<p><strong>ಧರ್ಮಪುರ</strong>: ‘ರತ್ನಾಕರ ಎನ್ನುವ ದರೋಡೆಕೋರ ವಾಲ್ಮೀಕಿಯಾದಂತೆ ತಪ್ಪು ಮಾಡುವ ಮನುಷ್ಯ ಸನ್ಮಾರ್ಗಕ್ಕೆ ಬರಲು ಹಲವು ದಾರಿಗಳಿವೆ. ತಪ್ಪು ತಿದ್ದಿ ನಡೆಯಬೇಕು. ಸಮಾಜದಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಚಿತ್ರದುರ್ಗದ ರಾಮಕೃಷ್ಣ, ಸ್ವಾಮಿ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಬ್ರಹ್ಮ ನಿಷ್ಟಾನಂದ ತಿಳಿಸಿದರು.</p>.<p>ಸಮೀಪದ ಮದ್ದಿಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮನೆ ಮನೆಗೆ ಶ್ರೀಮಾತೆ ಶಾರದಾದೇವಿ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಮಕೃಷ್ಣ, ಸ್ವಾಮಿ ವಿವೇಕಾನಂದ ಮತ್ತು ಶಾರದಾ ದೇವಿಯವರ ಜೀವನ ಆದರ್ಶಗಳನ್ನು ಯುವಕರು ತಿಳಿದುಕೊಳ್ಳಬೇಕು. ಅರಿಷಡ್ವರ್ಗಗಳನ್ನು ಮಿತ್ರರನ್ನಾಗಿ ಮಾಡಿಕೊಂಡು ಸನ್ಮಾರ್ಗದ ಕಡೆ ಹೋಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.</p>.<p>ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬುಡೇನ್ ಸಾಬ್, ಜಾಕೀರ್ ಹುಸೇನ್, ಸ್ವಾಮಿ ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷ ಪರಮೇಶ್ವರ, ಶಿವಕುಮಾರ್, ನಾಗರಾಜ, ಜಗನ್ನಾಥ್, ಬೋಜರಾಜ, ಸಿದ್ದಪ್ಪ, ಮಂಜು, ಕೆಂಚಮ್ಮ, ಗೌರಮ್ಮ, ಮಹಾದೇವಮ್ಮ, ಪವಿತ್ರಾ, ರಮ್ಯಾ, ರಘು, ದರ್ಶನ್ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಪುರ</strong>: ‘ರತ್ನಾಕರ ಎನ್ನುವ ದರೋಡೆಕೋರ ವಾಲ್ಮೀಕಿಯಾದಂತೆ ತಪ್ಪು ಮಾಡುವ ಮನುಷ್ಯ ಸನ್ಮಾರ್ಗಕ್ಕೆ ಬರಲು ಹಲವು ದಾರಿಗಳಿವೆ. ತಪ್ಪು ತಿದ್ದಿ ನಡೆಯಬೇಕು. ಸಮಾಜದಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಚಿತ್ರದುರ್ಗದ ರಾಮಕೃಷ್ಣ, ಸ್ವಾಮಿ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಬ್ರಹ್ಮ ನಿಷ್ಟಾನಂದ ತಿಳಿಸಿದರು.</p>.<p>ಸಮೀಪದ ಮದ್ದಿಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮನೆ ಮನೆಗೆ ಶ್ರೀಮಾತೆ ಶಾರದಾದೇವಿ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಮಕೃಷ್ಣ, ಸ್ವಾಮಿ ವಿವೇಕಾನಂದ ಮತ್ತು ಶಾರದಾ ದೇವಿಯವರ ಜೀವನ ಆದರ್ಶಗಳನ್ನು ಯುವಕರು ತಿಳಿದುಕೊಳ್ಳಬೇಕು. ಅರಿಷಡ್ವರ್ಗಗಳನ್ನು ಮಿತ್ರರನ್ನಾಗಿ ಮಾಡಿಕೊಂಡು ಸನ್ಮಾರ್ಗದ ಕಡೆ ಹೋಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.</p>.<p>ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬುಡೇನ್ ಸಾಬ್, ಜಾಕೀರ್ ಹುಸೇನ್, ಸ್ವಾಮಿ ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷ ಪರಮೇಶ್ವರ, ಶಿವಕುಮಾರ್, ನಾಗರಾಜ, ಜಗನ್ನಾಥ್, ಬೋಜರಾಜ, ಸಿದ್ದಪ್ಪ, ಮಂಜು, ಕೆಂಚಮ್ಮ, ಗೌರಮ್ಮ, ಮಹಾದೇವಮ್ಮ, ಪವಿತ್ರಾ, ರಮ್ಯಾ, ರಘು, ದರ್ಶನ್ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>