<p><strong>ಚನ್ನಗಿರಿ</strong>: ‘ಮೂರು ವರ್ಷಗಳಿಂದ ಅಡಿಕೆ ಖೇಣಿದಾರರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಮೊದಲು ಅಡಿಕೆ ಖೇಣಿದಾರರು ಒಗ್ಗಟ್ಟಾಗುವುದು ಮುಖ್ಯ. ಖೇಣಿದಾರರು ಅಡಿಕೆ ತೋಟಗಳನ್ನು ಖೇಣಿ ಹಿಡಿಯಲು ಪೈಪೋಟಿ ಮಾಡಬಾರದು’ ಎಂದು ಅಡಿಕೆ ಖೇಣಿದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ತಿಳಿಸಿದರು.</p>.<p>ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಅಡಿಕೆ ಖೇಣಿದಾರರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಖೇಣಿದಾರರು ಅಡಿಕೆ ಬೆಳೆಗಾರರಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಕೆಲವು ತಾಲ್ಲೂಕುಗಳಲ್ಲಿ ಖೇಣಿದಾರರನ್ನು ಖಳನಾಯಕರು ಎಂದು ಬಿಂಬಿಸಲಾಗುತ್ತಿದೆ. ರೈತರು ಹಾಗೂ ಖೇಣಿದಾರರ ಸಂಬಂಧ ಸೌಹಾರ್ದಯುತವಾಗಿ ಇರಬೇಕು. ಹವಮಾನ ವೈಪರೀತ್ಯ, ಇಳುವರಿ ಕುಸಿತದ ಕಾರಣದಿಂದಾಗಿ ಖೇಣಿದಾರರು ಸಾಲದ ಕೂಪಕ್ಕೆ ಬೀಳುವಂತಾಗಿದೆ. ಆದ್ದರಿಂದ ಈ ಬಾರಿ ಖೇಣಿದಾರರು ಆಗಸ್ಟ್ ತಿಂಗಳವರೆಗೆ ಅಡಿಕೆ ತೋಟಗಳನ್ನು ಖೇಣಿ ಹಿಡಿಯಬಾರದು’ ಎಂದು ಹೇಳಿದರು.</p>.<p>‘ಕಾರ್ಮಿಕರ ಸಮಸ್ಯೆ, ಅಧಿಕ ತಾಪಮಾನ ಮುಂತಾದ ಕಾರಣಗಳಿಂದಾಗಿ ಅಡಿಕೆಯ ತೂಕ ಕಡಿಮೆಯಾಗಿ ಖೇಣಿದಾರರು ಸಂಕಷ್ಟಕ್ಕೆ ಈಡಾಗುವಂತಾಗಿದೆ. 1 ಕ್ವಿಂಟಲ್ ಹಸಿ ಅಡಿಕೆಗೆ 11ರಿಂದ 11.50 ಕೆ.ಜಿ ಒಣ ಅಡಿಕೆ ಸಿಗುತ್ತದೆ. ಆದರೆ, ಖೇಣಿದಾರರು 1 ಕ್ವಿಂಟಲ್ ಹಸಿ ಅಡಿಕೆಗೆ 13 ಕೆ.ಜಿ ಒಣ ಅಡಿಕೆ ನೀಡಲು ರೈತರಿಂದ ಒಪ್ಪಂದ ಮಾಡಿಕೊಂಡು ಕೊನೆಗೆ ಅಡಿಕೆ ಬೆಳೆಗಾರರಿಗೆ ಖೇಣಿ ಹಿಡಿದ ಹಣವನ್ನೂ ಕೊಡಲಾಗದೇ ಓಡಿ ಹೋಗುವಂತಾಗಿದೆ’ ಎಂದು ಜಿಲ್ಲಾ ಖೇಣಿದಾರರ ಸಂಘದ ಉಪಾಧ್ಯಕ್ಷ ನಟರಾಜ್ ಕುರ್ಕಿ ಸಂಕಷ್ಟ ಹೇಳಿಕೊಂಡರು.</p>.<p>‘ಹಾಗಾಗಿ ಅಡಿಕೆ ಖೇಣಿದಾರರ ಸಂಘ ನಿಗದಿಪಡಿಸಿದಂತೆ 1 ಕ್ವಿಂಟಲ್ ಹಸಿ ಅಡಿಕೆಗೆ 11 ಕೆ.ಜಿ ಒಣ ಅಡಿಕೆಯನ್ನು ರೈತರಿಗೆ ಕೊಡಲು ಒಪ್ಪಂದ ಮಾಡಿಕೊಂಡಾಗ ಮಾತ್ರ ರೈತರು ಹಾಗೂ ಖೇಣಿದಾರರು ಸೌಹಾರ್ದಯುತವಾಗಿ ಇರಬಹುದಾಗಿದೆ’ ಎಂದು ತಿಳಿಸಿದರು.</p>.<p>ಶಿವಕುಮಾರ್, ಮಂಜುನಾಥ್, ಸಿದ್ದೇಶ್, ಬಸವರಾಜ್, ಮದನ್ ಸಾಗರ್, ಶಿವರಾಜ್, ಮಾಲತೇಶ್, ಟಿ. ನಾಗರಾಜ್, ಕೆ.ಸಿ. ರವಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ</strong>: ‘ಮೂರು ವರ್ಷಗಳಿಂದ ಅಡಿಕೆ ಖೇಣಿದಾರರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಮೊದಲು ಅಡಿಕೆ ಖೇಣಿದಾರರು ಒಗ್ಗಟ್ಟಾಗುವುದು ಮುಖ್ಯ. ಖೇಣಿದಾರರು ಅಡಿಕೆ ತೋಟಗಳನ್ನು ಖೇಣಿ ಹಿಡಿಯಲು ಪೈಪೋಟಿ ಮಾಡಬಾರದು’ ಎಂದು ಅಡಿಕೆ ಖೇಣಿದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ತಿಳಿಸಿದರು.</p>.<p>ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಅಡಿಕೆ ಖೇಣಿದಾರರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಖೇಣಿದಾರರು ಅಡಿಕೆ ಬೆಳೆಗಾರರಿಗೆ ಮೋಸ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಕೆಲವು ತಾಲ್ಲೂಕುಗಳಲ್ಲಿ ಖೇಣಿದಾರರನ್ನು ಖಳನಾಯಕರು ಎಂದು ಬಿಂಬಿಸಲಾಗುತ್ತಿದೆ. ರೈತರು ಹಾಗೂ ಖೇಣಿದಾರರ ಸಂಬಂಧ ಸೌಹಾರ್ದಯುತವಾಗಿ ಇರಬೇಕು. ಹವಮಾನ ವೈಪರೀತ್ಯ, ಇಳುವರಿ ಕುಸಿತದ ಕಾರಣದಿಂದಾಗಿ ಖೇಣಿದಾರರು ಸಾಲದ ಕೂಪಕ್ಕೆ ಬೀಳುವಂತಾಗಿದೆ. ಆದ್ದರಿಂದ ಈ ಬಾರಿ ಖೇಣಿದಾರರು ಆಗಸ್ಟ್ ತಿಂಗಳವರೆಗೆ ಅಡಿಕೆ ತೋಟಗಳನ್ನು ಖೇಣಿ ಹಿಡಿಯಬಾರದು’ ಎಂದು ಹೇಳಿದರು.</p>.<p>‘ಕಾರ್ಮಿಕರ ಸಮಸ್ಯೆ, ಅಧಿಕ ತಾಪಮಾನ ಮುಂತಾದ ಕಾರಣಗಳಿಂದಾಗಿ ಅಡಿಕೆಯ ತೂಕ ಕಡಿಮೆಯಾಗಿ ಖೇಣಿದಾರರು ಸಂಕಷ್ಟಕ್ಕೆ ಈಡಾಗುವಂತಾಗಿದೆ. 1 ಕ್ವಿಂಟಲ್ ಹಸಿ ಅಡಿಕೆಗೆ 11ರಿಂದ 11.50 ಕೆ.ಜಿ ಒಣ ಅಡಿಕೆ ಸಿಗುತ್ತದೆ. ಆದರೆ, ಖೇಣಿದಾರರು 1 ಕ್ವಿಂಟಲ್ ಹಸಿ ಅಡಿಕೆಗೆ 13 ಕೆ.ಜಿ ಒಣ ಅಡಿಕೆ ನೀಡಲು ರೈತರಿಂದ ಒಪ್ಪಂದ ಮಾಡಿಕೊಂಡು ಕೊನೆಗೆ ಅಡಿಕೆ ಬೆಳೆಗಾರರಿಗೆ ಖೇಣಿ ಹಿಡಿದ ಹಣವನ್ನೂ ಕೊಡಲಾಗದೇ ಓಡಿ ಹೋಗುವಂತಾಗಿದೆ’ ಎಂದು ಜಿಲ್ಲಾ ಖೇಣಿದಾರರ ಸಂಘದ ಉಪಾಧ್ಯಕ್ಷ ನಟರಾಜ್ ಕುರ್ಕಿ ಸಂಕಷ್ಟ ಹೇಳಿಕೊಂಡರು.</p>.<p>‘ಹಾಗಾಗಿ ಅಡಿಕೆ ಖೇಣಿದಾರರ ಸಂಘ ನಿಗದಿಪಡಿಸಿದಂತೆ 1 ಕ್ವಿಂಟಲ್ ಹಸಿ ಅಡಿಕೆಗೆ 11 ಕೆ.ಜಿ ಒಣ ಅಡಿಕೆಯನ್ನು ರೈತರಿಗೆ ಕೊಡಲು ಒಪ್ಪಂದ ಮಾಡಿಕೊಂಡಾಗ ಮಾತ್ರ ರೈತರು ಹಾಗೂ ಖೇಣಿದಾರರು ಸೌಹಾರ್ದಯುತವಾಗಿ ಇರಬಹುದಾಗಿದೆ’ ಎಂದು ತಿಳಿಸಿದರು.</p>.<p>ಶಿವಕುಮಾರ್, ಮಂಜುನಾಥ್, ಸಿದ್ದೇಶ್, ಬಸವರಾಜ್, ಮದನ್ ಸಾಗರ್, ಶಿವರಾಜ್, ಮಾಲತೇಶ್, ಟಿ. ನಾಗರಾಜ್, ಕೆ.ಸಿ. ರವಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>