<p><strong>ಹೊನ್ನಾಳಿ:</strong> ಹೊನ್ನಾಳಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣವನ್ನು ದೋಚುತ್ತಿದ್ದ ಆಂಧ್ರಪ್ರದೇಶದ ಓಜಿ ಕುಪ್ಪಂ ಡಕಾಯಿತರ ಗುಂಪಿನ ಸದಸ್ಯರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದಿರುವ ಹೊನ್ನಾಳಿ ಪೊಲೀಸರು ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ.</p>.<p>ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಸುರೇಶ್ ಎಂಬುವರು ಮೆಕ್ಕೆಜೋಳ ಮಾರಿದ್ದ ₹ 3.54 ಲಕ್ಷವನ್ನು ಮಾರ್ಚ್ 1ರಂದು ಕರ್ನಾಟಕ ಬ್ಯಾಂಕ್ನಲ್ಲಿ ಡ್ರಾ ಮಾಡಿಕೊಂಡು ಬೈಕ್ನ ಕಿಟ್ನಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ಈ ಗುಂಪು ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು.</p>.<p>ಘಂಟ್ಯಾಪುರ ಗ್ರಾಮದ ಚಂದ್ರನಾಯ್ಕ್ ಎಂಬುವವರು ಮೆಕ್ಕೆಜೋಳ ಮಾರಾಟ ಮಾಡಿದ ₹ 4.85 ಲಕ್ಷ ಹಣವನ್ನು ಕೆನರಾ ಬ್ಯಾಂಕ್ನಿಂದ ಬಿಡಿಸಿಕೊಂಡು ಬರುವಾಗಲೂ ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು. ಈ ಎರಡೂ ಪ್ರಕರಣಗಳು ಹೊನ್ನಾಳಿ ಪೊಲೀಸರಿಗೆ ತಲೆನೋವಾಗಿತ್ತು.</p>.<p>ದಾವಣಗೆರೆ ಡಿಸಿಆರ್ಬಿ ಪೊಲೀಸರು ಈಚೆಗೆ ಗುಂಪಿನ ಸದಸ್ಯರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.</p>.<p>ಡಕಾಯಿತರ ಗುಂಪಿನ ಸದಸ್ಯರು ಹೊನ್ನಾಳಿಯ ಎರಡೂ ಪ್ರಕರಣಗಳಲ್ಲಿ ಬೇಕಾಗಿದ್ದರು. ಬಾಡಿ ವಾರೆಂಟ್ ಮೂಲಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಪಿಐ ದೇವರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ:</strong> ಹೊನ್ನಾಳಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣವನ್ನು ದೋಚುತ್ತಿದ್ದ ಆಂಧ್ರಪ್ರದೇಶದ ಓಜಿ ಕುಪ್ಪಂ ಡಕಾಯಿತರ ಗುಂಪಿನ ಸದಸ್ಯರನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದಿರುವ ಹೊನ್ನಾಳಿ ಪೊಲೀಸರು ಮಂಗಳವಾರ ವಿಚಾರಣೆ ಆರಂಭಿಸಿದ್ದಾರೆ.</p>.<p>ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಸುರೇಶ್ ಎಂಬುವರು ಮೆಕ್ಕೆಜೋಳ ಮಾರಿದ್ದ ₹ 3.54 ಲಕ್ಷವನ್ನು ಮಾರ್ಚ್ 1ರಂದು ಕರ್ನಾಟಕ ಬ್ಯಾಂಕ್ನಲ್ಲಿ ಡ್ರಾ ಮಾಡಿಕೊಂಡು ಬೈಕ್ನ ಕಿಟ್ನಲ್ಲಿ ಇಟ್ಟುಕೊಂಡು ಹೊರಡುವ ಸಮಯದಲ್ಲಿ ಈ ಗುಂಪು ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು.</p>.<p>ಘಂಟ್ಯಾಪುರ ಗ್ರಾಮದ ಚಂದ್ರನಾಯ್ಕ್ ಎಂಬುವವರು ಮೆಕ್ಕೆಜೋಳ ಮಾರಾಟ ಮಾಡಿದ ₹ 4.85 ಲಕ್ಷ ಹಣವನ್ನು ಕೆನರಾ ಬ್ಯಾಂಕ್ನಿಂದ ಬಿಡಿಸಿಕೊಂಡು ಬರುವಾಗಲೂ ಅವರ ಗಮನವನ್ನು ಬೇರೆಡೆ ಸೆಳೆದು ಹಣವನ್ನು ದೋಚಿದ್ದರು. ಈ ಎರಡೂ ಪ್ರಕರಣಗಳು ಹೊನ್ನಾಳಿ ಪೊಲೀಸರಿಗೆ ತಲೆನೋವಾಗಿತ್ತು.</p>.<p>ದಾವಣಗೆರೆ ಡಿಸಿಆರ್ಬಿ ಪೊಲೀಸರು ಈಚೆಗೆ ಗುಂಪಿನ ಸದಸ್ಯರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.</p>.<p>ಡಕಾಯಿತರ ಗುಂಪಿನ ಸದಸ್ಯರು ಹೊನ್ನಾಳಿಯ ಎರಡೂ ಪ್ರಕರಣಗಳಲ್ಲಿ ಬೇಕಾಗಿದ್ದರು. ಬಾಡಿ ವಾರೆಂಟ್ ಮೂಲಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಪಿಐ ದೇವರಾಜ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>