<p><strong>ಹರಿಹರ:</strong> ‘ವಿವಾಹವೂ ಸೇರಿ ಇತರೆ ಶುಭ ಸಮಾರಂಭಗಳನ್ನು ಸರಳವಾಗಿ ಆಚರಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.</p>.<p>ನಗರದ ಬೆಂಕಿನಗರದಲ್ಲಿ ಗೌಸಿಯಾ ವೃತ್ತದ ನೌಜವಾನ್ ಗ್ರೂಪ್ನಿಂದ ಬುಧವಾರ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪ್ರವಾದಿ ಮೊಹಮ್ಮದ್ ಅವರು ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆ. ಮೊಹಮ್ಮದ ಅವರನ್ನು ಅತಿಯಾಗಿ ಪ್ರೀತಿಸುವ ನಾವು ಅವರ ಆದರ್ಶಗಳನ್ನು ಬದುಕಿನಲ್ಲಿ ಏಕೆ ಅಳವಡಿಸಿಕೊಲ್ಳುವುದಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಮಧ್ಯಮ, ಬಡ ವರ್ಗದವರು ಮಕ್ಕಳ ಮದುವೆಗಾಗಿಯೇ ಲಕ್ಷಾಂತರ ಹಣ ಸಾಲ ಮಾಡಿ ಅದನ್ನು ತೀರಿಸಲು ವರ್ಷಗಟ್ಟಲೆ ಜೀತದಂತೆ ದುಡಿಯುತ್ತಾರೆ. ಶ್ರೀಮಂತರೂ ತಮ್ಮ ಕುಟುಂಬದವರ ಮದುವೆ ಇತರೆ ಸಮಾರಂಭಗಳನ್ನು ಸರಳವಾಗಿ ಆಚರಿಸಿ ಸಮುದಾಯಕ್ಕೆ ಮಾದರಿಯಾಗಬೇಕು’ ಎಂದು ಹೇಳಿದರು.</p>.<p>ಮದುವೆಗೆ ಬಂದಿದ್ದ ವಧು ಮತ್ತು ವರನ ಕಡೆಯವರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅಂಜುಮನ್ ಸಂಸ್ಥೆ ನಿರ್ದೇಶಕ ಗೌಸ್, ನಗರಸಭಾ ಸದಸ್ಯರಾದ ಎಂ.ಎಸ್.ಬಾಬುಲಾಲ್, ಬಿ.ಅಲ್ತಾಫ್, ಮುಖಂಡರಾದ ಕೇಟ್ಲಿ ರೆಹಮಾನ್, ಸೈಯದ್ ಸನಾವುಲ್ಲಾ, ಆಸಿಫ್ ಅಲಿ ಪೈಲ್ವಾನ್, ದಾದಾಪೀರ್ ಭಾನುವಳ್ಳಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ‘ವಿವಾಹವೂ ಸೇರಿ ಇತರೆ ಶುಭ ಸಮಾರಂಭಗಳನ್ನು ಸರಳವಾಗಿ ಆಚರಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.</p>.<p>ನಗರದ ಬೆಂಕಿನಗರದಲ್ಲಿ ಗೌಸಿಯಾ ವೃತ್ತದ ನೌಜವಾನ್ ಗ್ರೂಪ್ನಿಂದ ಬುಧವಾರ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಪ್ರವಾದಿ ಮೊಹಮ್ಮದ್ ಅವರು ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆ. ಮೊಹಮ್ಮದ ಅವರನ್ನು ಅತಿಯಾಗಿ ಪ್ರೀತಿಸುವ ನಾವು ಅವರ ಆದರ್ಶಗಳನ್ನು ಬದುಕಿನಲ್ಲಿ ಏಕೆ ಅಳವಡಿಸಿಕೊಲ್ಳುವುದಿಲ್ಲ’ ಎಂದು ಪ್ರಶ್ನಿಸಿದರು.</p>.<p>‘ಮಧ್ಯಮ, ಬಡ ವರ್ಗದವರು ಮಕ್ಕಳ ಮದುವೆಗಾಗಿಯೇ ಲಕ್ಷಾಂತರ ಹಣ ಸಾಲ ಮಾಡಿ ಅದನ್ನು ತೀರಿಸಲು ವರ್ಷಗಟ್ಟಲೆ ಜೀತದಂತೆ ದುಡಿಯುತ್ತಾರೆ. ಶ್ರೀಮಂತರೂ ತಮ್ಮ ಕುಟುಂಬದವರ ಮದುವೆ ಇತರೆ ಸಮಾರಂಭಗಳನ್ನು ಸರಳವಾಗಿ ಆಚರಿಸಿ ಸಮುದಾಯಕ್ಕೆ ಮಾದರಿಯಾಗಬೇಕು’ ಎಂದು ಹೇಳಿದರು.</p>.<p>ಮದುವೆಗೆ ಬಂದಿದ್ದ ವಧು ಮತ್ತು ವರನ ಕಡೆಯವರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅಂಜುಮನ್ ಸಂಸ್ಥೆ ನಿರ್ದೇಶಕ ಗೌಸ್, ನಗರಸಭಾ ಸದಸ್ಯರಾದ ಎಂ.ಎಸ್.ಬಾಬುಲಾಲ್, ಬಿ.ಅಲ್ತಾಫ್, ಮುಖಂಡರಾದ ಕೇಟ್ಲಿ ರೆಹಮಾನ್, ಸೈಯದ್ ಸನಾವುಲ್ಲಾ, ಆಸಿಫ್ ಅಲಿ ಪೈಲ್ವಾನ್, ದಾದಾಪೀರ್ ಭಾನುವಳ್ಳಿ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>