ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗಾಗಿ ಇಟ್ಟಿದ್ದ ಹಣ, ನಗದು ಕಳವು

Last Updated 16 ಜನವರಿ 2020, 9:50 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಬೇತೂರು ರಸ್ತೆಯ ಕೊರಮರ ಕಾಲೊನಿಯ ರಮೇಶ್ ಅವರ ತಂಗಿಯ ಮದುವೆಗಾಗಿ ಮನೆಯಲ್ಲಿ ಇಟ್ಟಿದ್ದ ನಗದು ಹಾಗೂ ಚಿನ್ನದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ರಮೇಶ್ ಅವರು ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳರು ಮನೆಯ ಮುಂಭಾಗದ ಗೇಟ್ ಹಾರಿ, ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ.

ಮನೆಯ ಒಳಗಡೆ ಬೀರುವಿನಲ್ಲಿದ್ದ ₹65 ಸಾವಿರ, 10 ಗ್ರಾಂ ತೂಕದ 2 ಜೊತೆ ಬೆಂಡೋಲೆ, 3 ಗ್ರಾಂ ತೂಕದ ಒಂದು ಜೊತೆ ಜುಮುಕಿ, 14 ಗ್ರಾಂ ತೂಕದ 3 ಜೊತೆ ಹ್ಯಾಂಗಿಗ್ಸ್, ಬಂಗಾರದ ಪುಡಿ ಸಾಮಾನುಗಳು ಸೇರಿ ₹ 65 ಸಾವಿರ ಮೌಲ್ಯದ ಆಭರಣವನ್ನು ದೋಚಿದ್ದಾರೆ.

ಆಜಾದ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT