<p>ಹರಿಹರ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆಗೆ ತಾಲ್ಲೂಕಿನ ಭಾನುವಳ್ಳಿ-ಲಕ್ಕಶೆಟ್ಟಿಹಳ್ಳಿ ಗ್ರಾಮಗಳ ಮಧ್ಯದ ರಸ್ತೆಯ ಕಾಲುವೆ ಸೇತುವೆ ಮಂಗಳವಾರ ಕುಸಿದು ರೈತರು ಜಮೀನುಗಳಿಗೆ ತೆರಳಲು ಅಡಚಣೆ ಉಂಟಾಗಿದೆ.</p>.<p>ಈ ಎರಡೂ ಗ್ರಾಮಗಳ ಮಧ್ಯದ ರಸ್ತೆಗೆ ಕೂಡುವ ಜಮೀನುಗಳಿಗೆ ತೆರಳುವ ಅಡ್ಡರಸ್ತೆಯಲ್ಲಿ ದೇವರಬೆಳೆಕೆರೆ ಪಿಕ್ಅಪ್ ಚಾನಲ್ ಹಾದು ಹೋಗಿದೆ. ಈ ಚಾನಲ್ ಮೇಲೆ ನಿರ್ಮಿಸಿರುವ ಸೇತುವೆ ಕುಸಿದಿದೆ. ಮಂಗಳವಾರ ಬೆಳಗಿನ ಜಾವ ಸೇತುವೆ ಕುಸಿದಿರುವ ಸಾಧ್ಯತೆ ಇದ್ದು, ಯಾವುದೇ ಜೀವ ಹಾನಿಯಾಗಿಲ್ಲ.</p>.<p>ಮಾಹಿತಿ ತಿಳಿದ ಶಾಸಕ ಬಿ.ಪಿ. ಹರೀಶ್ ಅವರು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.</p>.<p>ಸೇತುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಯಲವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಎನ್. ನಾಗರಾಜ, ಮುಖಂಡರಾದ ಗೌಡ್ರ ಪ್ರಕಾಶ್, ಸಾರಥಿ ಮುನೀಂದ್ರ, ಸುರೇಶ್ ಎನ್., ಶ್ಯಾಮನೂರು ಸಚಿನ್, ಎಂ.ಸಿ. ಗೂಳಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆಗೆ ತಾಲ್ಲೂಕಿನ ಭಾನುವಳ್ಳಿ-ಲಕ್ಕಶೆಟ್ಟಿಹಳ್ಳಿ ಗ್ರಾಮಗಳ ಮಧ್ಯದ ರಸ್ತೆಯ ಕಾಲುವೆ ಸೇತುವೆ ಮಂಗಳವಾರ ಕುಸಿದು ರೈತರು ಜಮೀನುಗಳಿಗೆ ತೆರಳಲು ಅಡಚಣೆ ಉಂಟಾಗಿದೆ.</p>.<p>ಈ ಎರಡೂ ಗ್ರಾಮಗಳ ಮಧ್ಯದ ರಸ್ತೆಗೆ ಕೂಡುವ ಜಮೀನುಗಳಿಗೆ ತೆರಳುವ ಅಡ್ಡರಸ್ತೆಯಲ್ಲಿ ದೇವರಬೆಳೆಕೆರೆ ಪಿಕ್ಅಪ್ ಚಾನಲ್ ಹಾದು ಹೋಗಿದೆ. ಈ ಚಾನಲ್ ಮೇಲೆ ನಿರ್ಮಿಸಿರುವ ಸೇತುವೆ ಕುಸಿದಿದೆ. ಮಂಗಳವಾರ ಬೆಳಗಿನ ಜಾವ ಸೇತುವೆ ಕುಸಿದಿರುವ ಸಾಧ್ಯತೆ ಇದ್ದು, ಯಾವುದೇ ಜೀವ ಹಾನಿಯಾಗಿಲ್ಲ.</p>.<p>ಮಾಹಿತಿ ತಿಳಿದ ಶಾಸಕ ಬಿ.ಪಿ. ಹರೀಶ್ ಅವರು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.</p>.<p>ಸೇತುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಯಲವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಎನ್. ನಾಗರಾಜ, ಮುಖಂಡರಾದ ಗೌಡ್ರ ಪ್ರಕಾಶ್, ಸಾರಥಿ ಮುನೀಂದ್ರ, ಸುರೇಶ್ ಎನ್., ಶ್ಯಾಮನೂರು ಸಚಿನ್, ಎಂ.ಸಿ. ಗೂಳಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>