ತೋರಣಗಟ್ಟದ ಜಿಂದಾಲ್ ಆಕ್ಸಿಜನ್ ಪ್ಲಾಂಟ್ನಿಂದ ಬೆಳಿಗ್ಗೆ 8 ಗಂಟೆಗೆ ಆಮ್ಲಜನಕ ಹೊತ್ತ ವಾಹನ ಬರಬೇಕಿತ್ತು. ಆದರೆ ನಾಲ್ಕು ಗಂಟೆ ತಡವಾಗುತ್ತದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿ ಜತೆ ಮಾತನಾಡಿ 40 ಜಂಬೋ ಸಿಲಿಂಡರ್. ರೇಣುಕಾ ಇಂಡಸ್ಟ್ರಿಯಿಂದ 100, ಸದರ್ನ್ ಆಕ್ಸಿಜನ್ ಪ್ಲಾಂಟ್ನಿಂದ 100 ಜಂಬೋ ಸಿಲಿಂಡರ್ ತರಿಸಲಾಗಿತ್ತು. ಚಿತ್ರದುರ್ಗ ಜಿಲ್ಲಾಧಿಕಾರಿಗೂ ಆಮ್ಲಜನಕ ಪೂರೈಸಲು ಕೋರಲಾಗಿತ್ತು. ಅವರು ಹೊಳಲ್ಕೆರೆಯಿಂದ 4, ಚಿತ್ರದುರ್ಗದಿಂದ 6 ಒಟ್ಟು 10 ಸಿಲಿಂಡರ್ ಕಳುಹಿಸಿದ್ದರು. ಜತೆಗೆ ಜಿಂದಾಲ್ನಿಂದ ಟ್ಯಾಂಕರ್ ಅನ್ನು ಆದಷ್ಟು ಬೇಗ ಕಳುಹಿಸಲು ಕೋರಲಾಗಿತ್ತು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.