<p><strong>ಬಸವಾಪಟ್ಟಣ</strong>: ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಪರಿಣಾಮ, ಅಡಿಕೆ ಇಳುವರಿ ಕಡಿಮೆಯಾಗಿದ್ದು, ಬೇಯಿಸಿದ ಅಡಿಕೆ ಒಣಗಿಸಲು ರೈತರು ಪೇಚಾಡುತ್ತಿದ್ದಾರೆ.</p>.<p>ಬಸವಾಪಟ್ಟಣ ಹೋಬಳಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಧಿಕ ಮಳೆಯಿಂದಾಗಿ ಇಳುವರಿಯು ಎಕರೆಗೆ //5 ಕ್ವಿಂಟಲ್ನಿಂದ 8 ಕ್ವಿಂಟಲ್ವರೆಗೆ ಇಳಿಕೆಯಾಗಿದೆ.//</p>.<p>ಮಳೆಗಾಲದಲ್ಲಿಯೇ ಅಡಿಕೆ ಕೊಯ್ಲು ಬರುವುದರಿಂದ, ಬೇಯಿಸಿದ ಅಡಿಕೆಯನ್ನು ಒಣಗಿಸಲು ಬಿಸಿಲು ಬೀಳದೇ ತೊಂದರೆಯಾಗುವುದು ಸಹಜ. ಆದರೆ ಈ ವರ್ಷ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ 15 ದಿನಗಳಿಂದ ಬಿಸಿಲಿಲ್ಲದೇ ಬೇಯಿಸಿದ ಅಡಿಕೆ ಹಾಳಾಗುತ್ತಿವೆ ಎಂದು ಇಲ್ಲಿನ ಅಡಿಕೆ ಬೆಳೆಗಾರ ಹಾಲೇಶಪ್ಪ ಹೇಳಿದರು.</p>.<p>ಮಳೆಗಾಲದಲ್ಲಿ ಬೇಯಿಸಿದ ಅಡಿಕೆ ಒಣಗಿಸಲು ಶೇಡ್ ಹೌಸ್ಗಳು ನೆರವಿಗೆ ಬರುತ್ತವೆ. ರೈತರು ಸಬ್ಸಿಡಿ ದರದಲ್ಲಿ ದೊರೆಯುವ ಶೇಡ್ ಹೌಸ್ಗಳನ್ನು ನಿರ್ಮಿಸಿಕೊಂಡು ಸುಲಭವಾಗಿ ಅಡಿಕೆ ಒಣಗಿಸಬಹುದು. ಕಣಿವೆಬಿಳಚಿಯಲ್ಲಿ ಎರಡು ವರ್ಷದಿಂದ ಶೇಡ್ ಹೌಸ್ಗಳಲ್ಲಿ ಅಡಿಕೆ ಒಣಗಿಸುತ್ತಿದ್ದೇವೆ ಎಂದು ಅಡಿಕೆ ಕೇಣಿದಾರ ಎಸ್.ಅಣ್ಣೋಜಿರಾವ್ ಹೇಳಿದರು.</p>.<p>ಯಂತ್ರಗಳಲ್ಲಿ ಸುಲಿದ ಅಡಿಕೆಯ ಸ್ವಲ್ಪ ಭಾಗ ಪುಡಿಯಾಗುತ್ತದೆ. ಇದರಿಂದ ಸಹಜವಾಗಿ ತೂಕ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ಆದರೆ ಕೈಯಿಂದ ಸುಲಿಯಲು ಕೂಲಿಕಾರರ ಕೊರತೆಯೂ ಕಾಡುತ್ತಿದೆ ಎಂದು ಇಲ್ಲಿನ ಅಡಿಕೆ ಬೆಳೆಗಾರರಾದ ಕೆ. ರುದ್ರಪ್ಪ ಮತ್ತು ಬಿ.ಚಂದ್ರಪ್ಪ ತಿಳಿಸಿದರು.</p>.<p>ಹೊಸದಾಗಿ ಅಡಿಕೆ ಸಸಿಗಳನ್ನು ನಾಟಿ ಮಾಡುವ ರೈತರಿಗೆ ಇದು ಸಕಾಲವಾಗಿದೆ. ಭೂಮಿಯಲ್ಲಿ ತೇವಾಂಶ ಉಂಟಾಗದಂತೆ ಬಸಿಗಾಲುವೆ ನಿರ್ಮಿಸಿ ಅಡಿಕೆ ಸಸಿಗಳನ್ನು ನೆಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸೌರಭ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಾಪಟ್ಟಣ</strong>: ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಪರಿಣಾಮ, ಅಡಿಕೆ ಇಳುವರಿ ಕಡಿಮೆಯಾಗಿದ್ದು, ಬೇಯಿಸಿದ ಅಡಿಕೆ ಒಣಗಿಸಲು ರೈತರು ಪೇಚಾಡುತ್ತಿದ್ದಾರೆ.