /><em><strong>- ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ</strong></em></p>.<p>ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ. ಬಾಪೂಜಿ ಸಭಾಂಗಣ, ಗ್ರಂಥಾಲಯ ನಿರ್ಮಿಸಲು ಸಮಾನಮನಸ್ಕರ ಸಭೆ ನಡೆಸಿ ತೀರ್ಮಾನಿಸಲಾಗುವುದು.</p>.<p><em><strong>- ಬಿ.ಎಂ. ವಾಗೀಶ್ ಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>- ಎಂ. ನಟರಾಜನ್</strong></em></p>.<p><strong>ಮಲೇಬೆನ್ನೂರು: </strong>ಇಲ್ಲಿನ ಸ್ವಾಂತಂತ್ರ್ಯ ಪೂರ್ವದ ‘ಬಾಪೂಜಿ ಹಾಲ್’ ಸೂಕ್ತ ಪಾಲನೆ ಇಲ್ಲದೆ ಅವಸಾನದ ಅಂಚು ತಲುಪಿದೆ.</p>.<p>ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮಹಾತ್ಮ ಗಾಂಧಿ ಅವರು 1927ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಇಲ್ಲಿ ಭಾಷಣ ಮಾಡಿದ್ದರು. ಬ್ರಿಟಿಷ್ ಸೇನಾಧಿಕಾರಿಗಳು ಇಲ್ಲಿ ಕುದುರೆಗಳನ್ನು ಕಟ್ಟುತ್ತಿದ್ದರು. ಕಾಲಾನುಕ್ರಮದಲ್ಲಿ ಪ್ರವಾಸಿ ಬಂಗಲೆಯಾಗಿತ್ತು.</p>.<p>ದೊಡ್ಡ ಸಭಾಂಗಣ, 4 ಕೊಠಡಿ ಇದ್ದು, ನಾಲ್ಕು ದಿಕ್ಕಿಗೆ ದ್ವಾರಗಳಿವೆ. ತೊಲೆ, ಕಿಟಕಿ, ಬಾಗಿಲುಗಳಿಗೆ ತೇಗದ ಮರ ಬಳಸಲಾಗಿದೆ. ಮಂಗಳೂರು ಹೆಂಚಿನ ಚಾವಣಿ, ಬೆಳಕು ಹಂಚು ಹೊಂದಿಸಿದ್ದು, ನೆಲಕ್ಕೆ ಕಲ್ಲುಹಾಸು ಹಾಕಲಾಗಿದೆ. ಕಟ್ಟಡವನ್ನು ಸುಣ್ಣದ ಗಾರೆಯಲ್ಲಿ ನಿರ್ಮಿಸಲಾಗಿದೆ.</p>.<p>ಹೊಸ ಆರ್ಸಿಸಿ ಕಟ್ಟಡಗಳು ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಬಿದ್ದು ಹೋಗಿವೆ. ಹಳೆ ಕಟ್ಟಡವನ್ನು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಕಟ್ಟಡದ ಕಿಟಕಿ, ಬಾಗಿಲು ಕದ್ದಿದ್ದಾರೆ. ಹೆಂಚುಗಳನ್ನು ಚೂರು ಚೂರು ಮಾಡಿದ್ದಾರೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿದೆ.</p>.<p>ಕಟ್ಟಡದ ನವೀಕರಣಕ್ಕೆ ಪುರಸಭೆಯು ಈಚೆಗೆ ₹ 9 ಲಕ್ಷ ಮೀಸಲಿಟ್ಟಿತ್ತು. ಹೊಸ ಕಟ್ಟಡ ನಿರ್ಮಾಣಕ್ಕೆ ₹ 30 ಲಕ್ಷ ಅನುದಾನ ನೀಡುವುದಾಗಿ ಆದೇಶ ಹೊರಡಿಸಿತ್ತು. ಆದರೆ ಯೋಜನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನನೆಗುದಿಗೆ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳು ನೀಡಿದ ಕಟ್ಟಡ ನವೀಕರಣದ ಭರವಸೆ ಈಡೇರಿಲ್ಲ.</p>.<p>ಹೊನ್ನಾಳಿ ಹಾಗೂ ಹರಪನಹಳ್ಳಿಯಲ್ಲಿ ಬಾಪೂಜಿ ಅವರು ಭೇಟಿ ನೀಡಿದ್ದ ಕಟ್ಟಡದ ರಕ್ಷಣೆ ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ ಬಾಪೂಜಿ ನೆನಪಿನ ಏಕ ಮಾತ್ರ ಕಟ್ಟಡವನ್ನು ರಕ್ಷಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p class="Briefhead">***</p>.<p>ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಧನ ಸಂಗ್ರಹಿಸುವ ಮೂಲಕ ಕಟ್ಟಡ ಕಟ್ಟಲು ಯೋಜನೆ ತಯಾರಿಸುತ್ತೇವೆ.<br /><em><strong>- ಬೆಣ್ಣೆಹಳ್ಳಿ ಹಾಲೇಶಪ್ಪ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ</strong></em></p>.<p>ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ. ಬಾಪೂಜಿ ಸಭಾಂಗಣ, ಗ್ರಂಥಾಲಯ ನಿರ್ಮಿಸಲು ಸಮಾನಮನಸ್ಕರ ಸಭೆ ನಡೆಸಿ ತೀರ್ಮಾನಿಸಲಾಗುವುದು.</p>.<p><em><strong>- ಬಿ.ಎಂ. ವಾಗೀಶ್ ಸ್ವಾಮಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>