ಬಿತ್ತನೆಗೆ ಭೂಮಿ ಸ್ವಚ್ಛತೆ, ಬೇಸಾಯ, ಬೀಜ, ಗೊಬ್ಬರ, ಔಷಧ ಸಿಂಪರಣೆ ಸೇರಿ ಒಂದು ಎಕರೆಗೆ ಅಂದಾಜು ₹ 55 ಸಾವಿರ ಖರ್ಚು ಮಾಡಲಾಗಿದೆ. ಉತ್ತಮ ಫಸಲು ಬಂದಿದ್ದರೆ ಲಾಭ ಬರುತ್ತಿತ್ತು. ಆದರೆ, ಈರುಳ್ಳಿಗೆ ರೋಗ ಬಂದಿರುವುದರಿಂದ ಖರ್ಚು ಮಾಡಿದ ಹಣವೂ ಬರದಂತಾಗಿದೆ. ಸಂಬಂಧಪಟ್ಟ ಇಲಾಖೆಯವರು ಬೆಳೆ ಸಮೀಕ್ಷೆ ಮಾಡಿ, ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಈರುಳ್ಳಿ ಬೆಳೆಗಾರ, ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಹೊಸಮನೆ ಮಲ್ಲಿಕಾರ್ಜುನ, ಗಂಜೀನಹಳ್ಳಿ ಹಾಲೇಶ, ಹಂಚಿನಮನೆ ಪ್ರದೀಪ, ಎಂ. ಮನು, ಎಚ್. ರುದ್ರೇಶ, ಕುಂಬಾರ ಲೋಕೇಶ, ತೀರ್ಥಪ್ಪ ಆಗ್ರಹಿಸಿದ್ದಾರೆ.