</p>.<p>ಬಸವಾಪಟ್ಟಣ ಹೋಬಳಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಧಿಕ ಮಳೆಯಿಂದಾಗಿ ಇಳುವರಿಯು ಎಕರೆಗೆ //5 ಕ್ವಿಂಟಲ್ನಿಂದ 8 ಕ್ವಿಂಟಲ್ವರೆಗೆ ಇಳಿಕೆಯಾಗಿದೆ.//</p>.<p>ಮಳೆಗಾಲದಲ್ಲಿಯೇ ಅಡಿಕೆ ಕೊಯ್ಲು ಬರುವುದರಿಂದ, ಬೇಯಿಸಿದ ಅಡಿಕೆಯನ್ನು ಒಣಗಿಸಲು ಬಿಸಿಲು ಬೀಳದೇ ತೊಂದರೆಯಾಗುವುದು ಸಹಜ. ಆದರೆ ಈ ವರ್ಷ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ 15 ದಿನಗಳಿಂದ ಬಿಸಿಲಿಲ್ಲದೇ ಬೇಯಿಸಿದ ಅಡಿಕೆ ಹಾಳಾಗುತ್ತಿವೆ ಎಂದು ಇಲ್ಲಿನ ಅಡಿಕೆ ಬೆಳೆಗಾರ ಹಾಲೇಶಪ್ಪ ಹೇಳಿದರು.</p>.<p>ಮಳೆಗಾಲದಲ್ಲಿ ಬೇಯಿಸಿದ ಅಡಿಕೆ ಒಣಗಿಸಲು ಶೇಡ್ ಹೌಸ್ಗಳು ನೆರವಿಗೆ ಬರುತ್ತವೆ. ರೈತರು ಸಬ್ಸಿಡಿ ದರದಲ್ಲಿ ದೊರೆಯುವ ಶೇಡ್ ಹೌಸ್ಗಳನ್ನು ನಿರ್ಮಿಸಿಕೊಂಡು ಸುಲಭವಾಗಿ ಅಡಿಕೆ ಒಣಗಿಸಬಹುದು. ಕಣಿವೆಬಿಳಚಿಯಲ್ಲಿ ಎರಡು ವರ್ಷದಿಂದ ಶೇಡ್ ಹೌಸ್ಗಳಲ್ಲಿ ಅಡಿಕೆ ಒಣಗಿಸುತ್ತಿದ್ದೇವೆ ಎಂದು ಅಡಿಕೆ ಕೇಣಿದಾರ ಎಸ್.ಅಣ್ಣೋಜಿರಾವ್ ಹೇಳಿದರು.</p>.<p>ಯಂತ್ರಗಳಲ್ಲಿ ಸುಲಿದ ಅಡಿಕೆಯ ಸ್ವಲ್ಪ ಭಾಗ ಪುಡಿಯಾಗುತ್ತದೆ. ಇದರಿಂದ ಸಹಜವಾಗಿ ತೂಕ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ಆದರೆ ಕೈಯಿಂದ ಸುಲಿಯಲು ಕೂಲಿಕಾರರ ಕೊರತೆಯೂ ಕಾಡುತ್ತಿದೆ ಎಂದು ಇಲ್ಲಿನ ಅಡಿಕೆ ಬೆಳೆಗಾರರಾದ ಕೆ. ರುದ್ರಪ್ಪ ಮತ್ತು ಬಿ.ಚಂದ್ರಪ್ಪ ತಿಳಿಸಿದರು.</p>.<p>ಹೊಸದಾಗಿ ಅಡಿಕೆ ಸಸಿಗಳನ್ನು ನಾಟಿ ಮಾಡುವ ರೈತರಿಗೆ ಇದು ಸಕಾಲವಾಗಿದೆ. ಭೂಮಿಯಲ್ಲಿ ತೇವಾಂಶ ಉಂಟಾಗದಂತೆ ಬಸಿಗಾಲುವೆ ನಿರ್ಮಿಸಿ ಅಡಿಕೆ ಸಸಿಗಳನ್ನು ನೆಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸೌರಭ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>